ಆ್ಯಪ್ನಗರ

ಪ್ರಕೃತಿಯ ಜತೆ ಬೆಳೆಗಾರರ ಸೆಣೆಸಾಟ

ದೇಶದ ತೋಟಗಾರಿಕೆ ಬೆಳೆಗಾರರು ಪ್ರಕೃತಿಯ ಜತೆ ಸೆಣೆಸಾಟ ನಡೆಸುತ್ತಿದ್ದಾರೆ. ಹವಾಮಾನ ವೈಪರೀತ್ಯದ ಈ ಸಂದರ್ಭ ತಾಂತ್ರಿಕ ಸೌಲಭ್ಯ ಹಾಗೂ ವಾಣಿಜ್ಯ ಉಪಯುಕ್ತತೆ ಪಡೆದುಕೊಳ್ಳಬೇಕು ಎಂದು ತೋಟಗಾರಿಕಾ ಸಹಾಯಕ ಮಹಾ ನಿರ್ದೇಶಕ ಡಾ.ಪಿ.ರತಿನಮ್‌ ಹೇಳಿದರು.

Vijaya Karnataka 7 Mar 2019, 5:00 am
ಚಿಕ್ಕಮಗಳೂರು : ದೇಶದ ತೋಟಗಾರಿಕೆ ಬೆಳೆಗಾರರು ಪ್ರಕೃತಿಯ ಜತೆ ಸೆಣೆಸಾಟ ನಡೆಸುತ್ತಿದ್ದಾರೆ. ಹವಾಮಾನ ವೈಪರೀತ್ಯದ ಈ ಸಂದರ್ಭ ತಾಂತ್ರಿಕ ಸೌಲಭ್ಯ ಹಾಗೂ ವಾಣಿಜ್ಯ ಉಪಯುಕ್ತತೆ ಪಡೆದುಕೊಳ್ಳಬೇಕು ಎಂದು ತೋಟಗಾರಿಕಾ ಸಹಾಯಕ ಮಹಾ ನಿರ್ದೇಶಕ ಡಾ.ಪಿ.ರತಿನಮ್‌ ಹೇಳಿದರು.
Vijaya Karnataka Web CKM-6rudrap1


ನಗರದ ಆದ್ರಿಕಾ ಹೋಟೆಲ್‌ ಸಭಾಂಗಣದಲ್ಲಿ ಕೇಂದ್ರೀಯ ಕಾಫಿ ಸಂಶೋದನಾ ಸಂಸ್ಥೆಯಿಂದ ಬುಧವಾರ ಏರ್ಪಡಿಸಿದ್ದ 23 ನೇ ತೋಟಗಾರಿಕಾ ಬೆಳೆಗಳ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು. ತೋಟಗಾರಿಕಾ ಬೆಳೆಗಳಿಗೆ ನಿರಂತರ ನೀರಾವರಿ ಸೌಲಭ್ಯ ಬಹಳ ಮುಖ್ಯ. ಪರಿಸರ ಪೂರಕವಾಗಿ ಉತ್ಪಾದನೆಅಂತರ ಹೆಚ್ಚಿಸಿಕೊಳ್ಳುವತ್ತ ಹೆಚ್ಚು ಒತ್ತು ಕೊಡಬೇಕು. ಕಳೆದ 25 ವರ್ಷಕ್ಕೆ ಹೋಲಿಸಿದರೆ ತೋಟಗಾರಿಕೆ ಬೆಳೆ ಉತ್ಪಾದನೆ ಹೆಚ್ಚಾಗಿದೆ.ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿದ್ದೇವೆ.ಆದರೆ, ಅಷ್ಟೇ ಸಮಸ್ಯೆಗಳನ್ನೂ ಎದುರಿಸುತ್ತಿದ್ದೇವೆ ಎಂದರು.

ಜಿಲ್ಲಾಧಿಕಾರಿ ಬಗಾದಿ ಗೌತಮ್‌ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆ ಭಾರತೀಯ ಕಾಫಿಯ ಜನ್ಮಸ್ಥಳ. ಜತೆಗೆ ಮೆಣಸು, ಅಡಕೆ, ರಬ್ಬರ್‌, ಟೀ, ಏಲಕ್ಕಿ ಮತ್ತಿತರೆ ತೋಟಗಾರಿಕೆ ಬೆಳೆಗಳಿಗೂ ಹೆಸರುವಾಸಿ. ತೋಟಗಾರಿಕೆ ಬೆಳೆಗಳಿಂದಲೇ ರಾಜ್ಯದ ಜಿಡಿಪಿ 4.5 ರಷ್ಟಿದೆ. ಕಾಫಿ ತೋಟಗಳು ಜಿಲ್ಲೆಗೆ ಹಸಿರು ಹೊದಿಕೆ ಹಾಸಿದ್ದು ಇವು ಪರಿಸರ ಪೂರಕವಾಗಿವೆ. ಪರಿಸರ, ಜೀವವೈವಿಧÜ್ಯತೆಯ ಸಂರಕ್ಷಣೆ, ಪಶ್ಚಿಮಘಟ್ಟ ಪರಿಸರ ಸೂಕ್ಷ್ಮತೆಯನ್ನು ಕಾಯ್ದುಕೊಳ್ಳುವಲ್ಲಿ ಕಾಫಿ ಪ್ರಮುಖ ಪಾತ್ರ ವಹಿಸಿವೆ ಎಂದರು.

ಜಿಲ್ಲೆಯಲ್ಲಿ ಸಾಕಷ್ಟು ಉದ್ಯೋಗವಕಾಶಗಳನ್ನು ಸೃಷ್ಟಿಸಿರುವ ಕಾಫಿ ಉದ್ಯಮ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ.ಕೌಶಲ್ಯಭರಿತ ಕಾರ್ಮಿಕರ ಕೊರತೆ, ಹವಾಮಾನ ವೈಪರಿತ್ಯ, ಕೀಟಬಾಧೆ ಈ ಉದ್ಯಮವನ್ನು ದುರ್ಬಲಗೊಳಿಸಿದೆ. ಹವಾಮಾನ ವೈಪರಿತ್ಯದಿಂದ ಉತ್ಪಾದನೆ ಮತ್ತು ಲಾಭದಾಯಕ ಸ್ಥಿತಿಯನ್ನು ಸ್ಥಿರಪಡಿಸಿಕೊಳ್ಳುವ ಬಗ್ಗೆ ತಾಂತ್ರಿಕ ಸಂಶೋಧನೆ ನಡೆಯಬೇಕು. ಸಂಬಂಧಿಸಿದ ವಿಷಯಗಳ ಮೇಲೆ ನಿರ್ಧಿಷ್ಟ ಸಂಶೋದನೆ ನಡೆದು ರೈತ ಬೆಳೆಗಾರರಿಗೆ ಅನುಕೂಲ ಕಲ್ಪಿಸಬೇಕಿದೆ ಎಂದು ಹೇಳಿದರು.

ಐಸಿಎಆರ್‌, ಸಿಪಿಸಿ ಆರ್‌ಐ ಮಾಜಿ ನಿರ್ದೇಶಕ ಕೆಯುಕೆ ನಂಬೂದರಿ ತೆಂಗು ಕೃಷಿ ಸಂಶೋದನೆ ಮತ್ತು ಅಭಿವೃದ್ಧಿ ಬಗ್ಗೆ ಮಾತನಾಡಿ, ತೆಂಗಿನ ಎಣ್ಣೆ ಬಹು ಉಪಯೋಗಿಯಾಗಿದೆ. ಆದರೆ, ಸ್ಥಳೀಯ ಮಾರುಕಟ್ಟೆಯಲ್ಲಿ ಲಾಭ ಪಡೆಯುವಲ್ಲಿ ವಿಫಲವಾಗಿದ್ದೇವೆ. ತೆಂಗು ಮತ್ತು ತಾಳೆ ಬೆಳೆ ಬಗ್ಗೆ ವಿವಿಧ ಹಂತದಲ್ಲಿ ಸಂಶೋದನೆ ನಡೆಸಿ 4-5 ಪುಸ್ತಕ ಬಿಡುಗಡೆಯಾಗಿವೆ. ಇಂತಹ ವಿಚಾರ ಸಂಕಿರಣಗಳು ತೆಂಗು ಅಭಿವೃದ್ಧಿಗೆ ಹೆಚ್ಚು ಸಹಕಾರಿಯಾಗಲಿ ಎಂದು ಹೇಳಿದರು. ಐಎಸ್‌ಪಿಸಿ ಅಧ್ಯಕ್ಷ ಡಾ.ಪಿ.ಚೌಡಪ್ಪ, ಕಾಫಿ ಸಂಶೋಧನಾ ಕೇಂದ್ರದ ರಘುರಾಮುಲು, ಡಾ.ಸೂರ್ಯಪ್ರಕಾಶ್‌ರಾವ್‌ ಮತ್ತಿತರರು ಹಾಜರಿದ್ದರು.

--------

ಕಾಫಿ ಸಂಶೋಧÜನೆ 95 ವರ್ಷದಿಂದ ನಡೆಯುತ್ತಿದೆ. ಮೂರು ಜಿಲ್ಲೆಗಳ 950 ಹಳ್ಳಿಗಳಲ್ಲಿ 51 ಸಾವಿರ ಕಾಫಿ ಬೆಳೆಗಾರರಿದ್ದಾರೆ.ದೇಶದ ಕಾಫಿ ಉತ್ಪಾದನೆಯ ಶೇ.44 ರಲ್ಲಿ ಚಿಕ್ಕಮಗಳೂರು, ಕೊಡಗು ಮತ್ತು ಹಾಸನದ ಮೂರು ಜಿಲ್ಲೆಗಳಲ್ಲೇ ಶೇ.70 ರಷ್ಟು ಕಾಫಿ ಉತ್ಪಾದನೆಯಾಗುತ್ತಿದೆ. ಆದರೆ, ಬೆಲೆ ಕುಸಿತ, ಬೆಳೆ ಕುಂಠಿತ ಮತ್ತಿತರೆ ಕಾರಣದಿಂದ ಉದ್ಯಮ ಬಹಳ ನಷ್ಟ ಎದುರಿಸುತ್ತಿದೆ.

-ಎಂ.ಎಸ್‌.ಭೋಜೇಗೌಡ ,ಕಾಫಿ ಮಂಡಳಿ ಅಧ್ಯಕ್ಷ


--------------

ಮಧ್ಯಮ ಮತ್ತು ಸಣ್ಣ ಬೆಳೆಗಾರರು ಪ್ರಕೃತಿಯ ಜತೆ ಸೆಣೆಸಾಡುವುದು ತಪ್ಪಿಲ್ಲ. ಹವಾಮಾನ ವೈಪರಿತ್ಯದಿಂದ ಇಳುವರಿ ಕುಂಠಿತವಾಗಿ ನಷ್ಟ ಅನುಭವಿಸುವಂತಾಗಿದೆ. ಈ ನಿಟ್ಟಿನಲ್ಲಿ ಪ್ಲಾಂಟೇಶನ್‌ ಮಾಡಲು ಸೂಕ್ತ ಅನುಕೂಲತೆಗಳನ್ನು ಮೊದಲು ಗುರುತಿಸಿಕೊಳ್ಳಬೇಕು. ಯಂತ್ರೋಪಕರಣಗಳು ,ವಾಣಿಜ್ಯ ಉಪಯುಕ್ತತೆ ಸದುಪಯೋಗಪಡಿಸಿಕೊಳ್ಳಬೇಕು.

-ಡಾ.ಪಿ.ರತಿನಮ್‌,ತೋಟಗಾರಿಕಾ ಸಹಾಯಕ ಮಹಾ ನಿರ್ದೇಶಕ


--------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ