ಆ್ಯಪ್ನಗರ

ಕಾಣಿಹಳ್ಳ ತಡೆಗೋಡೆ ನಿರ್ಮಿಸಲು ಪರಿಶೀಲನೆ

ಪಟ್ಟಣದ ಮೇಲಿನಪೇಟೆಯ ಅಗಸರ ಕೇರಿ ಬಳಿಯಿರುವ ಕಾಣಿ ಹಳ್ಳ ಕಾಲುವೆಗೆ ತಡೆಗೋಡೆ ನಿರ್ಮಿಸಲು ಶನಿವಾರ ಅಧಿಕಾರಿ ತಂಡ ಪರಿಶೀಲನೆ ನಡæಸಿತು.

Vijaya Karnataka 21 Jul 2019, 5:00 am
ಕೊಪ್ಪ : ಪಟ್ಟಣದ ಮೇಲಿನಪೇಟೆಯ ಅಗಸರ ಕೇರಿ ಬಳಿಯಿರುವ ಕಾಣಿ ಹಳ್ಳ ಕಾಲುವೆಗೆ ತಡೆಗೋಡೆ ನಿರ್ಮಿಸಲು ಶನಿವಾರ ಅಧಿಕಾರಿ ತಂಡ ಪರಿಶೀಲನೆ ನಡæಸಿತು.
Vijaya Karnataka Web CKM-20kph4


ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 169ರ ಬಲಭಾಗದಲ್ಲಿರುವ ಗೌರಿಕೆರೆಯಿಂದ ಮಳೆಗಾಲದಲ್ಲಿ ಹೆಚ್ಚಾದ ನೀರು ಕಾಣಿ ಹಳ್ಳ ಕಾಲುವೆ ಮೂಲಕ ಹರಿಯುತ್ತದೆ. ಸುಮಾರು 500 ಮೀ.ಗಿಂತ ಉದ್ದವಿರುವ ಕಾಲುವೆಯಲ್ಲಿ ಕುರುಚಲು ಬೆಳೆದಿದೆ. ತ್ಯಾಜ್ಯ ವಸ್ತು ಸಂಗ್ರಹಿಸಲಾಗಿದೆ. ಪರಿಣಾಮವಾಗಿ ಸುಮಾರು ನಾಲ್ಕು ವರ್ಷದಿಂದ ಪ್ರವಾಹ ಏರುತ್ತಲೆ ಇದೆ. ಹಿಂದೊಮ್ಮೆ ಹಳ್ಳದ ಕಟ್ಟೆ ಒಡೆದು ಅಗಸರ ಕೇರಿಯ ಕೊಟ್ಟಿಗೆಗೆ ನೀರು ಹರಿದು ಎಮ್ಮೆ ಸತ್ತು ಹೋಗಿತ್ತು.

ನಂತರದ ದಿನದಿಂದ ಅಲ್ಲಿನ ನಿವಾಸಿಗಳು ಪ್ರತಿ ಮಳೆಗಾಲ ಮಳೆ ಹೆಚ್ಚಾದಗಲೆಲ್ಲ ರಾತ್ರಿಯೆಲ್ಲ ನಿದ್ದೆಯಿಲ್ಲದೆ ಕಾಲ ಕಳೆಯುತ್ತಿದ್ದಾರೆ. ಗೌರಿಕೆರೆ ತುಂಬಾ ಹೂಳು ತುಂಬಿದ್ದರಿಂದ ಮತ್ತು ಕಾಲುವೆಯಲ್ಲಿ ಕುರುಚಲು ಬೆಳೆದಿದ್ದು, ಮಣ್ಣು ತುಂಬಿರುವುದರಿಂದಾಗಿ ನೆರೆ ಸಂಭವಿಸಿದೆ ಎಂಬುದು ನಿವಾಸಿಗಳ ಅಭಿಪ್ರಾಯವಾಗಿದೆ.

ಪರಿಶೀಲನೆ: ಕಾಣಿ ಹಳ್ಳವನ್ನು ಶಿವಮೊಗ್ಗದ ಬೃಹತ್‌ ನೀರಾವರಿ ಇಲಾಖೆ ಅಧಿಕಾರಿ ತಂಡ ಆಗಮಿಸಿ ಪರಿಶೀಲಿಸಿತು.

ಕಾಂಗ್ರೆಸ್‌ ಮುಖಂಡ ನುಗ್ಗಿ ಮಂಜುನಾಥ್‌ ಮಾತನಾಡಿ, ಹಿಂದೆ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್‌ ಶೃಂಗೇರಿಗೆ ಆಗಮಿಸಿದ್ದಾಗ ಶಾಸಕ ಟಿ.ಡಿ. ರಾಜೇಗೌಡ ಕಾಣಿ ಹಳ್ಳ ದುರಸ್ತಿಗಾಗಿ 50 ಲಕ್ಷ ರೂ. ಪ್ರಸ್ತಾವನೆ ನೀಡಿದ್ದರು. ಆದ್ದರಿಂದ ಅಧಿಕಾರಿ ತಂಡ ಪರಿಶೀಲನೆಗೆ ಬಂದಿದೆ ಎಂದರು.

ಅಧಿಕಾರಿಗಳಾದ ವೀರೇಶ್‌, ಜಗದೀಶ್‌, ಶಶಿಕಾಂತ್‌, ಆದಿಪ್ರಕಾಶ್‌, ಕಾಂಗ್ರೆಸ್‌ ಮುಖಂಡ ಬರ್ಕತ್‌ ಆಲಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ