ಆ್ಯಪ್ನಗರ

ಅಹಂಭಾವ ಬದಿಗಿರಿಸಿದರೆ ಜೀವನ ಸಾರ್ಥಕ

ಸಮಾಜದಿಂದ ಸಾಕಷ್ಟು ಪ್ರಯೋಜನ ಪಡೆದಿರುವ ನಾವು ಸಮಾಜದ ಋುಣ ತೀರಿಸಬೇಕು ಎಂದು ಚಲನಚಿತ್ರ ನಟ ದೊಡ್ಡಣ್ಣ ಹೇಳಿದರು.

Vijaya Karnataka 2 Jul 2019, 6:10 pm
ಶೃಂಗೇರಿ: ಸಮಾಜದಿಂದ ಸಾಕಷ್ಟು ಪ್ರಯೋಜನ ಪಡೆದಿರುವ ನಾವು ಸಮಾಜದ ಋುಣ ತೀರಿಸಬೇಕು ಎಂದು ಚಲನಚಿತ್ರ ನಟ ದೊಡ್ಡಣ್ಣ ಹೇಳಿದರು.
Vijaya Karnataka Web CKM-30SRI2


ತೊರೆಹಡ್ಲು ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷ ಣಸ್ನೇಹಿ ಟ್ರಸ್ಟ್‌ ಆಯೋಜಿಸಿದ್ದ ಉಚಿತ ನೋಟ್‌ ಬುಕ್‌ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನುಷ್ಯ ತನ್ನ ಜೀವನದಲ್ಲಿ ತಂದೆ, ತಾಯಿ ಗುರುಗಳ ಋುಣ ತೀರಿಸ ಬೇಕು. ಅಹಂಕಾರ ಮನುಷ್ಯನನ್ನು ಪತನಗೊಳಿಸುತ್ತದೆ. ನಾವು ಸಮಾಜದಲ್ಲಿ ಅತಿ ಸಾಮಾನ್ಯರಾಗಿ ಬದುಕಿದಾಗ ಜೀವನ ಸಾರ್ಥಕ್ಯವಾಗುತ್ತದೆ. ಮನುಷ್ಯ ತನ್ನ ಬದುಕಿದ ಸಮಯದಲ್ಲಿ ಕೇವಲ ಒಳ್ಳೆಯ ಆಲೋಚನೆಯನ್ನು ಮಾಡಬೇಕು ಎಂದರು.

ಪುಷ್ಪ ರಾಜೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲಿ ಪ್ರತಿ ವರ್ಷಕ್ಕೆ 7 ಸಾವಿರ ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕ ಮತ್ತು ವಿದ್ಯಾರ್ಥಿ ವೇತನ ನೀಡುವುದೆಂದರೆ ಹೆಮ್ಮೆಯ ಸಂಗತಿ. ಗಣ್ಯರು ಮತ್ತು ಸಮಾಜ ಸೇವಕರು ಸಮಾಜಮುಖಿ ಕಾರ್ಯಕ್ರಮ ಮಾಡಿದಾಗ ಪೋಷಕರಿಗೆ ಅರ್ಥಿಕ ಹೊರೆ ಕಡಿಮೆಯಾಗುತ್ತದೆ ಎಂದರು.

ಅಧ್ಯಕ್ಷ ತೆ ವಹಿಸಿ ಮಾತನಾಡಿದ ಟ್ರಸ್ಟ್‌ ಅಧ್ಯಕ್ಷ ಕೆ.ಟಿ.ಮಂಜುನಾಥ್‌, ಅಹಂಭಾವಿಕೆ ಬದಿಗಿರಿಸಿ ಜೀವನ ನಡೆಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ ಗೌರವಾಧ್ಯಕ್ಷ ಅನಿಲ್‌ ಹೊಸಕೊಪ್ಪ, ಕಾರ್ಯದರ್ಶಿ ಶುಭಕೃತ ಹೆಗ್ಡೆ, ಬಿಇಒ ದಯಾವತಿ, ಶಾಲಾ ಸಮಿತಿ ಅಧ್ಯಕ್ಷ ಬಿ.ಜಿ ಮಂಜುನಾಥ್‌, ಮುಖ್ಯ ಶಿಕ್ಷ ಕ ಬಸಂತಪ್ಪ, ಶಿಕ್ಷ ಕರಾದ ಗುರುಮೂರ್ತಿ, ದತ್ತಾತ್ರೇಯ ಯಾಜಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ