ಕೆ.ಎಚ್.ರುದ್ರಯ್ಯ
ಚಿಕ್ಕಮಗಳೂರು: ಹಿಂದಿನ ಗೋಹತ್ಯೆ ನಿಷೇಧ ಕಾಯಿದೆಗೆ ರಾಜ್ಯ ಸರಕಾರ ಕೆಲವು ಮಾರ್ಪಡು ಮಾಡಿ ಜಾರಿಗೆ ತಂದಿದ್ದೇ ತಡ ಗೋಕಳ್ಳರು, ಗೋಹತ್ಯೆ ದಂಧೆ ನಡೆಸುತ್ತಿದ್ದವರಿಗೆ ನಡುಕ ಶುರುವಾಗಿ ಇಡೀ ವ್ಯವಹಾರವೇ ಗಪ್ಚುಪ್ ಆಗಿದೆ. ಹೌದು. ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಅನಧಿಕೃತ ಕಸಾಯಿ ಖಾನೆಗಳು ಮಾಂಸ ಮಾರಾಟ ಮಾಡುತ್ತಿದ್ದರೆ, ನಗರ ಒಂದರಲ್ಲೇ 15ಕ್ಕೂ ಹೆಚ್ಚು ಇದ್ದವು. ಈ ಕಸಾಯಿ ಖಾನೆಗಳಿಗೆ ಬಹುತೇಕವಾಗಿ ಬೇಲೂರು ತಾಲೂಕಿನ ಹನಿಕೆ ಸಂತೆಯಿಂದ ದನಗಳು ಪೂರೈಕೆ ಆಗುತ್ತಿದ್ದವು.
ಇತ್ತೀಚೆಗೆ ಗ್ರಾಮೀಣ ಭಾಗದ ರೈತರನ್ನು ಪುಸಲಾಯಿಸಿ ಕಡಿಮೆ ಬೆಲೆಯಲ್ಲಿ ದನಗಳನ್ನು ಖರೀದಿಸುವ ದೊಡ್ಡ ಜಾಲವೇ ತಲೆ ಎತ್ತಿತ್ತು. ಬೆಳ್ಳಂಬೆಳಗ್ಗೆಯೇ ವ್ಯವಹಾರ ಕುದುರಿಸಿ ಸೂರ್ಯೋದಯಕ್ಕೂ ಮುನ್ನವೇ ಗೋಡ್ಸ್ ಗಾಡಿಯಲ್ಲಿ ಕಸಾಯಿ ಖಾನೆಗೆ ರಾಸುಗಳು ರವಾನೆ ಆಗುತ್ತಿದ್ದವು.
ಜತೆಗೆ ರಸ್ತೆ ಬದಿಯಲ್ಲಿ ಮಲಗಿದ್ದ ಬಿಡಾಡಿ ದನಗಳು, ಕೊಟ್ಟಿಗೆಯಲ್ಲಿ ಕಟ್ಟಿದ್ದ ಜಾನುವಾರುಗಳನ್ನೂ ರಾತ್ರಿ ಹೊತ್ತು ಕದಿಯುವ ಗ್ಯಾಂಗ್ ಕೂಡ ಸಕ್ರಿಯವಾಗಿತ್ತು. ಕ್ರೆಟಾ, ಇನ್ನೋವಾ, ಬೊಲೆರೋದಂತಹ ದುಬಾರಿ ಕಾರುಗಳಲ್ಲೇ ಜಾನುವಾರುಗಳನ್ನು ಹೊತ್ತೊಯ್ಯತ್ತಿದ್ದರು.
ಕೆಲವು ಕಡೆ ಸಿಸಿ ಕ್ಯಾಮೆರಾದಲ್ಲಿ ಕಳ್ಳರ ಚಿತ್ರ ಸೆರೆಯಾದರೂ ಆರೋಪಿಗಳು ಪತ್ತೆ ಆಗುತ್ತಿರಲಿಲ್ಲ. ರೈತರು ವಿವಿಧ ಪೊಲೀಸ್ ಠಾಣೆಗಳಿಗೆ ದೂರು ನೀಡಿದರೂ ಪ್ರಯೋಜನ ಆಗುತ್ತಿರಲಿಲ್ಲ. ದನಗಳವಿನ ಜಾಲ ಮಾತ್ರ ತನ್ನ ಕಬಂಧಬಾಹು ವಿಸ್ತರಿಸಿಕೊಳ್ಳುತ್ತಲೇ ಇತ್ತು. ಆದ್ರೆ ಈಗ ಎಲ್ಲವೂ ಥಂಡಾ ಹೊಡೆದಿದೆ.
ಚಿಕ್ಕಮಗಳೂರು: ಹಿಂದಿನ ಗೋಹತ್ಯೆ ನಿಷೇಧ ಕಾಯಿದೆಗೆ ರಾಜ್ಯ ಸರಕಾರ ಕೆಲವು ಮಾರ್ಪಡು ಮಾಡಿ ಜಾರಿಗೆ ತಂದಿದ್ದೇ ತಡ ಗೋಕಳ್ಳರು, ಗೋಹತ್ಯೆ ದಂಧೆ ನಡೆಸುತ್ತಿದ್ದವರಿಗೆ ನಡುಕ ಶುರುವಾಗಿ ಇಡೀ ವ್ಯವಹಾರವೇ ಗಪ್ಚುಪ್ ಆಗಿದೆ.
ಇತ್ತೀಚೆಗೆ ಗ್ರಾಮೀಣ ಭಾಗದ ರೈತರನ್ನು ಪುಸಲಾಯಿಸಿ ಕಡಿಮೆ ಬೆಲೆಯಲ್ಲಿ ದನಗಳನ್ನು ಖರೀದಿಸುವ ದೊಡ್ಡ ಜಾಲವೇ ತಲೆ ಎತ್ತಿತ್ತು. ಬೆಳ್ಳಂಬೆಳಗ್ಗೆಯೇ ವ್ಯವಹಾರ ಕುದುರಿಸಿ ಸೂರ್ಯೋದಯಕ್ಕೂ ಮುನ್ನವೇ ಗೋಡ್ಸ್ ಗಾಡಿಯಲ್ಲಿ ಕಸಾಯಿ ಖಾನೆಗೆ ರಾಸುಗಳು ರವಾನೆ ಆಗುತ್ತಿದ್ದವು.
ಜತೆಗೆ ರಸ್ತೆ ಬದಿಯಲ್ಲಿ ಮಲಗಿದ್ದ ಬಿಡಾಡಿ ದನಗಳು, ಕೊಟ್ಟಿಗೆಯಲ್ಲಿ ಕಟ್ಟಿದ್ದ ಜಾನುವಾರುಗಳನ್ನೂ ರಾತ್ರಿ ಹೊತ್ತು ಕದಿಯುವ ಗ್ಯಾಂಗ್ ಕೂಡ ಸಕ್ರಿಯವಾಗಿತ್ತು. ಕ್ರೆಟಾ, ಇನ್ನೋವಾ, ಬೊಲೆರೋದಂತಹ ದುಬಾರಿ ಕಾರುಗಳಲ್ಲೇ ಜಾನುವಾರುಗಳನ್ನು ಹೊತ್ತೊಯ್ಯತ್ತಿದ್ದರು.
ಕೆಲವು ಕಡೆ ಸಿಸಿ ಕ್ಯಾಮೆರಾದಲ್ಲಿ ಕಳ್ಳರ ಚಿತ್ರ ಸೆರೆಯಾದರೂ ಆರೋಪಿಗಳು ಪತ್ತೆ ಆಗುತ್ತಿರಲಿಲ್ಲ. ರೈತರು ವಿವಿಧ ಪೊಲೀಸ್ ಠಾಣೆಗಳಿಗೆ ದೂರು ನೀಡಿದರೂ ಪ್ರಯೋಜನ ಆಗುತ್ತಿರಲಿಲ್ಲ. ದನಗಳವಿನ ಜಾಲ ಮಾತ್ರ ತನ್ನ ಕಬಂಧಬಾಹು ವಿಸ್ತರಿಸಿಕೊಳ್ಳುತ್ತಲೇ ಇತ್ತು. ಆದ್ರೆ ಈಗ ಎಲ್ಲವೂ ಥಂಡಾ ಹೊಡೆದಿದೆ.