ಆ್ಯಪ್ನಗರ

ತೋಟದ ಜತೆ ಜೇನು ಸಾಕಣೆ ಆದಾಯ ಗಳಿಕೆಗೆ ಸಹಕಾರಿ

ಸರಿಯಾಗಿ ತರಬೇತಿ ಪಡೆದುಕೊಂಡು ತೋಟಗಳಲ್ಲಿ ಜೇನು ಸಾಕಣೆ ಮಾಡಿದರೆ ಆರ್ಥಿಕ ಲಾಭ ಗಳಿಸಬಹುದು ಎಂದು ಶಿರಸಿಯ ಜೇನು ಕೃಷಿ ತಜ್ಞ ಮದುಕೇಶ್ವರ ಹೆಗಡೆ ಹೇಳಿದರು

Vijaya Karnataka 1 Feb 2019, 5:00 am
ನರಸಿಂಹರಾಜಪುರ: ಸರಿಯಾಗಿ ತರಬೇತಿ ಪಡೆದುಕೊಂಡು ತೋಟಗಳಲ್ಲಿ ಜೇನು ಸಾಕಣೆ ಮಾಡಿದರೆ ಆರ್ಥಿಕ ಲಾಭ ಗಳಿಸಬಹುದು ಎಂದು ಶಿರಸಿಯ ಜೇನು ಕೃಷಿ ತಜ್ಞ ಮದುಕೇಶ್ವರ ಹೆಗಡೆ ಹೇಳಿದರು.
Vijaya Karnataka Web CKM-31NRP1


ಸೀತೂರಿನಲ್ಲಿ ತೋಟಗಾರಿಕೆ ಇಲಾಖೆ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಬುಧುವಾರ ನಡೆದ ಜೇನು ಕೃಷಿ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಜೇನು ಕೃಷಿಯಿಂದ ಬೆಳೆಗಳಲ್ಲಿ ಪರಾಗಸ್ಪರ್ಷ ಉಂಟಾಗಿ ಉತ್ತಮ ಬೆಳೆ ಬರಲಿದೆ. ತೋಟಗಳಲ್ಲಿ ಮುಖ್ಯ ಬೆಳೆಯ ಬೆಲೆ ಕುಸಿತ ಕಂಡರೂ ಜೇನು ಕೃಷಿ ಇದ್ದರೆ ಪರಾರ‍ಯಯ ಆದಾಯವನ್ನು ನಿರೀಕ್ಷಿಸಬಹುದು. ಜೇನಿನಿಂದ ಹಲವಾರು ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಮಾಡಬಹುದಾಗಿದೆ. ಜೇನು ಕೃಷಿ ಮಾಡುವ ಮುನ್ನ ಸರಿಯಾದ ತರಬೇತಿ ಅಗತ್ಯ ಎಂದರು.

ಸಭೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೃಷಿ ಮೇಲ್ವೀಚಾರಕ ದಿನೇಶ್‌, ಸಹಾಯಕ ತೋಟಗಾರಿಕೆ ನಿರ್ದೇಶಕ ಈಶ್ವರಪ್ಪ, ಧ.ಗ್ರಾ.ಯೋಜನೆಯ ನಾಗರಮಕ್ಕಿ ಒಕ್ಕೂಟದ ಅಧ್ಯಕ್ಷ ಚೇತನ್‌, ಸೀತೂರು ವಿಎಸ್‌ಎಸ್‌ಎನ್‌ ವ್ಯವಸ್ಥಾಪಕ ಅನಿಲ್‌ ಕುಮಾರ್‌ ಉಪಸ್ಥಿತರಿದ್ದರು. ರಾಘವೇಂದ್ರ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ