ಆ್ಯಪ್ನಗರ

6ರಿಂದ ಚುಂಚೋತ್ಸವ, ಅಧ್ಯಯನ ಕೇಂದ್ರ ಉದ್ಘಾಟನೆ

ಆದಿಚುಂಚನಗಿರಿ ಶಿಕ್ಷ ಣ ಸಂಸ್ಥೆ ಆವರಣದಲ್ಲಿ ಜ.6ರಿಂದ ಮೂರು ದಿನ ಚುಂಚೋತ್ಸವ 2019 ಏರ್ಪಡಿಸಲಾಗಿದೆ ಎಂದು ಬಿಜಿಎಸ್‌ ಶಿಕ್ಷ ಣ ಸಂಸ್ಥೆಯ ಪ್ರಾಂಶುಪಾಲ ನಾಗೇಶ್‌ ಹೇಳಿದರು.

Vijaya Karnataka 3 Jan 2019, 5:00 am
ಶೃಂಗೇರಿ: ಆದಿಚುಂಚನಗಿರಿ ಶಿಕ್ಷ ಣ ಸಂಸ್ಥೆ ಆವರಣದಲ್ಲಿ ಜ.6ರಿಂದ ಮೂರು ದಿನ ಚುಂಚೋತ್ಸವ 2019 ಏರ್ಪಡಿಸಲಾಗಿದೆ ಎಂದು ಬಿಜಿಎಸ್‌ ಶಿಕ್ಷ ಣ ಸಂಸ್ಥೆಯ ಪ್ರಾಂಶುಪಾಲ ನಾಗೇಶ್‌ ಹೇಳಿದರು.
Vijaya Karnataka Web CKM-2SRI2


ಅವರು ಶಿಕ್ಷ ಣ ಸಂಸ್ಥೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಗದ್ಗುರು ಬಾಲಗಂಗಾಧರನಾಥ ಸ್ವಾಮೀಜಿಯವರ 75ನೇ ಜಯಂತಿ ಅಮೃತ ಮಹೋತ್ಸವ ಅಂಗವಾಗಿ ಸಂಸ್ಥೆಯಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಜ್ಞಾನ ವಿಜ್ಞಾನ ಅಧ್ಯಯನ ಕೇಂದ್ರವನ್ನು ಮಹಾಸಂಸ್ಥಾನದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಜ.6ರ ಸಂಜೆ 5ಕ್ಕೆ ಬಿಜಿಎಸ್‌ ಧ್ವಜ ಪ್ರತಿಷ್ಠಾಪನೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. 7ರಂದು ಬೆಳಗ್ಗೆ ಸಾಮೂಹಿಕ ಸತ್ಯನಾರಾಯಣ ವ್ರತ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಪ್ರಾಣ ಪ್ರತಿಷ್ಠಾಪನೆ, ತುಂಗಾ ನದಿಯಲ್ಲಿ ಗಂಗಾ ಪೂಜೆ, ಚಂಡಿಕಾ ಪೂಜೆ ಸ್ವಾಮೀಜಿಯವರ ಆಶೀರ್ವಚನ ನಡೆಯಲಿದೆ.

ಸಂಜೆ ನಡೆಯುವ ಚುಂಚೋತ್ಸವ, ಬಿಎಡ್‌ ಮತ್ತು ಪಿಯು ಕಾಲೇಜಿನ ದಶಮಾನೋತ್ಸವ ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಸಂಸದೆ ಶೋಭಾ ಕರಂದ್ಲಾಜೆ ವಹಿಸಲಿದ್ದಾರೆ. ತುಮಕೂರು ಕ್ಷೇತ್ರದ ಸಂಸದ ಮುದ್ದುಹನುಮೇಗೌಡ, ಶಾಸಕ ಟಿ.ಡಿ.ರಾಜೇಗೌಡ, ವಿಧಾನ ಪರಿಷತ್‌ ಉಪಸಭಾಪತಿ ಎಸ್‌.ಎಲ್‌.ಧರ್ಮೇಗೌಡ, ಸದಸ್ಯ ಎಸ್‌.ಎಲ್‌.ಬೋಜೇಗೌಡ, ಮಾಜಿ ಶಾಸಕ ಡಿ.ಎನ್‌.ಜೀವರಾಜ್‌, ಕುವೆಂಪು ವಿವಿ ಉಪಕುಲಪತಿ ಪ್ರೊ.ಜೋಗನ್‌ಶಂಕರ್‌, ಜಿಲ್ಲಾ ನ್ಯಾಯಾಧೀಶ ಡಾ.ಚಂದ್ರಶೇಖರಶೆಟ್ಟಿ, ಜಿಲ್ಲಾಧಿಕಾರಿ ಡಾ.ಎಂ.ಕೆ.ಶ್ರೀರಂಗಯ್ಯ, ಇಸ್ರೋ ಮಾಜಿ ಅಧ್ಯಕ್ಷ ಕಿರಣ್‌ ಕುಮಾರ್‌ ಭಾಗವಹಿಸಲಿದ್ದಾರೆ.

ಯುವ ವಿಜ್ಞಾನಿ ಎನ್‌.ಎಂ.ಪ್ರತಾಪ್‌ ಅವನ್ನು ಗೌರವಿಸಲಾಗುವುದು. ಜಾಲ್ಮರ ಸುಬ್ರಾವ್‌ ರಚಿಸಿದ ಗುರು ಚರಿತ್ರೆ ಕಥಾ ಕೀರ್ತನೆ ಮಾಲಿಕೆ ಬಿಡುಗಡೆಗೊಳಿಸಲಾಗುತ್ತದೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.

ಜ.8ರಂದು ಬೆಳಗ್ಗೆ 10ಕ್ಕೆ ಶಿಕ್ಷ ಣ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಸಾನ್ನಿಧ್ಯವನ್ನು ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ವಹಿಸಲಿದ್ದು, ಅಧ್ಯಕ್ಷ ತೆಯನ್ನು ತಹಸೀಲ್ದಾರ್‌ ಎಂ.ಭಾಗ್ಯವಹಿಸಲಿದ್ದಾರೆ. ಸ್ಥಳೀಯ ಜಿ.ಪಂ ಹಾಗೂ ವಿವಿಧ ಜನಪ್ರತಿನಿಧಿಗಳು ಉಪಸ್ಥಿತರಿರಲಿದ್ದಾರೆ.

ಸಂಜೆ 5ಕ್ಕೆ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ವಿವಿಧ ಶಾಖಾ ಮಠದ ಸ್ವಾಮೀಜಿಗಳು ಉಪಸ್ಥಿತರಿದ್ದು, ಸಂಸ್ಥೆಯ ಉನ್ನತ ಶಿಕ್ಷ ಣದ ಸಿಇಒ ಡಾ.ಎನ್‌.ಎಸ್‌.ರಾಮೇಗೌಡ ವಹಿಸಲಿದ್ದಾರೆ. ಹಿರಿಯ ಕಲಾವಿದ ಶಿವರಾಂ, ನೈಸರ್ಗಿಕ ಕೃಷಿಯಲ್ಲಿ ಸಾಧನೆ ಮಾಡಿದ ಮಂಗಳಮುಖಿ ಅಂಜು ಮತ್ತು ಡಿ.ಸೋಭ್ಯಾನಾಯಕ್‌ ಅವರನ್ನು ಗೌರವಿಸಲಾಗುವುದು. ಸಮಾರೋಪ ಭಾಷಣವನ್ನು ಕುವೆಂಪು ವಿವಿಯ ಡಾ.ಎಸ್‌.ಎಸ್‌.ಪಾಟೀಲ್‌ ಮಾಡಲಿದ್ದಾರೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಪ್ರೌಢಶಾಲೆ ಮುಖ್ಯ ಶಿಕ್ಷ ಕ ಕಿರಣ್‌ಕುಮಾರ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ