ಆ್ಯಪ್ನಗರ

ಯೋಗ ಪರಿಚಯಿಸಿದ ಕೀರ್ತಿ ಭಾರತದ್ದು

ಯೋಗಕ್ಕೆ ವಯಸ್ಸಿನ ಮಿತಿಯಿಲ್ಲ. ಯಾರು ಬೇಕಾದರೂ ಯೋಗಾಸನ ಮಾಡಬಹುದು ಎಂದು ಕ್ಷೇತ್ರ ಶಿಕ್ಷ ಣಾಧಿಕಾರಿ ಪಿ.ನಾಗರಾಜ್‌ ಹೇಳಿದರು.

Vijaya Karnataka 22 Jun 2019, 5:00 am
ನರಸಿಂಹರಾಜಪುರ : ಯೋಗಕ್ಕೆ ವಯಸ್ಸಿನ ಮಿತಿಯಿಲ್ಲ. ಯಾರು ಬೇಕಾದರೂ ಯೋಗಾಸನ ಮಾಡಬಹುದು ಎಂದು ಕ್ಷೇತ್ರ ಶಿಕ್ಷ ಣಾಧಿಕಾರಿ ಪಿ.ನಾಗರಾಜ್‌ ಹೇಳಿದರು.
Vijaya Karnataka Web CKM-21NRP3


ಪಟ್ಟಣದ ಕರ್ನಾಟಕ ಪಬ್ಲಿಕ್‌ ಶಾಲೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಶಿಕ್ಷ ಣ ಇಲಾಖೆ ಮತ್ತು ಜೇಸಿ ಸಂಸ್ಥೆ ಶುಕ್ರವಾರ ಆಯೋಜಿಸಿದ್ದ ಯೋಗಭ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯೋಗ ಮಾಡುವುದರಿಂದ ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗಬಹುದು. ಯೋಗವನ್ನು ಜೀವನದ ಒಂದು ಅಂಗವನ್ನಾಗಿ ಮಾಡಿಕೊಂಡವರು ಆರೋಗ್ಯವಂತರಾಗಿ ಹೆಚ್ಚು ವರ್ಷಗಳ ಕಾಲ ಬದುಕಲು ಸಾಧ್ಯವಾಗುತ್ತದೆ. ಯೋಗದ ಮಹತ್ವ ಅರಿತ ಸರಕಾರ ಪಠ್ಯಪುಸ್ತಕದಲ್ಲಿ ಅಳವಡಿಸಿದೆ. ಮಕ್ಕಳು ಯೋಗ ಮಾಡುವುದರಿಂದ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ. ಪ್ರಪಂಚಕ್ಕೆ ಯೋಗವನ್ನು ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲುತ್ತದೆ. ಯೋಗ ಪಿತಮಹಾ ಪತಾಂಜಲಿ ಮಹರ್ಷಿ ದೇಶಕ್ಕೆ ಉತ್ತಮವಾದ ಕೊಡುಗೆ ನೀಡಿದ್ದಾರೆ ಎಂದರು.

ಜೇಸಿ ಸಂಸ್ಥೆಯ ವಲಯಾಧಿಕಾರಿ ಪೂರ್ಣೇಶ್‌ ಮಾತನಾಡಿ, 40ರ ವಯಸ್ಸಿನ ನಂತರ ಬಿಪಿ, ಸಕ್ಕರೆ ಕಾಯಿಲೆ ಈಗಿನ ವಾತಾವರಣದಲ್ಲಿ ಕಟ್ಟಿಟ್ಟ ಬುತ್ತಿಯಾಗಿದೆ. ಆದರಿಂದ ಯುವಜನರು ತಮ್ಮ ಸಣ್ಣ ವಯಸ್ಸಿನಲ್ಲಿಯೇ ಯೋಗವನ್ನು ಅಭ್ಯಾಸ ಮಾಡಿ. ದಿನಕ್ಕೆ ಅರ್ಥಗಂಟೆ ಕಾಲ ಯೋಗಭ್ಯಾಸ ಮಾಡುವುದರಿಂದ ಖಂಡಿತವಾಗಿಯೂ ಅರೋಗ್ಯದಲ್ಲಿ ಸುಧಾರಣೆ ಸಾಧಿಸಿ ದಿನಪೂರ್ತಿ ಉತ್ಸಾಹದಿಂದ ಇರಲು ಅನುಕೂಲವಾಗುತ್ತದೆ ಎಂದರು.

ಜೇಸಿ ಅಧ್ಯಕ್ಷ ನಾಗೇಶ್‌ರೆಡ್ಡಿ ಮಾತನಾಡಿ, ಇಂದು ವಿಶ್ವಾದ್ಯಂತ ಯೋಗ ದಿನ ಆಚರಿಸಲಾಗುತ್ತಿದೆ. ಅದೇ ರೀತಿ ನಮ್ಮ ಸಂಸ್ಥೆಯಿಂದ ಶಾಲಾ ಮಕ್ಕಳಿಗೆ ಯೋಗಭ್ಯಾಸ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.

ಧ್ರುವತಾರೆ ಕನ್ನಡ ರಕ್ಷ ಣ ವೇದಿಕೆ ಕ್ಷೇತ್ರಾಧ್ಯಕ್ಷ ದೇವರಾಜ್‌ ಮಾತನಾಡಿ, ಪ್ರತಿ ವರ್ಷ ಜೂನ್‌ 21ರಂದು ವಿಶ್ವ ಯೋಗ ದಿನಾಚರಣೆ ಆಚರಿಸುತ್ತಿದ್ದು, ಈ ವರ್ಷ ಹೃದಯಕ್ಕಾಗಿ ಯೋಗ ಎಂಬ ವೇದ ವಾಕ್ಯದೊಂದಿಗೆ ಇಂದು ವಿಶ್ವದೆಲ್ಲೆಡೆ ಯೋಗ ದಿನಾಚರಣೆ ಆಚರಿಸುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ವಿಶ್ವಕ್ಕೆ ಯೋಗದ ಮಹತ್ವವನ್ನು ಪರಿಚಯಿಸಬೇಕು ಎಂಬ ಉದ್ದೇಶದಿಂದ ವಿಶ್ವದೆಲ್ಲೆಡೆ ಪ್ರತಿ ವರ್ಷ ಜೂನ್‌ 21ರಂದು ವಿಶ್ವ ಯೋಗ ದಿನ ಆಚರಣೆ ಮಾಡುವಂತೆ ವಿಶ್ವ ಸಂಸ್ಥೆಯಲ್ಲಿ ಸಲಹೆ ನೀಡಿದ್ದರು. ಇಂದು 175 ರಾಷ್ಟಗಳು ವಿಶ್ವ ಯೋಗ ದಿನಾಚರಣೆ ಆಚರಿಸುತ್ತಿವೆ ಎಂದರು.

ಮುಖ್ಯಶಿಕ್ಷ ಕಿ ಶಿವಮ್ಮ, ದೈಹಿಕ ಶಿಕ್ಷಣ ಶಿಕ್ಷ ಕ ಪ್ರಭುನಾಯ್ಕ, ಜೇಸಿ ಪೂರ್ವಧ್ಯಕ್ಷ ಅಭಿನವಗಿರಿರಾಜ್‌, ಅಪೂರ್ವ ರಾಘು, ಮನು, ಕಾರ್ಯದರ್ಶಿ ಸಮೀರ್‌, ನಿರ್ದೇಶಕ ಗಂಗಾ, ಸದಸ್ಯರಾದ ಚರಣ್‌ರಾಜ್‌, ನಾಗರಾಜ್‌ದೊಡ್ಡಮನಿ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ