ಆ್ಯಪ್ನಗರ

ಅಂತರ್ಜಾಲದ ಅಬ್ಬರಕ್ಕೆ ರಂಗ ಚಟುವಟಿಕೆ ಕಣ್ಮರೆ

ಕಾಲಘಟ್ಟ ಬದಲಾದಂತೆ ಅಂತರ್ಜಾಲ ಮಾಧ್ಯಮಗಳು ಕ್ರಾಂತಿಕಾರಕ ಬೆಳವಣಿಗೆಯ ಸ್ವರೂಪ ಪಡೆದುಕೊಳ್ಳುತ್ತಿದ್ದು, ಪರಿಣಾಮವಾಗಿ ಸಂಸ್ಕೃತಿಯ ಮೂಲ ಸತ್ವವಾದ ರಂಗ ಚಟುವಟಿಕೆಗಳು ಕಣ್ಮರೆಯಾಗುತ್ತಿರುವುದು ವಿಷಾಧನೀಯ ಎಂದು ಕೊಪ್ಪ ತಾ.ಪಂ. ಮಾಜಿ ಅಧ್ಯಕ್ಷ ಎನ್‌.ಕೆ.ಉದಯ ಕುಮಾರ್‌ ನೇಫಾ ಹೇಳಿದರು.

Vijaya Karnataka 10 Sep 2019, 5:00 am
ಜಯಪುರ : ಕಾಲಘಟ್ಟ ಬದಲಾದಂತೆ ಅಂತರ್ಜಾಲ ಮಾಧ್ಯಮಗಳು ಕ್ರಾಂತಿಕಾರಕ ಬೆಳವಣಿಗೆಯ ಸ್ವರೂಪ ಪಡೆದುಕೊಳ್ಳುತ್ತಿದ್ದು, ಪರಿಣಾಮವಾಗಿ ಸಂಸ್ಕೃತಿಯ ಮೂಲ ಸತ್ವವಾದ ರಂಗ ಚಟುವಟಿಕೆಗಳು ಕಣ್ಮರೆಯಾಗುತ್ತಿರುವುದು ವಿಷಾಧನೀಯ ಎಂದು ಕೊಪ್ಪ ತಾ.ಪಂ. ಮಾಜಿ ಅಧ್ಯಕ್ಷ ಎನ್‌.ಕೆ.ಉದಯ ಕುಮಾರ್‌ ನೇಫಾ ಹೇಳಿದರು.
Vijaya Karnataka Web 09JPR1_35


ಸಮೀಪದ ಹೇರೂರಿನ ರವಿನಗರದ ರಂಗ ಮಂದಿರದಲ್ಲಿಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಚಂದ್ರಗಿರಿ ಕಲಾ ಪ್ರತಿಷ್ಠಾನ ಆಯೋಜಿಸಿದ್ದ ಮಧುರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಸ್ಥಳೀಯ ಪ್ರತಿಷ್ಠಾನದಲ್ಲಿಬಹುಮುಖ ಪ್ರತಿಭಾವಂತರಿದ್ದು, ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ಶ್ರಮಿಸುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಗ್ರಾಮದ ಹಿರಿಯರಾದ ಸುಂದರಿ, ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಚಂದ್ರಗಿರಿ ದಿನೇಶ್‌, ಹೇರೂರು ಗ್ರಾ.ಪಂ. ಸದಸ್ಯೆ ಪ್ರಭಾವತಿ, ಕಲಾವಿದ ಎಂ.ಕೆ.ಪ್ರದೀಪ್‌ ಹೆಬ್ಬಾರ್‌, ನಟೇಶ್‌, ಸತ್ಯಜಿತ್‌, ಸಾಧನಾ ಹೆಬ್ಬಾರ್‌, ಅನುಷಾ, ಅಪರ್ಣ, ವಿಜೇಂದ್ರ, ಅನುಪಮಾ ದಿನೇಶ್‌ ಮತ್ತಿತರರು ಉಪಸ್ಥಿತರಿದ್ದರು.

ಬಳಿಕ ಪ್ರತಿಷ್ಠಾನದ ಕಲಾವಿದರು ನಡೆಸಿಕೊಟ್ಟ ಉಲ್ಟಾ ಪಲ್ಟ ಹಾಸ್ಯಮಯ ನಾಟಕ ಪ್ರೇಕ್ಷಕರ ಮನ ರಂಜಿಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ