ಆ್ಯಪ್ನಗರ

ಶೃಂಗೇರಿ: ಅಕಾಲಿಕ ಮಳೆ, ಪ್ರತೀಕೂಲ ವಾತಾವರಣ, ತರಕಾರಿ ಬಲು ದುಬಾರಿ

ತರಕಾರಿ ಆರಂಭದ ದರವೇ 40 ಆಗಿದ್ದು, ಗ್ರಾಹಕರ ಕೈಸುಡುತ್ತಿದೆ. ಟೊಮೆಟೊ 70, ಬೀಟ್‌ರೂಟ್‌ 40, ಬೀನ್ಸ್‌ 80, ಮೂಲಂಗಿ 45, ಕ್ಯಾರೆಟ್‌ 70, ಬೆಂಡೆಕಾಯಿ 80, ಹೂಕೋಸು 60, ಸಾಂಬಾರು ಸೌತೆ 50, ಅಲೂಗೆಡ್ಡೆ 50, ಹಸಿ ಮೆಣಸು 60, ಈರುಳ್ಳಿ 60 ದರವಿದೆ.

Vijaya Karnataka 25 Nov 2021, 8:02 pm
ಶೃಂಗೇರಿ: ಅಕಾಲಿಕ ಮಳೆ, ಪ್ರತಿಕೂಲ ವಾತಾವರಣದಿಂದ ತರಕಾರಿ ಬೆಳೆ ನೆಲಕಚ್ಚಿದ್ದು, ದರ ಏರಿಕೆ ಗ್ರಾಹಕರಿಗೆ ದುಬಾರಿಯಾಗಿದೆ.
Vijaya Karnataka Web ತರಕಾರಿ
ತರಕಾರಿ


ತಾಲೂಕಿಗೆ ಬಹುತೇಕ ತರಕಾರಿ ಚಿಕ್ಕಮಗಳೂರು, ಬೇಲೂರು ಕಡೆಯಿಂದ ಬರುತ್ತಿದೆ. ತಾಲೂಕಿನಲ್ಲಿಅತಿಯಾದ ಮಳೆ, ಪ್ರತಿಕೂಲ ವಾತಾವರಣ, ಕಾಡು ಪ್ರಾಣಿಗಳ ಉಪಟಳದಿಂದ ತರಕಾರಿ ಬೆಳೆಯುವ ರೈತರ ಸಂಖ್ಯೆ ಕಡಿಮೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಬಿಡುವಿನ ನಂತರ ಇದೀಗ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ತರಕಾರಿ ಬೇಡಿಕೆ ಹೆಚ್ಚಿದೆ. ಅಡಕೆ ಕೊಯಿಲು ಆರಂಭವಾಗಿರುವ ಹಿನ್ನೆಲೆಯಲ್ಲಿ ರೈತರ ಮನೆಯಲ್ಲಿ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಬೇಕಿದೆ. ತರಕಾರಿ ದುಬಾರಿಯಾದರೂ ಕೊಂಡೊಯ್ಯಬೇಕಿದೆ. ಕೋವಿಡ್‌ ನಂತರ ವಿವಾಹ, ಸಭೆ ಸಮಾರಂಭಗಳು ನಡೆಯುತ್ತಿದ್ದು, ಹಲವು ಪಟ್ಟು ದರ ಏರಿಕೆಯಿಂದ ಖರ್ಚು ಹೆಚ್ಚುತ್ತಿದೆ.

ಚಿಕ್ಕಮಗಳೂರು: ಪರಿಷತ್‌ ಚುನಾವಣೆಯಲ್ಲಿ ಕೋಟಿ ಕುಳಗಳ ಬಿಗ್‌ ಫೈಟ್‌

ಪ್ರತಿ ಸೋಮವಾರ ವಾರದ ಸಂತೆ ನಡೆಯುತ್ತಾದರೂ, ಈ ವಾರ ತರಕಾರಿ ದರ ಹೆಚ್ಚಳವಾಗಿದ್ದರಿಂದ ಮಾರಾಟಗಾರರು ಕಡಿಮೆ ತರಕಾರಿ ತಂದು ಮಾರಾಟ ಮಾಡುತ್ತಿದ್ದುದು ಕಂಡು ಬಂತು. ತರಕಾರಿ ಸಾಮಾನ್ಯ ದರಕ್ಕಿಂತ ಹಲವು ಪಟ್ಟು ಏರಿಕೆಯಾಗಿದೆ. ತರಕಾರಿ ಆರಂಭದ ದರವೇ 40 ಆಗಿದ್ದು, ಗ್ರಾಹಕರ ಕೈಸುಡುತ್ತಿದೆ. ಟೊಮೆಟೊ 70, ಬೀಟ್‌ರೂಟ್‌ 40, ಬೀನ್ಸ್‌ 80, ಮೂಲಂಗಿ 45, ಕ್ಯಾರೆಟ್‌ 70, ಬೆಂಡೆಕಾಯಿ 80, ಹೂಕೋಸು 60, ಸಾಂಬಾರು ಸೌತೆ 50, ಅಲೂಗೆಡ್ಡೆ 50, ಹಸಿ ಮೆಣಸು 60, ಈರುಳ್ಳಿ 60 ದರವಿದೆ.

ಚಿಕ್ಕಮಗಳೂರಿನಲ್ಲಿ ವರುಣನ ಅಬ್ಬರಕ್ಕೆ ಕೊಚ್ಚಿ ಹೋಯ್ತು ಮಲೆನಾಡಿಗರ ಬದುಕು

ಕಳೆದ ಒಂದು ತಿಂಗಳಿಂದ ದರ ಏರುಗತಿಯಲ್ಲಿದ್ದು, ತರಕಾರಿ ಮಾರಾಟ ಮಾಡುವುದಕ್ಕೆ ಬೇಸರ ಎನಿಸುತ್ತಿದೆ. ವಿವಾಹ ಹಾಗೂ ಶುಭ ಸಮಾರಂಭಗಳು ನಡೆಯುತ್ತಿದ್ದು, ಕುಸಿತವಾಗಿದ್ದ ತರಕಾರಿ ಮಾರಾಟ ಚುರುಕುಗೊಂಡಿದೆ. ಆದರೆ, ಅತಿವೃಷ್ಟಿಯಿಂದ ತರಕಾರಿ ಬೆಳೆ ಕೊಳೆತಿದ್ದು ಬೆಳೆ ಕುಸಿತವಾಗಿದೆ ಎಂದು ಹೇಳುತ್ತಾರೆ ಶೃಂಗೇರಿಯ ಸ್ಥಳೀಯ ತರಕಾರಿ ವ್ಯಾಪಾರಿ ಉಮೇಶ್‌.

ದರ ಏರಿಕೆಯಿಂದ ತರಕಾರಿ ಖರೀದಿ ಮಿತಗೊಳಿಸಬೇಕಿದೆ. ಸ್ಥಳೀಯವಾಗಿ ಬೇಸಿಗೆಯಲ್ಲಿ ಕೆಲ ರೈತರು ತರಕಾರಿ ಬೆಳೆಯುತ್ತಿದ್ದರೂ, ವ್ಯಾಪಾರಕ್ಕೆ ಬರುವ ತರಕಾರಿ ಹೊರಗಿನಿಂದ ಬರಬೇಕಿದೆ ಎನ್ನುವುದು ಶೃಂಗೇರಿಯ ವಸಂತ ಅವರ ಅಭಿಪ್ರಾಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ