ಆ್ಯಪ್ನಗರ

ಕೊಗ್ರೆಯಲ್ಲಿ ಕಂಪನ ಮಾಪಕ ಯಂತ್ರ ಅಳವಡಿಕೆ

ಅತ್ತಿಕೊಡಿಗೆ ಮತ್ತು ಗುಡ್ಡೇತೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಲ್ಲಿ ಆತಂಕ ಹುಟ್ಟಿಸಿದ್ದ ಶಬ್ಧ ಮತ್ತು ಕಂಪನಕ್ಕೆ ಸಂಬಂಧಿಸಿದಂತೆ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳು ಗುರುವಾರ ಕೊಗ್ರೆಮನೆಯ ಕೃಷಿಕ ಕೆ.ಎಸ್‌.ಚಂದ್ರಶೇಖರ್‌ ಅವರ ಮನೆಯಲ್ಲಿ ಭೂ ಕಂಪನ ಮಾಪಕ ಯಂತ್ರ ಅಳವಡಿಸಿದರು.

Vijaya Karnataka 8 Sep 2018, 5:00 am
ಜಯಪುರ : ಅತ್ತಿಕೊಡಿಗೆ ಮತ್ತು ಗುಡ್ಡೇತೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಲ್ಲಿ ಆತಂಕ ಹುಟ್ಟಿಸಿದ್ದ ಶಬ್ಧ ಮತ್ತು ಕಂಪನಕ್ಕೆ ಸಂಬಂಧಿಸಿದಂತೆ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳು ಗುರುವಾರ ಕೊಗ್ರೆಮನೆಯ ಕೃಷಿಕ ಕೆ.ಎಸ್‌.ಚಂದ್ರಶೇಖರ್‌ ಅವರ ಮನೆಯಲ್ಲಿ ಭೂ ಕಂಪನ ಮಾಪಕ ಯಂತ್ರ ಅಳವಡಿಸಿದರು.
Vijaya Karnataka Web CKM-07JPR2


ಚಿಕ್ಕಮಗಳೂರಿನ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿ ಡಾ. ಮಹೇಶ್‌ ಮಾತನಾಡಿ, ಯಂತ್ರಕ್ಕೆ ಸುಮಾರು ನೂರು ಕಿ.ಮೀ. ವ್ಯಾಪ್ತಿಯ ಭೂ ಗರ್ಭದಲ್ಲುಂಟಾಗುವ ಶಬ್ಧ, ಕಂಪನವನ್ನು ಸೆರೆ ಹಿಡಿಯುವ ಸಾಮರ್ಥ್ಯ‌ವಿದೆ., ಕೇಂದ್ರ ಭಾಗದಿಂದಲೇ ಸುಲಭವಾಗಿ ಗುರುತಿಸಬಹುದಾಗಿದೆ. ಆದ್ದರಿಂದ ಜನತೆ ಗಾಬರಿಪಡುವ ಅಗತ್ಯವಿಲ್ಲ. ಯಂತ್ರದ ಬ್ಯಾಟರಿ ಮುಂತಾದ ನಿರ್ವಹಣೆಯ ಜವಾಬ್ದಾರಿಯನ್ನು ಗುಡ್ಡೇತೋಟ ಗ್ರಾ.ಪಂ. ನಿರ್ವಹಿಸಲಿದೆ.ಅಧಿಕಾರಿಗಳ ತಂಡ ಹದಿನೈದು ದಿನಕ್ಕೊಮ್ಮೆ ಭೇಟಿ ನೀಡಲಿದೆ ಎಂದರು.ಸ್ಥಳೀಯರಾದ ಜಯ ಕುಮಾರ್‌, ವೆಂಕಟೇಶ್‌, ಗುಡ್ಡೇತೋಟ ಗ್ರಾ.ಪಂ. ಮಾಜಿ ಅಧ್ಯಕ್ಷ ಗೋಪಾಲ ಭಂಡಾರಿ, ಪಿಡಿಓ ಪುಟ್ಟಪ್ಪ, ಸತೀಶ್‌ ಮತ್ತಿತರರು ಹಾಜರಿದ್ದರು. ಶುಕ್ರವಾರ ಶಾಸಕ ರಾಜೇಗೌಡ ಸ್ಥಳಕ್ಕೆ ಭೇಟಿ ನೀಡಿದ್ದರು.
----------------------------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ