ಚಿಕ್ಕಮಗಳೂರು : ದೇಶದ ಹಾಗೂ ರಾಜ್ಯದ ಇತಿಹಾಸ ಮರೆತವರು ಇತಿಹಾಸ ಸೃಷ್ಠಿಸಲು ಸಾಧ್ಯವಿಲ್ಲ ಎಂದು ನಿವೃತ್ತ ಉಪನ್ಯಾಸಕ ಬಿ.ತಿಪ್ಪೇರುದ್ರಪ್ಪ ಅಭಿಪ್ರಾಯಿಸಿದರು.
ನಗರದ ಕುವೆಂಪು ಕಲಾಮಂದಿರದ ಹೇಮಾಂಗಣದಲ್ಲಿ ಜಿಲ್ಲಾ ಕರ್ನಾಟಕ ರಕ್ಷ ಣಾ ವೇದಿಕೆಯಿಂದ ಮಂಗಳವಾರ ಏರ್ಪಡಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 135ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ವನಮನ ಸಲ್ಲಿಸಿ ಮಾತನಾಡಿದರು. ಇಂದಿನ ಯುವ ಪೀಳಿಗೆಗೆ ಇತ್ತೀಚಿನ ಕನ್ನಡ ನಾಡಿನ ಜಲ, ಭಾಷೆ ಜನರ ರಕ್ಷ ಣೆಗೆ ಮೈಸೂರು ಸಂಸ್ಥಾನದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೊಟ್ಟಿರುವ ಅಪೂರ್ವ ಕೊಡುಗೆಯ ಬಗ್ಗೆ ಪರಿಚಯವೆ ಇಲ್ಲದಿರುವುದು ವಿಷಾದದ ಸಂಗತಿ ಎಂದರು.
ಇತಿಹಾಸದ ಮೂಲಕ ದೇಶದ ಮಹಾಗಣ್ಯರು ಹಾಗೂ ಅರಸರುಗಳ ಬಗ್ಗೆ ಪಠ್ಯದ ಮೂಲಕ ಈಗಿನ ಪೀಳಿಗೆಗೆ ತಿಳಿಸಿಕೊಡುವ ಅವಶ್ಯಕತೆ ಇದೆ. ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಸ್ಥಾಪನೆಗೆ ಕಾರಣಕರ್ತರಾಗಿದ್ದಾರೆ. ಕನ್ನಡ ಭಾಷೆಯ ಉಳಿವಿಗೆ ನಾಡಿನ ಆರ್ಥಿಕ ಸುವ್ಯವಸ್ಥೆಗೆ ಭದ್ರ ಬುನಾದಿ ಹಾಕಿದ್ದಾರೆ. ಕೈಗಾರಿಕೆಗಳನ್ನು ಸ್ಥಾಪಿಸಿ ಅಗತ್ಯವಾದ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಂಡರು. ಕೆರೆ ಕಟ್ಟೆಗಳನ್ನು ಕಟ್ಟಿಸಿ ಜನ ಜಾನುವಾರುಗಳಿಗೆ ನೆರೆವಾದವರು. ಅರಸು ಮನೆತನದ ಒಡವೆಗಳನ್ನು ಒತ್ತೆ ಇಟ್ಟು ಮೈಸೂರಿನ ಕನ್ನಂಬಾಡಿ ಕಟ್ಟೆ ನಿರ್ಮಿಸಿ ರೈತರ ಬದುಕು ಹಸನುಗೊಳಿಸಿದರು. ಹೆಚ್ಚಾಗಿ ಸಮ ಸಮಾಜ ನಿರ್ಮಾಣಕ್ಕೆ ಸಾಮಾಜಿಕ ನ್ಯಾಯದ ಮೀಸಲಾತಿ ತಂದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ ಎಂದರು.
ಜಿಲ್ಲಾ ಕರ್ನಾಟಕ ರಕ್ಷ ಣಾ ವೇದಿಕೆಯ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್ ಮಾತನಾಡಿ, ಸಮಾನತೆಯ ಹರಿಕಾರ, ಮೈಸೂರನ್ನು ಮಾದರಿಯಾಗಿ ನಿರ್ಮಿಸಿ ದೇಶದಲ್ಲಿಯೆ ಮೊಟ್ಟಮೊದಲ ಮೈಸೂರು ವಿಶ್ವ ವಿದ್ಯಾಲಯ ಸ್ಥಾಪಿಸಿದ ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರ ಜಯಂತಿಯನ್ನು ಸರಕಾರದಿಂದ ಆಚರಿಸುವಂತಾಗಬೇಕು ಎಂದರು. ಸಂಘದ ಮುಖಂಡರಾದ ಕೋಟೆಮಲ್ಲೇಶ್, ಪಂಚಾಕ್ಷ ರಿ, ಪ್ರಸನ್ನಗೌಡ, ಕಲ್ಲೇಶ್, ವಿಕಾಸ್, ಕೋಟೆಸೋಮಣ್ಣ, ನಾಗರತ್ನ, ಚೈತ್ರ, ಮನೋಹರ್ಶೇಟ್ಟಿ, ಮದನ್, ಅಶೋಕ್, ಕುಮಾರ್, ಅಜಯ್, ಕಲ್ಲೇಶ್ವರ ಇತರು ಹಾಜರಿದ್ದರು.
ನಗರದ ಕುವೆಂಪು ಕಲಾಮಂದಿರದ ಹೇಮಾಂಗಣದಲ್ಲಿ ಜಿಲ್ಲಾ ಕರ್ನಾಟಕ ರಕ್ಷ ಣಾ ವೇದಿಕೆಯಿಂದ ಮಂಗಳವಾರ ಏರ್ಪಡಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 135ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ವನಮನ ಸಲ್ಲಿಸಿ ಮಾತನಾಡಿದರು. ಇಂದಿನ ಯುವ ಪೀಳಿಗೆಗೆ ಇತ್ತೀಚಿನ ಕನ್ನಡ ನಾಡಿನ ಜಲ, ಭಾಷೆ ಜನರ ರಕ್ಷ ಣೆಗೆ ಮೈಸೂರು ಸಂಸ್ಥಾನದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೊಟ್ಟಿರುವ ಅಪೂರ್ವ ಕೊಡುಗೆಯ ಬಗ್ಗೆ ಪರಿಚಯವೆ ಇಲ್ಲದಿರುವುದು ವಿಷಾದದ ಸಂಗತಿ ಎಂದರು.
ಇತಿಹಾಸದ ಮೂಲಕ ದೇಶದ ಮಹಾಗಣ್ಯರು ಹಾಗೂ ಅರಸರುಗಳ ಬಗ್ಗೆ ಪಠ್ಯದ ಮೂಲಕ ಈಗಿನ ಪೀಳಿಗೆಗೆ ತಿಳಿಸಿಕೊಡುವ ಅವಶ್ಯಕತೆ ಇದೆ. ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಸ್ಥಾಪನೆಗೆ ಕಾರಣಕರ್ತರಾಗಿದ್ದಾರೆ. ಕನ್ನಡ ಭಾಷೆಯ ಉಳಿವಿಗೆ ನಾಡಿನ ಆರ್ಥಿಕ ಸುವ್ಯವಸ್ಥೆಗೆ ಭದ್ರ ಬುನಾದಿ ಹಾಕಿದ್ದಾರೆ. ಕೈಗಾರಿಕೆಗಳನ್ನು ಸ್ಥಾಪಿಸಿ ಅಗತ್ಯವಾದ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಂಡರು. ಕೆರೆ ಕಟ್ಟೆಗಳನ್ನು ಕಟ್ಟಿಸಿ ಜನ ಜಾನುವಾರುಗಳಿಗೆ ನೆರೆವಾದವರು. ಅರಸು ಮನೆತನದ ಒಡವೆಗಳನ್ನು ಒತ್ತೆ ಇಟ್ಟು ಮೈಸೂರಿನ ಕನ್ನಂಬಾಡಿ ಕಟ್ಟೆ ನಿರ್ಮಿಸಿ ರೈತರ ಬದುಕು ಹಸನುಗೊಳಿಸಿದರು. ಹೆಚ್ಚಾಗಿ ಸಮ ಸಮಾಜ ನಿರ್ಮಾಣಕ್ಕೆ ಸಾಮಾಜಿಕ ನ್ಯಾಯದ ಮೀಸಲಾತಿ ತಂದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ ಎಂದರು.
ಜಿಲ್ಲಾ ಕರ್ನಾಟಕ ರಕ್ಷ ಣಾ ವೇದಿಕೆಯ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್ ಮಾತನಾಡಿ, ಸಮಾನತೆಯ ಹರಿಕಾರ, ಮೈಸೂರನ್ನು ಮಾದರಿಯಾಗಿ ನಿರ್ಮಿಸಿ ದೇಶದಲ್ಲಿಯೆ ಮೊಟ್ಟಮೊದಲ ಮೈಸೂರು ವಿಶ್ವ ವಿದ್ಯಾಲಯ ಸ್ಥಾಪಿಸಿದ ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರ ಜಯಂತಿಯನ್ನು ಸರಕಾರದಿಂದ ಆಚರಿಸುವಂತಾಗಬೇಕು ಎಂದರು. ಸಂಘದ ಮುಖಂಡರಾದ ಕೋಟೆಮಲ್ಲೇಶ್, ಪಂಚಾಕ್ಷ ರಿ, ಪ್ರಸನ್ನಗೌಡ, ಕಲ್ಲೇಶ್, ವಿಕಾಸ್, ಕೋಟೆಸೋಮಣ್ಣ, ನಾಗರತ್ನ, ಚೈತ್ರ, ಮನೋಹರ್ಶೇಟ್ಟಿ, ಮದನ್, ಅಶೋಕ್, ಕುಮಾರ್, ಅಜಯ್, ಕಲ್ಲೇಶ್ವರ ಇತರು ಹಾಜರಿದ್ದರು.