ಆ್ಯಪ್ನಗರ

ಸಂಗೀತ ಶಿಕ್ಷಕಿ ಜ್ಯೋತಿಗೆ ಗೌರವಾರ್ಪಣೆ

ಭಾರತೀಯ ಸಂಸ್ಕೃತಿಯಲ್ಲಿ ಗುರು ಗೌರವ ಅತ್ಯಂತ ಪವಿತ್ರವಾದುದು ಎಂದು ಭರತ ಕಲಾಕ್ಷೇತ್ರದ ಪ್ರಧಾನ ಗುರು ವೀಣಾಅರವಿಂದ್‌ ಅಭಿಪ್ರಾಯಪಟ್ಟರು.

Vijaya Karnataka 31 May 2019, 5:00 am
ಚಿಕ್ಕಮಗಳೂರು : ಭಾರತೀಯ ಸಂಸ್ಕೃತಿಯಲ್ಲಿ ಗುರು ಗೌರವ ಅತ್ಯಂತ ಪವಿತ್ರವಾದುದು ಎಂದು ಭರತ ಕಲಾಕ್ಷೇತ್ರದ ಪ್ರಧಾನ ಗುರು ವೀಣಾಅರವಿಂದ್‌ ಅಭಿಪ್ರಾಯಪಟ್ಟರು.
Vijaya Karnataka Web CKM-30ARAGAP3


ನಗರದ ವಾಗ್ದೇವಿ ಸಂಗೀತ ಶಾಲೆಯಲ್ಲಿ ಕಲ್ಕಟ್ಟೆ ಪುಸ್ತಕದ ಮನೆಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಗುರುವಂದನಾ ಕಾರ‍್ಯಕ್ರಮದಲ್ಲಿ ಮಾತನಾಡಿದರು.

ಗುರು-ಶಿಷ್ಯರ ಸಂಬಂಧ ಪವಿತ್ರವಾದುದು. ಶಿಷ್ಯರು ಉತ್ತಮ ಫಲಿತಾಂಶ ನೀಡಿದರೆ ಗುರುವಿಗೆ ಅದಕ್ಕಿಂತ ದೊಡ್ಡ ಕಾಣಿಕೆ ಬೇರೊಂದಿಲ್ಲ. ಕಲ್ಕಟ್ಟೆ ಪುಸ್ತಕದ ಮನೆ ಆಯೋಜಿಸುವ ಗುರುವಂದನಾ ಕಾರ‍್ಯಕ್ರಮ ಮುಂದಿನ ಜನಾಂಗಕ್ಕೆ ಮಾದರಿಯಾಗಿದೆ ಎಂದರು.

ಹಣ ಕೊಡುವ ಕಾರಣಕ್ಕೆ ಗುರುವನ್ನು ಅಧಿಕಾರಯುತವಾಗಿ ನೋಡುವ ಆಧುನಿಕತೆಯು ವಿದ್ಯೆಯನ್ನು ವ್ಯಾಪಾರೀಕರಣ ಮಾಡುತ್ತಿದೆ. ಆದರೆ, ಈ ರೀತಿಯ ಕಾರ‍್ಯಕ್ರಮಗಳು ಗುರುಭಕ್ತಿ ಹೆಚ್ಚಿಸುವುದಲ್ಲದೆ ವಿದ್ಯೆಯ ಬಗ್ಗೆ ಶ್ರದ್ಧೆಯನ್ನೂ ಮೂಡಿಸುತ್ತವೆ ಎಂದು ಹೇಳಿದರು.

ಗೌರವ ಸ್ವೀಕರಿಸಿದ ಜ್ಯೋತಿರಮೇಶ್‌ ಮಾತನಾಡಿ, ಯಾವ ಗುರುಗಳೂ ಸನ್ಮಾನ, ಪುರಸ್ಕಾರಕ್ಕಾಗಿ ವಿದ್ಯೆ ಕಲಿಸುವುದಿಲ್ಲ. ಕಲಿಸುತ್ತ ಕಲಿಯುವ ಪರಂಪರೆಯಿಂದ ಕಲಿಸುವಾಗ ಪ್ರಯೋಗಮತಿ ಬೆಳೆಯುತ್ತದೆ. ಇಂತಹ ಗೌರವಗಳು ಆತ್ಮವಿಶ್ವಾಸ ಹೆಚ್ಚಿಸುತ್ತವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಲ್ಕಟ್ಟೆ ಪುಸ್ತಕದ ಮನೆಯ ಮಹಾಪೋಷಕಿ ಶಾಂತಾಮಲ್ಲೇಶರಾವ್‌ ಮಾತನಾಡಿ, ನಮ್ಮಲ್ಲಿ ಮಾತ್ರ ಒಳ್ಳೆಯತನ ಇದ್ದರೆ ಪ್ರಯೋಜನವಿಲ್ಲ. ಬೇರೆಯವರಿಗೂ ಒಳ್ಳೆಯದನ್ನೇ ಮಾಡಬೇಕು. ಸಂಗೀತ ವ್ಯಕ್ತಿಯನ್ನು ಒಳ್ಳೆಯ ದಾರಿಗೆ ಕರೆದೊಯ್ಯುತ್ತದೆ ಎಂದು ಹೇಳಿದರು.

ಅರವಿಂದಕುಮಾರ್‌, ರಮೇಶ್‌, ಬಿ.ಆರ್‌.ಕೃಷ್ಣಮೂರ್ತಿ, ಲಕ್ಷ್ಮೇಕೃಷ್ಣಮೂರ್ತಿ, ಶಾಶ್ವತಿ ಹಾಜರಿದ್ದರು. ಎಚ್‌.ಎಂ.ನಾಗರಾಜರಾವ್‌ ಕಲ್ಕಟ್ಟೆ ಸ್ವಾಗತಿಸಿ, ನಿರೂಪಿಸಿದರು. ವೈಷ್ಣವಿ ಎನ್‌.ರಾವ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ