ಆ್ಯಪ್ನಗರ

ಗ್ರಂಥಾಲಯಗಳಿಂದ ಉತ್ತಮ ಮೌಲ್ಯ ವೃದ್ಧಿ

ಗ್ರಂಥಾಲಯಗಳು ಉತ್ತಮ ಮೌಲ್ಯಗಳನ್ನು ಬೆಳೆಸುವುದರೊಂದಿಗೆ ವೈಚಾರಿಕ ಸಂಸ್ಕೃತಿ ಸಂಸ್ಕಾರಗಳನ್ನು ಕೊಡುತ್ತವೆ ಎಂದು ಸಾಹಿತಿ ಚೆಟ್ನಳ್ಳಿ ಮಹೇಶ್‌ ಹೇಳಿದರು.

Vijaya Karnataka 5 Nov 2018, 5:00 am
ಸಖರಾಯಪಟ್ಟಣ : ಗ್ರಂಥಾಲಯಗಳು ಉತ್ತಮ ಮೌಲ್ಯಗಳನ್ನು ಬೆಳೆಸುವುದರೊಂದಿಗೆ ವೈಚಾರಿಕ ಸಂಸ್ಕೃತಿ ಸಂಸ್ಕಾರಗಳನ್ನು ಕೊಡುತ್ತವೆ ಎಂದು ಸಾಹಿತಿ ಚೆಟ್ನಳ್ಳಿ ಮಹೇಶ್‌ ಹೇಳಿದರು.
Vijaya Karnataka Web CKM-4onkar2


ಪಟ್ಟಣ ಸಮೀಪದ ಗುಬ್ಬಿಹಳ್ಳಿ ಗ್ರಾಮದಲ್ಲಿ ಭಾನುವಾರ ವಿವೇಕ ಕನ್ನಡ ಬಳಗ ಮತ್ತು ಗ್ರಾಮಸ್ಥರು ಸೇರಿಕೊಂಡು ಗ್ರಾಮೀಣ ಗ್ರಂಥಾಲಯ ಪ್ರಾರಂಭೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಊರಿಗೆ ದೇವಾಲಯ ಇಲ್ಲದಿದ್ದರೂ ಗ್ರಂಥಾಲಯವಿರಬೇಕು ಎಂದು ಆಶಿಸಿದರು.

ಪ್ರಾಸ್ತಾವಿಕ ನಿವೃತ್ತ ಉಪನ್ಯಾಸಕ ಬಸವರಾಜಪ್ಪ ಮಾತನಾಡಿ, ಪ್ರಥಮವಾಗಿ ಕನ್ನಡ ರಾಜ್ಯೋತ್ಸವದ ಜತೆಗೆ ಗ್ರಾಮೀಣ ಗ್ರಂಥಾಲಯವನ್ನು ರಂಗಮಂದಿರದಲ್ಲಿ ಪ್ರಾರಂಭಿಸಲಾಗಿದೆ.ಇದರಲ್ಲಿ ಕೃಷಿ, ಆರೋಗ್ಯ, ಶಿಕ್ಷ ಣ, ಕಥೆ,ನಾಟಕ , ಕಾದಂಬರಿ, ತಾಂತ್ರಿಕತೆಗೆ ಸಂಬಂಧಿಸಿದ ಅನೇಕ ಪುಸ್ತಕಗಳು ಇವೆ.ಇಂದು ಸುಮಾರು 500 ಜನರಿಗೆ ನುರಿತ 6 ಜನ ವೈದ್ಯರುಗಳಿಂದ ಆರೋಗ್ಯ ತಪಾಸಣೆ ಏರ್ಪಡಿಸಿದ್ದು ಸಾರ್ವಜನಿಕರು ಮತ್ತು ಸುತ್ತಮುತ್ತಲ ಗ್ರಾಮಸ್ಥರು ಸಹಕರಿಸಬೇಕು ಎಂದರು.

ನಿವೃತ್ತ ಹಿರಿಯ ಉಪನ್ಯಾಸಕ ತಿಪ್ಪೇ ರುದ್ರಪ್ಪ ಮಾತನಾಡಿ, ಯುವಸಮೂಹ ಕೆಟ್ಟು ಹೋಗುತ್ತಿದೆ ಎಂಬ ಆಪಾದನೆ ಇದೆ. ಅದನ್ನು ಅಲ್ಲಗಳೆಯುವಂತೆ ಗುಬ್ಬಿಹಳ್ಳಿ ಗ್ರಾಮಸ್ಥರು ಮತ್ತು ಯುವಕರು ಸೇರಿ ಜನರಲ್ಲಿ ಸಾಮಾಜಿಕ ಪ್ರಜ್ಞೆ ಬೆಳೆಸಲು ಗ್ರಂಥಾಲಯಪ್ರಾರಂಭಿಸಿ ಶಿಕ್ಷ ಣದ ಜತೆಗೆ ಆರೋಗ್ಯವನ್ನು ಸಹ ಕೊಡುತ್ತಿರುವುದು ಹೆಮ್ಮೆಯ ಸಂಗತಿ ನೆಂದರು.

ಗ್ರಂಥಾಲಯ ಸ್ಥಾಪನೆಯ ರೂವಾರಿ ಡಾ.ಸುನಿಲ್‌ಕುಮಾರ್‌ ಮಾತನಾಡಿ,ಮಕ್ಕಳಿಗೆ ಉತ್ತಮ ಶಿಕ್ಷ ಣವನ್ನು ನೀಡಿ ಸಮಾಜಕ್ಕೆ ಏನಾದರೂ ಕೊಡುಗೆ ನಿಡಬೇಕು ಎನ್ನುವ ಕಳಕಳಿ ನಮ್ಮದಾಗಿದೆ ಎಂದರು. ಡಾ.ಮೋಹನ್‌, ಪಿಡಿಒ ರುದ್ರಾಂಬಿಕಾ, ಗ್ರಾ.ಪಂ.ಅಧ್ಯಕ್ಷೆ ಆಶಾಮೋಹನ್‌, ಉಪಾಧ್ಯಕ್ಷ ರತ್ನಾಕರ್‌, ಗ್ರಾ.ಪಂ.ಸದಸ್ಯ ಶಾಂತಕುಮಾರ್‌ , ಪ್ರಾಂಶುಪಾಲ ಪ್ರವೀಣ್‌ ಮಾತನಾಡಿದರು. ಸಭೆಯಲ್ಲಿ ಜಿ.ಪಂ.ನ ಮಾಜಿ ಸದಸ್ಯ ಸದಾಶಿವಪ್ಪ, ಉದ್ಯಮಿ ಆನಂದಮೂರ್ತಿ, ಅಡಿಕೆ ವರ್ತಕ ಪ್ರಸನ್ನಕುಮಾರ್‌, ಬಸವೇಶ್ವರ ಸಮುದಾಯಭವನದ ಅಧ್ಯಕ್ಷ ಚೆನ್ನಬಸಪ್ಪ, ನಿವೃತ್ತ ಶಿಕ್ಷ ಕ ನಿಂಗಪ್ಪ, ಸದಾಶಿವಪ್ಪ , ಓಂಕಾರಪ್ಪ, ವಿವೇಕಬಳಗದ ಹರೀಶ್‌, ವಸಂತ, ಸುನಿಲ್‌, ಪ್ರಸನ್ನ, ಸಂಜು, ರತ್ನಾಕರ, ಯತೀಶ, ಮನು, ಕಿರಣ್‌, ಶಶಿ, ಪ್ರಮೋದ್‌, ಸಂಜು, ಮಲ್ಲಿಕಾರ್ಜುನ್‌,ಜಗದೀಶ್‌, ಡಾ.ಸಂತೋಷ್‌, ಡಾ.ಆದರ್ಶ, ಡಾ.ಮನೋಜ, ಡಾ.ಸಚಿನ್‌,ಡಾ.ಹೇಮಂತ, ಡಾ.ಪೂರ್ಣಿಮ, ಡಾ.ಹೆಬ್ಬಾರ್‌ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಸಮಾರಂಭದ ಅಧ್ಯಕ್ಷ ತೆಯನ್ನು ವಿವೇಕ ಬಳಗದ ಅಧ್ಯಕ್ಷ ಹಾಗೂ ಗ್ರಾ.ಪಂ.ನ ಮಾಜಿ ಉಪಾಧ್ಯಕ್ಷ ಜಿ.ಎಂ.ನಟರಾಜ ವಹಿಸಿ ಮಾತನಾಡಿದರು. ಶಿಕ್ಷ ಕಿ ಶೀಲ ಸ್ವಾಗತಿಸಿ, ಶಿಕ್ಷ ಕ ನವೀನ್‌ಕುಮಾರ್‌ ನಿರೂಪಿಸಿ , ಉಪನ್ಯಾಸಕಿ ರಶ್ಮಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ