ಆ್ಯಪ್ನಗರ

ಪಕ್ಷಕ್ಕಾಗಿ ದುಡಿದವರಿಗೆ ಗೌರವ ಸಿಗಲಿ

ತಾಲೂಕಿನಾದ್ಯಂತ ಪಕ್ಷ ಕ್ಕಾಗಿ ದುಡಿದಿರುವ ಕಾರ್ಯಕರ್ತರ ರಕ್ಷ ಣೆ ಮತ್ತು ಅವರಿಗೆ ಗೌರವ ನೀಡುವ ಕಾರ್ಯವಾಗಬೇಕಿದೆ ಎಂದು ಕಾಂಗ್ರೆಸ್‌ ಮುಖಂಡ ಎಚ್‌.ಎಂ.ನಟರಾಜ್‌ ಆಗ್ರಹಿಸಿದರು.

Vijaya Karnataka 17 Jan 2019, 5:00 am
ಕೊಪ್ಪ: ತಾಲೂಕಿನಾದ್ಯಂತ ಪಕ್ಷ ಕ್ಕಾಗಿ ದುಡಿದಿರುವ ಕಾರ್ಯಕರ್ತರ ರಕ್ಷ ಣೆ ಮತ್ತು ಅವರಿಗೆ ಗೌರವ ನೀಡುವ ಕಾರ್ಯವಾಗಬೇಕಿದೆ ಎಂದು ಕಾಂಗ್ರೆಸ್‌ ಮುಖಂಡ ಎಚ್‌.ಎಂ.ನಟರಾಜ್‌ ಆಗ್ರಹಿಸಿದರು.
Vijaya Karnataka Web CKM-16kph3


ಪುರಭವನದಲ್ಲಿ ಮಂಗಳವಾರ ಬ್ಲಾಕ್‌ ಕಾಂಗ್ರೆಸ್‌ ಆಯೋಜಿಸಿದ್ದ ಸಂಕ್ರಾಂತಿ ಸಮ್ಮಿಲನ-ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.ತಾಲೂಕಿನಲ್ಲಿ 94 ಸಿ ಅರ್ಜಿ ಸಮರ್ಪಕವಾಗಿ ಇತ್ಯರ್ಥವಾಗುತ್ತಿಲ್ಲ, ಹಕ್ಕುಪತ್ರ ಸಿಗುತ್ತಿಲ್ಲ. ಶಾಸಕರು ಅಧಿಕಾರಿಗಳ ಸಭೆ ಕರೆದು ಅವರಿಗೆ ಸೂಕ್ತ ನಿರ್ದೇಶನ ನೀಡಬೇಕು. ಮೇಗುಂದಾ ಹೋಬಳಿಯಲ್ಲಿ ವಿದ್ಯುತ್‌ ಕೊರತೆ, ಸಾಗುವಳಿ ಪತ್ರದ ಸಮಸ್ಯೆ ಮುಂದುವರಿದಿದೆ. ಜನಪ್ರತಿನಿಧಿಗಳು ಗಮನ ಹರಿಸಿ ಸಮಸ್ಯೆ ಬಗೆಹರಿಸಿಕೊಡಬೇಕು ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಈವರೆಗೆ ಕ್ಷೇತ್ರಕ್ಕೆ 150 ಕೋಟಿ.ರೂ.ಅನುದಾನ ಬಂದಿದೆ. ಅದರಲ್ಲಿ 40 ಕೋಟಿ ರೂ. ಕಾಮಗಾರಿ ಆರಂಭಗೊಂಡಿದೆ. ಈವರೆಗೆ 1300 ಹಕ್ಕುಪತ್ರ ವಿತರಿಸಲಾಗಿದೆ. ಗ್ರಾಮಮಟ್ಟದಲ್ಲಿ ಎಲ್ಲ ಬಗೆಯ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಕುಡಿಯುವ ನೀರಿನ ಯೋಜನೆಗೆ ಪ್ರತಿ ತಾಲೂಕಿಗೆ 25 ಲಕ್ಷ ರೂ.ನೀಡಲಾಗಿದೆ ಎಂದರು.

ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ರಾಗಿ ಆಯ್ಕೆಯಾದ ಶಾಸಕ ಟಿ.ಡಿ.ರಾಜೇಗೌಡ, ನೂತನ ಕೆಪಿಸಿಸಿ ಕಿಸಾನ್‌ ಸೆಲ್‌ ಅಧ್ಯಕ್ಷ ರಾಗಿ ಪುನರಾಯ್ಕೆಗೊಂಡ ಸಚ್ಚಿನ್‌ಮೀಗ, ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್‌, ತಾಲೂಕು ಕಸಾಪ ನೂತನ ಅಧ್ಯಕ್ಷ ಎಚ್‌.ಎಸ್‌.ಇನೇಶ್‌, ಕರಿಮನೆ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಕಿರಣ್‌, ಉಪಾಧ್ಯಕ್ಷ ಗೋಪಾಲಕೃಷ್ಣ್ನ, ಪಟ್ಟಣದ ಭೂ ಅಭಿವೃದ್ಧಿ ಬ್ಯಾಂಕಿನ ನೂತನ ಉಪಾಧ್ಯಕ್ಷ ಶ್ರೀಹರ್ಷ ಅವರನ್ನು ಗೌರವಿಸಲಾಯಿತು. ಪಕ್ಷ ಕ್ಕೆ ಕೊಪ್ಪ ಗ್ರಾಮಾಂತರ ಗ್ರಾ.ಪಂ.ಅಧ್ಯಕ್ಷೆ ವಿದ್ಯಾ, ಸದಸ್ಯ ಸತೀಶ್ಚಂದ್ರ ಶೆಟ್ಟಿ, ಕಿರುತೆರೆ ನಟ ಸಂಪತ್‌ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುಧೀರ್‌ ಕುಮಾರ್‌ ಮುರೊಳ್ಳಿ ಅಧ್ಯಕ್ಷ ತೆ ವಹಿಸಿದ್ದರು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ವಿಜಯ್‌ ಕುಮಾರ್‌, ಶಿವಾನಂದ ಸ್ವಾಮಿ, ಎ.ಎಸ್‌.ನಾಗೇಶ್‌, ಕೆ.ಪಿ.ಚಂದ್ರೇಗೌಡ, ಸೀತಾಲಕ್ಷ್ಮಿ, ಅನ್ನಪೂರ್ಣ, ಎಚ್‌.ಎಂ.ಸತೀಶ್‌, ಕೆ.ಎಸ್‌.ರವೀಂದ್ರ ಹಾಜರಿದ್ದರು. ಇನೇಶ್‌ ಸ್ವಾಗತಿಸಿ, ವಿಶ್ವನಾಥ ಶೆಟ್ಟಿ ಪ್ರಾಸ್ತಾವಿಕ ಮಾತನಡಿದರು. ಮಂಜುನಾಥ್‌ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ