ಆ್ಯಪ್ನಗರ

ಮೃತ ರೈತರ ಮನೆಗೆ ಎಚ್‌ಡಿಕೆ ಭೇಟಿ

ಕಳಸ ಸಮೀಪದ ಎಸ್‌.ಕೆ.ಮೇಗಲ್‌ ಮತ್ತು ಕಾರಗದ್ದೆಯಲ್ಲಿಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭಾನುವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

Vijaya Karnataka 7 Oct 2019, 5:00 am
ಕಳಸ (ಚಿಕ್ಕಮಗಳೂರು) : ಕಳಸ ಸಮೀಪದ ಎಸ್‌.ಕೆ.ಮೇಗಲ್‌ ಮತ್ತು ಕಾರಗದ್ದೆಯಲ್ಲಿಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭಾನುವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
Vijaya Karnataka Web hdk visits dead farmers home
ಮೃತ ರೈತರ ಮನೆಗೆ ಎಚ್‌ಡಿಕೆ ಭೇಟಿ


ಎಸ್‌.ಕೆ.ಮೇಗಲ್‌ನಲ್ಲಿಆತ್ಮಹತ್ಯೆ ಮಾಡೊಕೊಂಡ ರೈತ ಚಂದ್ರೇಗೌಡರ ಮನೆಗೆ ಭೇಟಿ ನೀಡಿ ಕುಟುಂಬದ ಜತೆ ಮಾತನಾಡಿದರು. ಈ ಸಂದರ್ಭದಲ್ಲಿಕಷ್ಟದಲ್ಲಿಜೀವನ ಮಾಡುತ್ತಿರುವ ನಮ್ಮ ಜಮೀನು ಈ ಬಾರಿಯ ನೆರೆಯಲ್ಲಿಕೊಚ್ಚಿಹೋಗಿದೆ. ಪರಿಹಾರದ ಹಣವೂ ಬರದೆ ಇರುವುದರಿಂದ ಇಂತಹ ಕೆಟ್ಟ ನಿರ್ಧಾರಕ್ಕೆ ಬಂದು ಪ್ರಾಣ ಕಳಕೊಂಡಿದ್ದಾರೆ. ಈ ವರೆಗೂ ಯಾವುದೇ ಪರಿಹಾರ ನಮ್ಮ ಕೈ ಸೇರಿಲ್ಲ. ಅಲ್ಲದೆ ನಮ್ಮ ಜಮೀನನ್ನು ಇನ್ನೂ ಕೂಡ ಖಾತೆ ಮಾಡಿಕೋಳ್ಳಲು ಸಾಧ್ಯವಾಗಿಲ್ಲಎಂದು ಚಂದ್ರೇಗೌಡರ ಕುಟುಂಬ ಎಚ್‌.ಡಿ.ಕುಮಾರಸ್ವಾಮಿ ಅವರ ಬಳಿ ಹೇಳಿಕೊಂಡರು.

ಸಮಸ್ಯೆಗೆ ಯಾವತ್ತೂ ಆತ್ಮಹತ್ಯೆ ಪರಿಹಾರವಲ್ಲ. ಈ ಬಾಗದ ಜಿಲ್ಲಾಧಿಕಾರಿಗಳ ಬಳಿ ಮಾತನಾಡಿದ್ದೇನೆ. ಎರಡೇ ದಿನದಲ್ಲಿಸರಕಾರ ಕೊಡುವ 5 ಲಕ್ಷ ಪರಿಹಾರ ನಿಮಗೆ ಸಿಗಲಿದೆ ಎಂದರು.

ಈ ಸಂದರ್ಭ ವಯಕ್ತಿಕವಾಗಿ 2ಲಕ್ಷ ರೂ.ಗಳ ಚೆಕ್‌ ನೀಡಿದರು. ಹಾಗೇಯೆ ಚಂದ್ರೇಗೌಡರ ಸೊಸೆಗೆ ಕೆಲಸ ಕೊಡುವ ಭರವಸೆ ನೀಡಿದರು. ಅಲ್ಲದೆ ಇದೇ ಸಂದರ್ಭದಲ್ಲಿಕಳಸ ಕೆಸಿಎ ಬ್ಯಾಂಕ್‌ ವತಿಯಿಂದ 25 ಸಾವಿರ ರೂ.ಗಳ ಚೆಕ್‌ ಕೂಡ ಮೃತರ ಕುಟುಂಬಕ್ಕೆ ನೀಡಲಾಯಿತು.

ಕಾರಗದ್ದೆಯಲ್ಲಿಆತ್ಮಹತ್ಯೆ ಮಾಡಿಕೊಂಡ ರೈತ ಚನ್ನಯ್ಯ ಅವರ ಮನೆಗೂ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ನೀಡಿದರು. ಮಕ್ಕಳಂತೆ ಪ್ರೀತಿಯಿಂದ ಬೆಳೆಸಿದ್ದ ಬೆಳೆ ಕಣ್ಣೇದುರಿಗೆ ಕೊಚ್ಚಿ ಹೋದ ಕಾರಣಕ್ಕೆ ನಮ್ಮೆಜಮಾನ್ರು ಮಾನಸೀಕವಾಗಿ ತುಂಬಾ ನೊಂದಿದ್ದರು. ಇದೇ ಚಿಂತೆಯಲ್ಲಿಯಾರೂ ಇಲ್ಲದ ಸಂದರ್ಭ ತೋಟದಲ್ಲಿಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಎಂದು ಚನ್ನಪ್ಪ ಗೌಡರ ಪತ್ನಿ ಕಣ್ಣೀರಿಟ್ಟರು. ಈ ಸಂದರ್ಭದಲ್ಲಿಸಾಂತ್ವನ ಹೇಳಿದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೂ ವೈಯಕ್ತಿಕವಾಗಿ ಒಂದು ಲಕ್ಷ ರೂ. ಚೆಕ್‌ ನೀಡಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ