ಆ್ಯಪ್ನಗರ

ಮಲಿನವಾಗುತ್ತಿದೆ ಹೇಮಾವತಿ ಒಡಲು ಧಿ

ಮೂಡಿಗೆರೆ ತಾಲೂಕಿನ ಕುಡಿಯುವ ನೀರಿನ ಮೂಲದ ಹೇಮಾವತಿ ನದಿಗೆ ಬಣಕಲ್‌ ಸಮೀಪ ವಾಹನಗಳನ್ನು ಇಳಿಸಿ ತೊಳೆಯಲಾಗುತ್ತಿದ್ದು, ಹೇಮಾವತಿಯ ಒಡಲು ಮಲಿನವಾಗುತ್ತಿದೆ.

Vijaya Karnataka 7 Dec 2019, 5:00 am
ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕಿನ ಕುಡಿಯುವ ನೀರಿನ ಮೂಲದ ಹೇಮಾವತಿ ನದಿಗೆ ಬಣಕಲ್‌ ಸಮೀಪ ವಾಹನಗಳನ್ನು ಇಳಿಸಿ ತೊಳೆಯಲಾಗುತ್ತಿದ್ದು, ಹೇಮಾವತಿಯ ಒಡಲು ಮಲಿನವಾಗುತ್ತಿದೆ.
Vijaya Karnataka Web 04KTG2_35
ಬಣಕಲ್‌ ಸಮೀಪ ಹೇಮಾವತಿ ನದಿಯಲ್ಲಿವಾಹನ ತೊಳೆಯುತ್ತಿರುವುದು.


ಬಣಕಲ್‌ ಪಶು ಚಿಕಿತ್ಸಾಲಯದ ಪಕ್ಕ ಸೇತುವೆ ಬಳಿ ವಾಹನಗಳನ್ನು ತೊಳೆಯಲಾಗುತ್ತಿದೆ. ಇದರಿಂದ ವಾಹನಗಳಲ್ಲಿಇರುವ ಪೆಟ್ರೋಲಿಯಂ ಉತ್ಪನ್ನಗಳು ನೀರು ಸೇರುತ್ತಿದೆ. ಬಣಕಲ್‌ ಮೂಡಿಗೆರೆ ತಾಲೂಕಿಗೆ ಹೇಮಾವತಿ ಕುಡಿಯುವ ನೀರಿನ ಮೂಲವಾಗಿದೆ. ನದಿ ಮಲಿನಗೊಂಡರೆ ಆ ನೀರನ್ನು ಕುಡಿಯುವವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ನೀರು ಕಲುಷಿತಗೊಂಡ ಪರಿಣಾಮ ಮಲೆನಾಡಿನಲ್ಲಿಮಾತ್ರಕಾಣಸಿಗುವ ಅಪರೂಪದ ಜಲಚರಗಳ ಜೀವಕ್ಕೆ ಸಂಚಕಾರ ಎದುರಾಗಿದೆ. ಅಲ್ಲದೇ ಮಲೆನಾಡಿನ ನದಿತೀರಗಳೀಗೆ ಕೆಲಕಾಲದವರೆಗೆ ವಲಸೆ ಬಂದು ಕುರುಚಲು ಪೊದೆಗಳಲ್ಲಿಗೂಡು ಕಟ್ಟಿ ಸಂತಾನೋತ್ಪತ್ತಿ ಮಾಡಿಕೊಳ್ಳುತ್ತಿದ್ದ ಹಕ್ಕಿಗಳ ಸಂಖ್ಯೆ ಕೂಡ ಕಡಿಮೆಯಾಗಿದೆ. ನದಿ ಮಲಿನಗೊಳಿಸದಂತೆ ಬಣಕಲ್‌ ಗ್ರಾಪಂ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳುವ ಅಗತ್ಯವಿದೆ.

----------

ನದಿಯಲ್ಲಿವಾಹನ ತೊಳೆಯದಂತೆ ಸೂಚನಾಫಲಕ ಅಳವಡಿಸಲಾಗುವುದು. ವಾಹನ ನದಿಯಲ್ಲಿತೊಳೆಯುವವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು.

-ಮಹೇಶ್‌,
ಪಿಡಿಓ ಬಣಕಲ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ