ಆ್ಯಪ್ನಗರ

ಮತ್ತೆ ಆತಂಕ ಹೆಚ್ಚಿಸಿದ ಮಳೆ

ಕಳಸ ಭಾಗದಲ್ಲಿಮಳೆಯ ಅಬ್ಬರ ಮುಂದುವರಿದಿದ್ದು, ಪ್ರವಾಹ ಪೀಡಿತ ಪ್ರದೇಶಗಳ ಕುಟುಂಬಗಳು ಮತ್ತೆ ಸಂಕಷ್ಟ ಎದುರಿಸುವಂತಾಗಿದೆ.

Vijaya Karnataka 6 Sep 2019, 9:16 pm
ಕಳಸ: ಕಳಸ ಭಾಗದಲ್ಲಿಮಳೆಯ ಅಬ್ಬರ ಮುಂದುವರಿದಿದ್ದು, ಪ್ರವಾಹ ಪೀಡಿತ ಪ್ರದೇಶಗಳ ಕುಟುಂಬಗಳು ಮತ್ತೆ ಸಂಕಷ್ಟ ಎದುರಿಸುವಂತಾಗಿದೆ.
Vijaya Karnataka Web 5KLS3_35


ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಇಲ್ಲಿಯ ಜನರನ್ನು ಮತ್ತೆ ನಿದ್ದೆಗೆಡಿಸಿದೆ. ಮಳೆ ಎಷ್ಟಾದರೂ ಬರಲಿ ಎನ್ನುತ್ತಿದ್ದ ಮಲೆನಾಡಿಗರು ಈಗ ನೀರು ಕಂಡರೆ ಹೆದರುವಂತಾಗಿದೆ. ಬುಧವಾರ ಸಂಜೆಯಿಂದ ಗಾಳಿಯೊಂದಿಗೆ ಮಳೆಯ ಪ್ರಮಾಣವೂ ಹೆಚ್ಚಾಗಿ ಕಾಣುತ್ತಿದೆ. ಹೊರನಾಡು, ಬಲಿಗೆ, ಹಳುವಳ್ಳಿ, ಕುದುರೆಮುಖ, ಸಂಸೆ, ಮರಸಣಿಗೆ, ಹಿರೇಬೈಲು, ಕಾರ್ಲೆ, ಚನ್ನಡ್ಲು, ಕಳಕ್ಕೋಡು, ಬಾಳೆಹೊಳೆ ಮುಂತಾದ ಬಾಗಗಳಲ್ಲಿನಿರಂತರವಾಗಿ ಮಳೆ ಸುರಿಯುತ್ತಿದೆ.

ಕಳೆದ ಇಪ್ಪತೈದು ದಿನಗಳ ಹಿಂದೆ ಪ್ರವಾಹಕ್ಕೆ ತುತ್ತಾದ ಪ್ರದೇಶದ ಕುಟುಂಬಗಳು ನಂತರದ ದಿನಗಳಲ್ಲಿಬಿಸಿಲು ಕಂಡಾಗ ಅಬ್ಬಾ ಈ ಮಳೆ ಕಡಿಮೆಯಾಯಿತು ಎಂದುಕೊಂಡು ಮನೆಗೆ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಿ, ರಸ್ತೆಗಳನ್ನು ಸರಿ ಪಡಿಸಿ, ಮನೆಯಿಂದ ದೂರ ಉಳಿದವರು ಮತ್ತೆ ತಮ್ಮ ಮನೆಗಳಿಗೆ ವಾಪಾಸಾಗಿ ಸಹಜ ಸ್ಥಿತಿಗೆ ಮರಳುತ್ತಿರುವಾಗಲೇ ಮತ್ತೆ ಮಳೆ ಸುರಿಯಲಾರಂಭಿಸಿದೆ. ಸುರಿಯುತ್ತಿರುವ ಮಳೆಯಿಂದ ಮಣ್ಣು ಮನೆಯೊಳಗೆ ಬರುತ್ತಿದೆ. ಗುಡ್ಡಗಳು ಕುಸಿದ ಪ್ರದೇಶಗಳಲ್ಲಿಮತ್ತೆ ಗುಡ್ಡಗಳು ಕುಸಿಯಲಾರಂಭಿಸಿವೆ. ಅಪಾಯದಲ್ಲಿರುವ ಮನೆಗಳ ಕುಟುಂಬದವರು ಮನೆ ತೊರೆದು ಬೇರೆಡೆ ಸ್ಥಳಾಂತರವಾಗುತ್ತಿದ್ದಾರೆ. ನಾಟಿ ಮಾಡಿದ ಗದ್ದೆಗಳು ಮುಳುಗುವ ಹಂತಕ್ಕೆ ಬಂದಿವೆ. ರಸ್ತೆಗಳು ನೀರಿನಿಂದ ಮುಳುಗುತ್ತಿವೆ. ಇಳಿಮುಖವಾಗಿದ್ದ ಭದ್ರಾ ನದಿ ಮತ್ತೆ ತುಂಬಿ ಹರಿಯಲಾರಂಭಿಸಿದೆ. ಅತಿಹೆಚ್ಚು ಹಾನಿಗೊಳಗಾದ ಚನ್ನಡ್ಲುಪ್ರದೇಶದಲ್ಲಿಮತ್ತೆ ಗುಡ್ಡ ಜರಿತ ಪ್ರಾರಂಭಗೊಂಡಿದೆ. ಕಳಸ-ಹೊರನಾಡು ರಸ್ತೆಯ ಭದ್ರಾ ನದಿಯ ಹೆಬ್ಬೋಳೆ ಸೇತುವೆ ಮುಳುಗುವ ಹಂತಕ್ಕೆ ಬಂದಿದೆ. ನದಿಪಾತ್ರದ ಪ್ರದೇಶಗಳು ಜಲಾವೃತಗೊಂಡಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ