ಆ್ಯಪ್ನಗರ

ಸ್ನೇಹಕೂಟದಿಂದ ಇಫ್ತಾರ್‌ ಕೂಟ

ಸ್ನೇಹಕೂಟ ಕ್ಷೇಮಾಭಿವೃದ್ಧಿ ಸೊಸೈಟಿಯಿಂದ ಮಂಗಳವಾರ ನಗರದ ಮಾರ್ಕೆಟ್‌ ರಸ್ತೆ ತಮಿಳು ಕಾಲೊನಿಯ ಅಕ್ವಾ ಮಸೀದಿಯಲ್ಲಿ ಮಂಗಳವಾರ ಸಂಜೆ ಇಫ್ತಿಯಾರ್‌ ಕೂಟ ಆಯೋಜಿಸಲಾಗಿತ್ತು.

Vijaya Karnataka 5 Jun 2019, 5:00 am
ಚಿಕ್ಕಮಗಳೂರು: ಸ್ನೇಹಕೂಟ ಕ್ಷೇಮಾಭಿವೃದ್ಧಿ ಸೊಸೈಟಿಯಿಂದ ಮಂಗಳವಾರ ನಗರದ ಮಾರ್ಕೆಟ್‌ ರಸ್ತೆ ತಮಿಳು ಕಾಲೊನಿಯ ಅಕ್ವಾ ಮಸೀದಿಯಲ್ಲಿ ಮಂಗಳವಾರ ಸಂಜೆ ಇಫ್ತಿಯಾರ್‌ ಕೂಟ ಆಯೋಜಿಸಲಾಗಿತ್ತು.
Vijaya Karnataka Web iftar meeting with friendship
ಸ್ನೇಹಕೂಟದಿಂದ ಇಫ್ತಾರ್‌ ಕೂಟ


2002ರಲ್ಲಿ ಚಿಕ್ಕಮಗಳೂರು-ಮೈಸೂರು ಜಿಲ್ಲೆಯಲ್ಲಿ ನೇಮಕಾತಿ ಹೊಂದಿದ ಪೊಲೀಸರು, ಪೊಲೀಸ್‌ ತರಬೇತಿ ನಂತರ ಬೇರೆ ಬೇರೆ ಇಲಾಖೆಯಲ್ಲಿ ಮರು ನೇಮಕಾತಿ ಹೊಂದಿರುವವರು ಸ್ಥಾಪಿಸಿರುವ ಸ್ನೇಹಕೂಟ ಹಲವು ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿದ್ದು, ಸರ್ವಧರ್ಮ ಸಮನ್ವಯದ ಭಾಗವಾಗಿ ಇಫ್ತಿಯಾರ್‌ ಕೂಟ ಆಯೋಜಿಸಿತ್ತು.

ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದ 300ಕ್ಕೂ ಹೆಚ್ಚು ಜನರಿಗೆ ಸೊಸೈಟಿಯಿಂದ ಲಘು ಉಪಹಾರ, ತಂಪು ಪಾನೀಯ, ಹಣ್ಣುಗಳನ್ನು ವಿತರಿಸಲಾಯಿತು. ಪೊಲೀಸ್‌ ಇಲಾಖೆಯ ಬಿಡುವಿಲ್ಲದ ಕೆಲಸಗಳ ನಡುವೆಯೂ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ ಸ್ನೇಹಕೂಟದ ಬಗ್ಗೆ ಮುಸ್ಲಿಂ ಬಾಂಧವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ನೇಹಕೂಟದ ಅಧ್ಯಕ್ಷ ಎಂ.ಕೆ.ಮಧು ಮಾತನಾಡಿ, ಕರ್ತವ್ಯದ ಜತೆಗೆ ಸಮಾಜಮುಖಿ ಕೆಲಸಗಳಲ್ಲೂ ತೊಡಗಿಸಿಕೊಂಡಿರುವುದರಿಂದ ಪ್ರತಿಯೊಬ್ಬರಲ್ಲೂ ಸಾರ್ಥಕ ಭಾವನೆ ಇದೆ. ಸಾಮಾಜಿಕ ಕೆಲಸಗಳಲ್ಲಿ ಸಿಗುವ ನೆಮ್ಮದಿ ಇಲಾಖೆಯಲ್ಲಿ ಅವಿಶ್ರಾಂತವಾಗಿ ಕರ್ತವ್ಯ ನಿರ್ವಹಿಸಲು ಪೂರಕವಾಗಿದೆ ಎಂದರು.

ಉಪಾಧ್ಯಕ್ಷ ಕೆ.ಎಸ್‌.ದಿಲೀಪ್‌, ನಿರ್ದೇಶಕರಾದ ಬಿ.ಸಿ.ವಿಜಯಶಂಕರ್‌, ಎ.ಡಿ.ಸುರೇಶ್‌, ಕೆ.ಎಂ.ಯೋಗೀಶ್‌, ಶಶಿಧರ್‌, ನಟರಾಜ್‌, ಜಯಣ್ಣ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ