ಆ್ಯಪ್ನಗರ

ಮೂಡಿಗೆರೆಯಲ್ಲಿ ಗುರುಕುಲ ಶಿಕ್ಷಣ ಪರಿಚಯ

ಪ್ರಬೋಧಿನಿ ಗುರುಕುಲದ ಅರ್ಧಮಂಡಲ ಉತ್ಸವ ಅಂಗವಾಗಿ ಸಾರ್ವಜನಿಕರಿಗೆ ಶಿಕ್ಷಣ, ಭಾರತೀಯತೆ, ಗುರುಕುಲದ ಅರಿವು ಮೂಡಿಸಲು ಜೂ.11ರಂದು ಬೆಳಗ್ಗೆ 11ಕ್ಕೆ ಮೂಡಿಗೆರೆಯ ರೈತ ಭವನದಲ್ಲಿ ಕಾರ‍್ಯಕ್ರಮ ಆಯೋಜಿಸಲಾಗಿದೆ ಎಂದು ಸಂಯೋಜಕ ದಿನೇಶ್‌ ದೇವವೃಂದ ಹೇಳಿದರು.

Vijaya Karnataka 2 Jun 2019, 5:00 am
ಚಿಕ್ಕಮಗಳೂರು :ಪ್ರಬೋಧಿನಿ ಗುರುಕುಲದ ಅರ್ಧಮಂಡಲ ಉತ್ಸವ ಅಂಗವಾಗಿ ಸಾರ್ವಜನಿಕರಿಗೆ ಶಿಕ್ಷಣ, ಭಾರತೀಯತೆ, ಗುರುಕುಲದ ಅರಿವು ಮೂಡಿಸಲು ಜೂ.11ರಂದು ಬೆಳಗ್ಗೆ 11ಕ್ಕೆ ಮೂಡಿಗೆರೆಯ ರೈತ ಭವನದಲ್ಲಿ ಕಾರ‍್ಯಕ್ರಮ ಆಯೋಜಿಸಲಾಗಿದೆ ಎಂದು ಸಂಯೋಜಕ ದಿನೇಶ್‌ ದೇವವೃಂದ ಹೇಳಿದರು.
Vijaya Karnataka Web CKM-1ARAGAP4


ಮೂಡಿಗೆರೆಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಭಾರತೀಯ ಶಿಕ್ಷಣ ಪದ್ಧತಿ ಮೂಲಕ ವ್ಯಕ್ತಿಯ ಸಮಗ್ರ ವಿಕಾಸವನ್ನು ಸಾಧಿಸಿ ಸ್ವಸ್ಥ ಸಮಾಜ ನಿರ್ಮಾಣ ಮಾಡುವ ಧ್ಯೇಯದೊಂದಿಗೆ ಶೃಂಗೇರಿ ಸಮೀಪದ ತುಂಗಾ ತಟದಲ್ಲಿರುವ ಹರಿಹರಪುರದ ಪ್ರಬೋಧಿನಿ ಗುರುಕುಲ ಕಳೆದ 24 ವರ್ಷಗಳಿಂದ ಪರೀಕ್ಷೆಯ ಒತ್ತಡರಹಿತ, ಸ್ವಾರ್ಥರಹಿತ, ಉತ್ಕೃಷ್ಠ ಭಾರತೀಯ ಶಿಕ್ಷಣ ನೀಡುತ್ತಿದೆ ಎಂದರು.

ಗುರುಕುಲ ಪದ್ಧತಿ ಇಂದು ವಿಶ್ವಮಾನ್ಯವಾಗುತ್ತಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದು ಬೇರೆ ವಿದ್ಯಾಕೇಂದ್ರಗಳಿಗೆ ಮಾದರಿಯಾಗಿದ್ದಾರೆ. ಕಳೆದ ಒಂದು ವರ್ಷದಿಂದ ಗುರುಕುಲ ಶಿಕ್ಷಣ ಮಹತ್ವವನ್ನು ಸಾರ್ವಜನಿಕರಿಗೆ ಮುಟ್ಟಿಸುವ ಉದ್ದೇಶದಿಂದ ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಅರಿವು ಕಾರ‍್ಯಕ್ರಮ ಮಾಡಲಾಗುತ್ತಿದೆ. ಜಾತಿ, ಪಕ್ಷ ಬೇಧ ಮರೆತು ಸಮಾಜವನ್ನು ಒಗ್ಗೂಡಿಸುವುದು ಉದ್ದೇಶವಾಗಿದೆ ಎಂದು ಹೇಳಿದರು.

ಸ್ವಾಗತ ಸಮಿತಿ ಸದಸ್ಯ ಮಹೇಶ್‌ ಬೆರಣಗೋಡು ಮಾತನಾಡಿ, ಸಮಾಜದ ಪಾಲನೆ, ಪೋಷಣೆ ಅವಲಂಬಿಸಿರುವ ಗುರುಕುಲ ಆಹಾರ, ವಸತಿಯೊಂದಿಗೆ ವೇದ, ವಿಜ್ಞಾನ, ಯೋಗ, ಕೃಷಿ ಮತ್ತು ಕಲೆಗಳೆಂಬ ಪಂಚಮುಖಿ ಶಿಕ್ಷಣವನ್ನು ಬೇಧಭಾವ ಇಲ್ಲದೆ ಸಮಾಜದ ಎಲ್ಲ ವರ್ಗದವರಿಗೂ ಉಚಿತವಾಗಿ ನೀಡುತ್ತಿದೆ ಎಂದರು.

ಅರ್ಧಮಂಡಲೋತ್ಸವ ಸಮಿತಿ ಕಾರಾರ‍ಯಧ್ಯಕ್ಷ ಎಚ್‌.ಪಿ.ರಾಜಗೋಪಾಲ ಅಧ್ಯಕ್ಷತೆ ವಹಿಸಲಿದ್ದು, ಕಜಂಪಾಡಿ ಸುಬ್ರಹ್ಮಣ್ಯ ಭಟ್‌ ಮುಖ್ಯ ಭಾಷಣ ಮಾಡುವರು. ಶಾಸಕ ಡಾ.ಅನಂತಪದ್ಮನಾಭ ಮತ್ತಿತರರು ಪಾಲ್ಗೊಳ್ಳುವರು ಎಂದು ತಿಳಿಸಿದರು.

ಗುರುಕುಲದಲ್ಲಿ 10ನೇ ತರಗತಿ ಶಿಕ್ಷಣ ಪಡೆಯುತ್ತಿರುವ ದರ್ಶನ್‌ ಅವರ ತಂದೆ ಶಶಿ ಕೊಲ್ಲಿಬೈಲ್‌ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌, ದೀಪಕ್‌ ದೊಡ್ಡಯ್ಯ, ಕ.ದಾ.ಕೃಷ್ಣರಾಜು, ಆಶಾಮೋಹನ್‌, ಬಸವರಾಜ್‌, ದಿಲೀಪ್‌ ಕನ್ನಗೆರೆ, ಬಿ.ಎನ್‌.ಜಯಂತ್‌, ಕೆ.ಎಚ್‌.ವೆಂಕಟೇಶ್‌, ಉಪೇಂದ್ರ, ಪ್ರಸನ್ನ ಗೌಡಳ್ಳಿ, ನಯನ ತಳವಾರ, ಸುಂದ್ರೇಶ್‌ ಕೊಣಗೆರೆ, ಉಮಾಶಂಕರ, ಸುಧೀರ್‌, ಪುರುಷೋತ್ತಮ್‌, ನಾರಾಯಣ ಆಚಾರ್‌, ವಿನಯ್‌ ಹಳೆಕೋಟೆ, ಪೂರ್ಣೇಶ್ವರಿ, ಸರೋಜಸುರೇಂದ್ರ, ಉತ್ತಮ್‌, ಪಟೇಲ್‌ ಮಂಜು, ಧನಿಕ್‌, ದೀಕ್ಷಿತ್‌ ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ