ಆ್ಯಪ್ನಗರ

ಹೋದಿರಾಯನಹಳ್ಳ ಪಥಪರಿವರ್ತನಾ ಯೋಜನೆ ಶೀಘ್ರ

ತಾಲೂಕಿನ ಜನತೆಯ ಮಹತ್ವಾಕಾಂಕ್ಷೆಯ 43 ಕೋಟಿ ರೂ. ವೆಚ್ಚದ ಹೋದಿರಾಯನಹಳ್ಳದ ಪಥಪರಿವರ್ತನಾ ಯೋಜನೆ ಸದ್ಯದಲ್ಲೇ ಕಾರ್ಯಗತವಾಗುವ ಲಕ್ಷಣ ಕಾಣುತ್ತಿದ್ದು, ಮೂರು ದಶಕಗಳ ಯೋಜನೆ ಈಗ ಮುಕ್ತಾಯದ ಹಂತ ತಲುಪಿದೆ.

Vijaya Karnataka 29 Jul 2018, 5:00 am
ತರೀಕೆರೆ: ತಾಲೂಕಿನ ಜನತೆಯ ಮಹತ್ವಾಕಾಂಕ್ಷೆಯ 43 ಕೋಟಿ ರೂ. ವೆಚ್ಚದ ಹೋದಿರಾಯನಹಳ್ಳದ ಪಥಪರಿವರ್ತನಾ ಯೋಜನೆ ಸದ್ಯದಲ್ಲೇ ಕಾರ್ಯಗತವಾಗುವ ಲಕ್ಷಣ ಕಾಣುತ್ತಿದ್ದು, ಮೂರು ದಶಕಗಳ ಯೋಜನೆ ಈಗ ಮುಕ್ತಾಯದ ಹಂತ ತಲುಪಿದೆ.
Vijaya Karnataka Web CKM-28tkr4


ಹಿಂದೆ 1986ರಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ಶಂಕುಸ್ಥಾಪನೆಯಾದ ಈ ಯೋಜನೆ ಜಾರಿಗೆ ಮಾಜಿ ಶಾಸಕರಾದ ಹಂಜಿಶಿವಣ್ಣ, ಬಿ.ಆರ್‌.ನೀಲಕಂಠಪ್ಪ, ಟಿ.ಎಚ್‌.ಶಿವಶಂಕರಪ್ಪ, ಜಿ.ಎಚ್‌.ಶ್ರೀನಿವಾಸ್‌ ಹಾಗೂ ಶಾಸಕ ಡಿ.ಎಸ್‌.ಸುರೇಶ್‌ ಅವರ ಪಾತ್ರ ಪ್ರಮುಖವಾಗಿದೆ. ಮಳೆಗಾಲ ಆರಂಭದಲ್ಲೇ ನೀರು ಜಂಬದಹಳ್ಳ ಜಲಾಶಯಕ್ಕೆ ಸೇರಬೇಕಿತ್ತು. ಆದರೆ, ನಿಧಾನಗತಿ ಕಾಮಗಾರಿ ಪರಿಣಾಮ ಮಳೆಗಾಲ ಅರ್ಧ ಕಳೆದರೂ ನೀರು ಮಂದಗತಿಯಲ್ಲಿ ಹರಿಯುತ್ತಿದೆ.

ಪೋಲಾಗುತ್ತಿರುವ ನೀರು

ಕೆಮ್ಮಣ್ಣುಗುಂಡಿ, ಕಲ್ಲತ್ತಿಗಿರಿ ಸುತ್ತಮುತ್ತಲ ಪ್ರದೇಶದ ಮಳೆ ನೀರು ಕರಿಕಲ್ಲುಹಳ್ಳದ ಮೂಲಕ ಹೋದಿರಾಯನ ಹಳ್ಳಕ್ಕೆ ಬಂದು ನಂತರ ಅದು ಗೋಂದಿ ಅಣೆಕಟ್ಟು ಪ್ರದೇಶಕ್ಕೆ ಹೋಗಿ ಸಾಕಷ್ಟು ನೀರು ವ್ಯರ್ಥವಾಗುತ್ತಿತ್ತು, ಆದರೆ, ಅದರ ಪಥಪರಿವರ್ತನೆ ಮಾಡಿ ಆ ನೀರನ್ನು ಜಂಬದಹಳ್ಳ ಜಲಾಶಯಕ್ಕೆ ತುಂಬಿಸಲು ಯೋಜನೆ ರೂಪಿಸಲಾಗಿದೆ. ಮಳೆಗಾಲ ಈ ಬಾರಿ ಬಿರುಸಾದ ಕಾರಣ ಯಥೇಚ್ಚವಾಗಿ ನೀರು ಹಳ್ಳದಲ್ಲಿ ಬಂದಿದ್ದು, ಕಾಮಗಾರಿ ಮುಗಿದಿರುವ ಕಾರಣ ನೀರು ಕಾಡಿಗೆ ನುಗ್ಗಿ ವ್ಯರ್ಥವಾಗಿದೆ. ಈಗ ಜನಪ್ರತಿನಿಧಿಗಳು ಕಾಮಗಾರಿ ನಡೆಯುವ ಜಾಗಕ್ಕೆ ಭೇಟಿ ನೀಡಿ ಕಾಮಗಾರಿ ಚುರುಕಿಗೆ ಸೂಚಿಸಿದ್ದರಿಂದ ಕೆಲವೇ ದಿನಗಳಲ್ಲಿ ನೀರು ಜಂಬದಹಳ್ಳ ಜಲಾಶಯ ಸೇರಲಿದೆ.

ಶಾಸಕರ ಭೇಟಿ
ಶಾಸಕ ಡಿ.ಎಸ್‌.ಸುರೇಶ್‌ ಶನಿವಾರ ಹೋದಿರಾಯನಹಳ್ಳ ಪಥಪರಿವರ್ತನ ಯೋಜನೆ ಕಾಮಗಾರಿ ವೀಕ್ಷಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ, ಕಾಮಗಾರಿ ತುರ್ತಾಗಿ ಮುಗಿಸುವಂತೆ ತಾಕೀತು ಮಾಡಿದರು. ಕೆಲ ದಿನಗಳ ಹಿಂದೆ ಜಿ.ಪಂ. ಸದಸ್ಯ ಕೆ.ಎಚ್‌.ಮಹೇಂದ್ರ ಸಹ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಚುರುಕಿಗೆ ಸೂಚಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ