ಆ್ಯಪ್ನಗರ

ಕಾಫಿ ತೋಟದಲ್ಲಿ ಎಚ್‌ಡಿಕೆ ರೆಸ್ಟ್‌

ರಾಜ್ಯ ರಾಜಕೀಯದ ಜಂಜಾಟದಲ್ಲಿ ಬೇಸತ್ತಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅದರಿಂದ ಹೊರಬರಲು ಕಾಫಿ ತೋಟದ ಪ್ರಶಾಂತ ವಾತಾವರಣದಲ್ಲಿ ವಾಸ್ತವ್ಯ ಹೂಡಿದ್ದಾರೆ.

Vijaya Karnataka 3 Aug 2019, 8:43 pm
ಚಿಕ್ಕಮಗಳೂರು : ರಾಜ್ಯ ರಾಜಕೀಯದ ಜಂಜಾಟದಲ್ಲಿ ಬೇಸತ್ತಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅದರಿಂದ ಹೊರಬರಲು ಕಾಫಿ ತೋಟದ ಪ್ರಶಾಂತ ವಾತಾವರಣದಲ್ಲಿ ವಾಸ್ತವ್ಯ ಹೂಡಿದ್ದಾರೆ.
Vijaya Karnataka Web CKM-2ARAGAP1


ಕೊಪ್ಪ ತಾಲೂಕಿನ ಗುಡ್ಡೆತೋಟದಲ್ಲಿರುವ ಸ್ನೇಹಿತ ರತ್ನಾಕರ್‌ ಮನೆಯಲ್ಲಿರುವ ಕುಮಾರಸ್ವಾಮಿ, ಕಳೆದ ನಾಲ್ಕು ದಿನಗಳಿಂದ ಹೊರಜಗತ್ತಿನ ಜಂಜಡಗಳಿಂದ ಸಂಪೂರ್ಣ ದೂರ ಉಳಿದಿದ್ದಾರೆ. ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡ ನಂತರ ಆ ಬೇಸರದಿಂದ ಹೊರಬರಲು ಮಲೆನಾಡಿನ ದಟ್ಟ ಕಾಡೊಳಗಿನ ಕಾಫಿತೋಟದ ಮನೆಯ ಪ್ರಶಾಂತ ವಾತಾವರಣ ಆಯ್ಕೆ ಮಾಡಿಕೊಂಡಿದ್ದಾರೆ.

ಜುಲೈ 31ರಂದು ಕೆಫೆ ಕಾಫಿ ಡೇ ಮಾಲೀಕ ವಿ.ಜಿ.ಸಿದ್ದಾರ್ಥ ಹೆಗ್ಡೆ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಎಚ್‌ಡಿಕೆ ಅಲ್ಲಿಂದ ಬೆಂಗಳೂರಿಗೆ ವಾಪಸ್ಸಾಗಿಲ್ಲ. ನೇರವಾಗಿ ಗುಡ್ಡೆತೋಟದ ಸ್ನೇಹಿತನ ಮನೆಗೆ ಬಂದು ವಾಸ್ತವ್ಯ ಮಾಡಿದ್ದಾರೆ.

ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾಜಿ ಸಚಿವ ಸಾ.ರಾ.ಮಹೇಶ್‌, ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಬೋಜೇಗೌಡ ಮಾತ್ರ ಇದ್ದು, ಶನಿವಾರ ಬೆಂಗಳೂರಿಗೆ ವಾಪಸ್ಸಾಗುವ ಸಾಧ್ಯತೆ ಇದೆ. ರಾಜ್ಯ ರಾಜಕೀಯದಲ್ಲಾದ ಪಲ್ಲಟದಿಂದ ತೀವ್ರ ನೊಂದಿದ್ದ ಎಚ್‌ಡಿಕೆ ಇದರಿಂದ ಹೊರಬರುವ ಪ್ರಯತ್ನ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ