ಎ.ಆರ.ಉದಯಶಂಕರ್
ಮೂಡಿಗೆರೆ : ಪತ್ನಿಯ ತಲೆ ಕತ್ತರಿಸಿ ಸಿನಿಮೀಯ ರೀತಿಯಲ್ಲಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗುವ ದುರುದ್ದೇಶದೊಂದಿಗೆ ಕತ್ತಿಯಿಂದ ಹಲ್ಲೆ ನಡೆಸಿದ ಪತಿಯ ಕ್ರಮ ಪಟ್ಟಣದ ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ.
ಎಂಜಿಎಂ ಸರಕಾರಿ ಆಸ್ಪತ್ರೆಯ ಸಿಬ್ಬಂದಿ ಎಂ.ಪಿ.ವಿನುತ ಅವರ ತಲೆ ಕತ್ತರಿಸಿ ಸಿನಿಮೀಯ ರೀತಿ ಠಾಣೆಗೆ ಒಯ್ಯಲೆಂದೇ ಸೋಮವಾರ ಸಂಜೆ ಬಂದಿದ್ದ ಪತಿ ಸುಪ್ರೀತ್, ಆಸ್ಪತ್ರೆ ಆವರಣದಲ್ಲಿ ತೀವ್ರ ಹಲ್ಲೆ ನಡೆಸಿದ್ದ. ಪರಿಣಾಮವಾಗಿ ವಿನುತ ಅವರು ಜೀವನ್ಮರಣದ ಹೋರಾಟದೊಂದಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಜ್ಜಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತಿಮಹಾಶಯನೊಬ್ಬ ಇತ್ತೀಚೆಗೆ ಸಿನಿಮೀಯ ರೀತಿಯಲ್ಲಿ ತನ್ನ ಪತ್ನಿಯ ರುಂಡ ಕತ್ತರಿಸಿ ಠಾಣೆಗೆ ಕೊಂಡೊಯ್ದಿದ್ದ ಘಟನೆ ರಾಜ್ಯಾದ್ಯಂತ ಪ್ರಚಾರ ಪಡೆದಿತ್ತು. ಅಂಥದೇ ಭಯಾನಕತೆ ಪಟ್ಟಣದಲ್ಲಿ ಸ್ವಲ್ಪದರಲ್ಲಿ ತಪ್ಪಿದೆಯಾದರೂ ಜನರನ್ನು ಭಯಭೀತರಾಗುವಂತೆ ಮಾಡಿದೆ. ಸಂಭವಿಸಬಹುದಾದ ಇಂತಹ ಕೃತ್ಯಗಳ ಬಗ್ಗೆ ಪೊಲೀಸ್ ಇಲಾಖೆ ಗಂಭೀರ ಚಿಂತನೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಆಮಾಯಕ ಮಹಿಳೆಯರ ಸಾವಿನ ಸರಣಿ ಮುಂದುವರಿಯುವ ಅಪಾಯ ಇದೆ ಎಂಬ ಆತಂಕ ವ್ಯಕ್ತವಾಗಿದೆ.
ವಿನುತ ಅವರಿಗೆ ಪತಿ ಸುಪ್ರೀತ್ ಈ ಮೊದಲು ಹಲವು ಬಾರಿ ಹಲ್ಲೆ ನಡೆಸಿದ್ದ. ಬಣಕಲ್ ಮತ್ತು ಮೂಡಿಗೆರೆ ಪೊಲೀಸರಿಗೆ 4 ಬಾರಿ ದೂರು ನೀಡಲಾಗಿತ್ತು. 3 ಬಾರಿ ಪೊಲೀಸರು ರಾಜಿ ಪಂಚಾಯಿತಿ ಮಾಡಿ ಕೈ ತೊಳೆದುಕೊಂಡಿದ್ದರು. ಒಂದು ಬಾರಿ ಮೊಕದ್ದಮೆ ದಾಖಲಿಸಿಕೊಂಡಿದ್ದರು. ಪತಿಯ ಕಿರುಕುಳಕ್ಕೆ ರೋಸಿಹೋಗಿದ್ದ ವಿನುತ ಪಟ್ಟಣದಲ್ಲಿ ಇತ್ತೀಚೆಗೆ ಬಾಡಿಗೆ ಮನೆ ಮಾಡಿಕೊಂಡು ಪ್ರತ್ಯೇಕವಾಗಿ ವಾಸವಾಗಿದ್ದರು. ಸುಪ್ರೀತ್ನಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದರು ಎನ್ನಲಾಗಿದೆ.
ಬೆಟ್ಟಗೆರೆ ಗ್ರಾಮದ ಸುಪ್ರೀತ್ ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ಅಟೆಂಡರ್ ಕೆಲಸಕ್ಕೆ ಸೇರಿಕೊಂಡಿದ್ದ. ಅಲ್ಲಿನ ಜನಪ್ರತಿನಿಧಿ, ಅಧಿಕಾರಿಗಳೊಂದಿಗೆ ಆಗಾಗ ಜಗಳ ಮಾಡಿಕೊಂಡಿದ್ದರಿಂದ ಕೆಲಸದಿಂದ ತೆಗೆದುಹಾಕಲಾಗಿತ್ತು. ಬಳಿಕ ಮರದ ಮಿಲ್ವೊಂದರಲ್ಲಿ ಕೆಲಸಕ್ಕೆ ಸೇರಿದ್ದು, ಅಲ್ಲಿಂದಲೂ ಹೊರಗಟ್ಟಲಾಗಿತ್ತು. ನಂತರ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಪಟ್ಟಣಕ್ಕೆ ಸೋಮವಾರ ಬಂದಿದ್ದ ಈತ, ಪತ್ನಿಯ ತಲೆ ಕತ್ತರಿಸಿ ಠಾಣೆಗೆ ಕೊಂಡೊಯ್ಯತ್ತೇನೆಂದು ತನ್ನ ಪರಿಚಯಸ್ಥರಿಗೆ ಹೇಳಿಕೊಂಡಿದ್ದ ಎನ್ನಲಾಗಿದೆ.
ಜನರ ಧೈರ್ಯ ಜೀವ ಉಳಿಸಿತು
ಆರೋಪಿ ಸುಪ್ರೀತ್ ಸೋಮವಾರ ಸಂಜೆ ವೇಳೆಗೆ ಎಂಜಿಎಂ ಆಸ್ಪತ್ರೆ ಆವರಣಕ್ಕೆ ಕತ್ತಿ ಹಿಡಿದುಕೊಂಡು ಬಂದು ಹೊಂಚುಹಾಕಿ ಕುಳಿತಿದ್ದ. ಕೆಲಸ ಮುಗಿಸಿ ಆಸ್ಪತ್ರೆಯಿಂದ ಹೊರಬಂದ ಪತ್ನಿ ವಿನುತ ಮೇಲೆ ಏಕಾಏಕಿ ಎರಗಿ ಜುಟ್ಟು ಹಿಡಿದು ಕತ್ತಿ ಬೀಸಿದ್ದಾನೆ. ಆಕೆ ಕೈ ಅಡ್ಡ ಕೊಟ್ಟಿದ್ದರಿಂದ ಕೈಗೆ ಬಲವಾದ ಪೆಟ್ಟು ಬಿದ್ದಿದೆ. ಆಕೆ ಕೆಳಕ್ಕೆ ಬಿದ್ದಾಗ ಪುನಃ ಕತ್ತಿ ಬೀಸಿದ್ದು, ಕಾಲಿಗೆ ಗಂಭೀರ ಗಾಯವಾಗಿದೆ. ಕೂಡಲೇ ಆತನನ್ನು ಹಿಡಿಯಲು ಮುಂದಾದ ಸ್ಥಳೀಯರ ಮೇಲೂ ಕತ್ತಿ ಬೀಸಿದ್ದಾನೆ. ಅಪಾಯ ಅರಿತ ಸಾರ್ವಜನಿಕರು ಆತನೆಡೆಗೆ ಕಲ್ಲು ತೂರಿ ಹಿಡಿದು ಗೂಸಾ ಕೊಟ್ಟಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
--------------
ತಮ್ಮ ಮಗಳು ವಿನುತಳನ್ನು ಬೆಟ್ಟಗೆರೆಯ ಸುಪ್ರೀತ್ಗೆ 2016ರಲ್ಲಿ ಮದುವೆಮಾಡಿ ಕೊಡಲಾಗಿತ್ತು. ಮದುವೆಯ ನಂತರ ಕಿರುಕುಳ ನೀಡಲಾರಂಭಿಸಿದ ಸುಪ್ರೀತ್ ಹಲವು ಬಾರಿ ಹಲ್ಲೆ ನಡೆಸಿದ್ದ. ಪೊಲೀಸರು ರಾಜಿ ಮಾಡಿ ಕಳಿಸಿದ್ದರೂ ಬುದ್ಧಿ ಬಿಟ್ಟಿರಲಿಲ್ಲ. ಸೋಮವಾರ ಆಕೆಯನ್ನು ಕೊಚ್ಚಿ ಕೊಲೆ ಮಾಡಲು ಮುಂದಾಗಿದ್ದಾನೆ. ಸಾರ್ವಜನಿಕರ ಸಹಾಯದಿಂದಾಗಿ ಅದೃಷ್ಷವಶಾತ್ ಆಕೆ ಉಳಿದಿದ್ದಾಳೆ. ಮುಂದೆಯೂ ಆತನಿಂದ ಅಪಾಯವಿದೆ.
- ಪ್ರಸನ್ನ ಮಣ್ಣಿಕೆರೆ, ವಿನುತ ತಂದೆ.
ಮೂಡಿಗೆರೆ : ಪತ್ನಿಯ ತಲೆ ಕತ್ತರಿಸಿ ಸಿನಿಮೀಯ ರೀತಿಯಲ್ಲಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗುವ ದುರುದ್ದೇಶದೊಂದಿಗೆ ಕತ್ತಿಯಿಂದ ಹಲ್ಲೆ ನಡೆಸಿದ ಪತಿಯ ಕ್ರಮ ಪಟ್ಟಣದ ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ.
ಎಂಜಿಎಂ ಸರಕಾರಿ ಆಸ್ಪತ್ರೆಯ ಸಿಬ್ಬಂದಿ ಎಂ.ಪಿ.ವಿನುತ ಅವರ ತಲೆ ಕತ್ತರಿಸಿ ಸಿನಿಮೀಯ ರೀತಿ ಠಾಣೆಗೆ ಒಯ್ಯಲೆಂದೇ ಸೋಮವಾರ ಸಂಜೆ ಬಂದಿದ್ದ ಪತಿ ಸುಪ್ರೀತ್, ಆಸ್ಪತ್ರೆ ಆವರಣದಲ್ಲಿ ತೀವ್ರ ಹಲ್ಲೆ ನಡೆಸಿದ್ದ. ಪರಿಣಾಮವಾಗಿ ವಿನುತ ಅವರು ಜೀವನ್ಮರಣದ ಹೋರಾಟದೊಂದಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಜ್ಜಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತಿಮಹಾಶಯನೊಬ್ಬ ಇತ್ತೀಚೆಗೆ ಸಿನಿಮೀಯ ರೀತಿಯಲ್ಲಿ ತನ್ನ ಪತ್ನಿಯ ರುಂಡ ಕತ್ತರಿಸಿ ಠಾಣೆಗೆ ಕೊಂಡೊಯ್ದಿದ್ದ ಘಟನೆ ರಾಜ್ಯಾದ್ಯಂತ ಪ್ರಚಾರ ಪಡೆದಿತ್ತು. ಅಂಥದೇ ಭಯಾನಕತೆ ಪಟ್ಟಣದಲ್ಲಿ ಸ್ವಲ್ಪದರಲ್ಲಿ ತಪ್ಪಿದೆಯಾದರೂ ಜನರನ್ನು ಭಯಭೀತರಾಗುವಂತೆ ಮಾಡಿದೆ. ಸಂಭವಿಸಬಹುದಾದ ಇಂತಹ ಕೃತ್ಯಗಳ ಬಗ್ಗೆ ಪೊಲೀಸ್ ಇಲಾಖೆ ಗಂಭೀರ ಚಿಂತನೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಆಮಾಯಕ ಮಹಿಳೆಯರ ಸಾವಿನ ಸರಣಿ ಮುಂದುವರಿಯುವ ಅಪಾಯ ಇದೆ ಎಂಬ ಆತಂಕ ವ್ಯಕ್ತವಾಗಿದೆ.
ವಿನುತ ಅವರಿಗೆ ಪತಿ ಸುಪ್ರೀತ್ ಈ ಮೊದಲು ಹಲವು ಬಾರಿ ಹಲ್ಲೆ ನಡೆಸಿದ್ದ. ಬಣಕಲ್ ಮತ್ತು ಮೂಡಿಗೆರೆ ಪೊಲೀಸರಿಗೆ 4 ಬಾರಿ ದೂರು ನೀಡಲಾಗಿತ್ತು. 3 ಬಾರಿ ಪೊಲೀಸರು ರಾಜಿ ಪಂಚಾಯಿತಿ ಮಾಡಿ ಕೈ ತೊಳೆದುಕೊಂಡಿದ್ದರು. ಒಂದು ಬಾರಿ ಮೊಕದ್ದಮೆ ದಾಖಲಿಸಿಕೊಂಡಿದ್ದರು. ಪತಿಯ ಕಿರುಕುಳಕ್ಕೆ ರೋಸಿಹೋಗಿದ್ದ ವಿನುತ ಪಟ್ಟಣದಲ್ಲಿ ಇತ್ತೀಚೆಗೆ ಬಾಡಿಗೆ ಮನೆ ಮಾಡಿಕೊಂಡು ಪ್ರತ್ಯೇಕವಾಗಿ ವಾಸವಾಗಿದ್ದರು. ಸುಪ್ರೀತ್ನಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದರು ಎನ್ನಲಾಗಿದೆ.
ಬೆಟ್ಟಗೆರೆ ಗ್ರಾಮದ ಸುಪ್ರೀತ್ ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ಅಟೆಂಡರ್ ಕೆಲಸಕ್ಕೆ ಸೇರಿಕೊಂಡಿದ್ದ. ಅಲ್ಲಿನ ಜನಪ್ರತಿನಿಧಿ, ಅಧಿಕಾರಿಗಳೊಂದಿಗೆ ಆಗಾಗ ಜಗಳ ಮಾಡಿಕೊಂಡಿದ್ದರಿಂದ ಕೆಲಸದಿಂದ ತೆಗೆದುಹಾಕಲಾಗಿತ್ತು. ಬಳಿಕ ಮರದ ಮಿಲ್ವೊಂದರಲ್ಲಿ ಕೆಲಸಕ್ಕೆ ಸೇರಿದ್ದು, ಅಲ್ಲಿಂದಲೂ ಹೊರಗಟ್ಟಲಾಗಿತ್ತು. ನಂತರ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಪಟ್ಟಣಕ್ಕೆ ಸೋಮವಾರ ಬಂದಿದ್ದ ಈತ, ಪತ್ನಿಯ ತಲೆ ಕತ್ತರಿಸಿ ಠಾಣೆಗೆ ಕೊಂಡೊಯ್ಯತ್ತೇನೆಂದು ತನ್ನ ಪರಿಚಯಸ್ಥರಿಗೆ ಹೇಳಿಕೊಂಡಿದ್ದ ಎನ್ನಲಾಗಿದೆ.
ಜನರ ಧೈರ್ಯ ಜೀವ ಉಳಿಸಿತು
ಆರೋಪಿ ಸುಪ್ರೀತ್ ಸೋಮವಾರ ಸಂಜೆ ವೇಳೆಗೆ ಎಂಜಿಎಂ ಆಸ್ಪತ್ರೆ ಆವರಣಕ್ಕೆ ಕತ್ತಿ ಹಿಡಿದುಕೊಂಡು ಬಂದು ಹೊಂಚುಹಾಕಿ ಕುಳಿತಿದ್ದ. ಕೆಲಸ ಮುಗಿಸಿ ಆಸ್ಪತ್ರೆಯಿಂದ ಹೊರಬಂದ ಪತ್ನಿ ವಿನುತ ಮೇಲೆ ಏಕಾಏಕಿ ಎರಗಿ ಜುಟ್ಟು ಹಿಡಿದು ಕತ್ತಿ ಬೀಸಿದ್ದಾನೆ. ಆಕೆ ಕೈ ಅಡ್ಡ ಕೊಟ್ಟಿದ್ದರಿಂದ ಕೈಗೆ ಬಲವಾದ ಪೆಟ್ಟು ಬಿದ್ದಿದೆ. ಆಕೆ ಕೆಳಕ್ಕೆ ಬಿದ್ದಾಗ ಪುನಃ ಕತ್ತಿ ಬೀಸಿದ್ದು, ಕಾಲಿಗೆ ಗಂಭೀರ ಗಾಯವಾಗಿದೆ. ಕೂಡಲೇ ಆತನನ್ನು ಹಿಡಿಯಲು ಮುಂದಾದ ಸ್ಥಳೀಯರ ಮೇಲೂ ಕತ್ತಿ ಬೀಸಿದ್ದಾನೆ. ಅಪಾಯ ಅರಿತ ಸಾರ್ವಜನಿಕರು ಆತನೆಡೆಗೆ ಕಲ್ಲು ತೂರಿ ಹಿಡಿದು ಗೂಸಾ ಕೊಟ್ಟಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
--------------
ತಮ್ಮ ಮಗಳು ವಿನುತಳನ್ನು ಬೆಟ್ಟಗೆರೆಯ ಸುಪ್ರೀತ್ಗೆ 2016ರಲ್ಲಿ ಮದುವೆಮಾಡಿ ಕೊಡಲಾಗಿತ್ತು. ಮದುವೆಯ ನಂತರ ಕಿರುಕುಳ ನೀಡಲಾರಂಭಿಸಿದ ಸುಪ್ರೀತ್ ಹಲವು ಬಾರಿ ಹಲ್ಲೆ ನಡೆಸಿದ್ದ. ಪೊಲೀಸರು ರಾಜಿ ಮಾಡಿ ಕಳಿಸಿದ್ದರೂ ಬುದ್ಧಿ ಬಿಟ್ಟಿರಲಿಲ್ಲ. ಸೋಮವಾರ ಆಕೆಯನ್ನು ಕೊಚ್ಚಿ ಕೊಲೆ ಮಾಡಲು ಮುಂದಾಗಿದ್ದಾನೆ. ಸಾರ್ವಜನಿಕರ ಸಹಾಯದಿಂದಾಗಿ ಅದೃಷ್ಷವಶಾತ್ ಆಕೆ ಉಳಿದಿದ್ದಾಳೆ. ಮುಂದೆಯೂ ಆತನಿಂದ ಅಪಾಯವಿದೆ.
- ಪ್ರಸನ್ನ ಮಣ್ಣಿಕೆರೆ, ವಿನುತ ತಂದೆ.