ಆ್ಯಪ್ನಗರ

ಬೆಳೆಗಾರರ ನಿದ್ದೆಗೆಡಿಸಿದ ಮತ್ತೆ ಮಳೆ

ಕಳೆದ ಎರಡು ತಿಂಗಳಿನಿಂದ ಮಲೆನಾಡಿನಲ್ಲಿಆವಾಂತರವನ್ನೇ ಸೃಷ್ಟಿಸಿದ್ದ ಮಳೆ ಕಳೆದ ಒಂದು ವಾರದಿಂದ ಕೊಂಚ ಬಿಡುವು ನೀಡಿದ್ದು ಮಲೆನಾಡಿನ ಜನ ನಿಟ್ಟುಸಿರು ಬಿಟ್ಟಿದ್ದರು.ಆದರೆ ಭಾನುವಾರ ರಾತ್ರಿಯಿಂದ ಮತ್ತೆ ಮಳೆ ಆರಂಭಗೊಂಡಿದ್ದು ಬೆಳೆಗಾರರ ನಿದ್ದೆಗೆಡಿಸಿದೆ.

Vijaya Karnataka 18 Sep 2019, 5:00 am
ಆಲ್ದೂರು: ಕಳೆದ ಎರಡು ತಿಂಗಳಿನಿಂದ ಮಲೆನಾಡಿನಲ್ಲಿಆವಾಂತರವನ್ನೇ ಸೃಷ್ಟಿಸಿದ್ದ ಮಳೆ ಕಳೆದ ಒಂದು ವಾರದಿಂದ ಕೊಂಚ ಬಿಡುವು ನೀಡಿದ್ದು ಮಲೆನಾಡಿನ ಜನ ನಿಟ್ಟುಸಿರು ಬಿಟ್ಟಿದ್ದರು.ಆದರೆ ಭಾನುವಾರ ರಾತ್ರಿಯಿಂದ ಮತ್ತೆ ಮಳೆ ಆರಂಭಗೊಂಡಿದ್ದು ಬೆಳೆಗಾರರ ನಿದ್ದೆಗೆಡಿಸಿದೆ.
Vijaya Karnataka Web it rained again on the growers not sleep
ಬೆಳೆಗಾರರ ನಿದ್ದೆಗೆಡಿಸಿದ ಮತ್ತೆ ಮಳೆ


ಕಳೆದ 2 ತಿಂಗಳಿನಿಂದ ಮಲೆನಾಡಿನಾದ್ಯಂತ ಎಡೆಬಿಡದೆ ಸುರಿದ ಮಳೆಗೆ ಜನರ ಬದುಕನ್ನೇ ದುಸ್ತರವಾಗಿಸಿದೆ. ಕಾಫಿ ತೋಟಗಳು ,ಗದ್ದೆಗಳು,ಮನೆಗಳಿಗೆ ಹಾನಿಯಾಗಿದ್ದು ಕಾಫಿ ತೋಟಗಳಲ್ಲಿ ಕಾಯಿಗಟ್ಟಿರುವ ಕಾಫಿ ಕೊಳೆತು ನೆಲಕಚ್ಚುತ್ತಿದೆ. ಜತೆಗೆ ಕಾಫಿ ಎಲೆಗಳು ಉದುರುತ್ತಿದ್ದು ಬೋಳಾಗಿ ನಿಂತಿರುವ ಗಿಡಗಳು ಬೆಳೆಗಾರರ ನೆಮ್ಮದಿ ಕಸಿದಿದೆ. ಇದರ ಜತೆಗೆ ಬೆಳೆಗಾರರ ಆಪತ್ಬಾಂಧವನಂತಿರುವ ಕಾಳು ಮೆಣಸು ಕಾಳು ಗಟ್ಟುವ ಮೊದಲೆ ಉದುರುತ್ತಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕೆಲವು ಪ್ರತಿಷ್ಟಿತ ಕಾಫಿ ತೋಟಗಳಲ್ಲಿ ಕಾಫಿ ತೋಟದ ನಿರ್ವಹಣೆ ಕೈ ಬಿಟ್ಟಿದ್ದು ಕಾರ್ಮಿಕರಿಗೆ ಕೆಲಸವಿಲ್ಲದೆ ಮನೆಯಲ್ಲಿಕೂರುವ ಸ್ಥಿತಿ ನಿರ್ಮಾಣವಾಗಿದೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ತೋಟಗಳು ಪಾಳು ಬೀಳುತ್ತಿವೆ. ಮಳೆ ಮತ್ತೆ ಪ್ರಾರಂಭವಾಗಿದ್ದು ಬೆಳೆಗಾರರು ತೋಟಗಳಿಗೆ ಔಷಧಿ ಸಿಂಪಡನೆಗೂ ಬಿಡುವು ನೀಡುತ್ತಿಲ್ಲ. ಜೂನ್‌ ತಿಂಗಳ ಮೊದ ವಾರದಲ್ಲಿಔಷದಿ ಸಿಂಪಡಿಸಿದ್ದು ಮಳೆ ಮತ್ತೆ ಬಿಡುವು ನೀಡಿಲ್ಲ. ಕಾಫಿ ಗಿಡಗಳು ಕೊಳೆಯುತ್ತಿದ್ದು ಮೊದಲ ಸಿಂಪಡಿಸಿದ್ದ ಔಷಧಿ ಸತ್ವವನ್ನು ಕಳೆದುಕೊಂಡಿದೆ. ಕಾಫಿ ಬೆಳೆಗಾರರೆಂದರೆ ವೈಭವದ ಜೀವನ ನಡೆಸುವವರು ಎನ್ನುತ್ತಿದ್ದ ಕಾಲ ಮರೆಯಾಗಿದೆ. ದಿನ ಕಳೆದಂತೆ ಬೆಳೆಗಾರರ ಬದುಕು ದುಸ್ತರವಾಗುತ್ತಿದೆ. ಇತ್ತ ಕಾಫಿ ತೋಟಗಳನ್ನು ಕೈ ಬಿಡಲು ಆಗದೆ ಅತ್ತ ನಿರ್ವಹಣೆ ಮಾಡಲು ಸಾಧ್ಯವಾಗದೆ ತ್ರಿಶಂಕು ಸ್ಥಿತಿಯಲಿದ್ದಾರೆ.

-----------

ಕಾಫಿ ಉದ್ಯಮ ಸಂಕಷ್ಟಕ್ಕೆ ಸಿಲುಕಿದ್ದು ಕೇಂದ್ರ ಸರಕಾರ ಬೆಳೆಗಾರರ ನೆರವಿಗೆ ಧಾವಿಸಬೇಕು. ಕಾಫಿ, ಕಾಳುಮೆಣಸಿನ ಧಾರಣೆ ಕುಸಿತವಾಗಿದೆ. ಕೊನೆ ಗಳಿಕೆಯಲ್ಲಿ ಕಷ್ಟಕ್ಕೆ ನೆರವಾಗುತ್ತಿದ್ದ ಕಾಫಿ ತೋಟದಲ್ಲಿಬೆಳೆದ ಸಿಲ್ವರ್‌ ಮರಗಳ ಧಾರಣೆಯು ಕಡಿಮೆಯಾಗಿದೆ. ಕಾಫಿ ಉದ್ದಿಮೆಯನ್ನೇ ನಂಬಿ ಬದುಕುತ್ತಿರುವ ಬೆಳೆಗಾರರ ಸಂಕಷ್ಟಕ್ಕೆ ಕೇಂದ್ರ ಸರಕಾರ ಶೀಘ್ರವಾಗಿ ಸ್ಪಂದಿಸಬೇಕು

-ಲವ
, ಕಾಫಿ ಬೆಳೆಗಾರರ ಸಂಘದ ಹೋಬಳಿ ಕಾರ್ಯದರ್ಶಿ

---------

ಮೊದಲು ಹೊರಗಿನಿಂದ ಆಮದು ಮಾಡಿಕೊಳ್ಳುತ್ತಿರುವ ಕಾಳು ಮೆಣಸನ್ನು ನಿಲ್ಲಿಸಬೇಕು. ಬೆಳೆಗಾರರು ಬೆಳೆಯುತ್ತಿರುವ ಕಾಫಿ ಬೆಳೆಗೆ ಉತ್ದಾದನಾ ವೆಚ್ಚವಾದರೂ ದೊರೆಯಬೇಕು. ಇದೇ ಕಾಫಿ ಧಾರಣೆ ಮುಂದುವರಿದರೆ ಕಾಫಿ ಬೆಳೆಗಾರರ ಸ್ಥಿತಿ ಊಹಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಬೆಳೆಗಾರರ ಕಷ್ಟಕ್ಕೆ ನೆರವಾಗಬೇಕು. ಹಾಗೂ ಬ್ಯಾಂಕ್‌ಗಳು ಸಾಲ ಮರುಪಾವತಿ ಸಮಯಾವಕಾಶ ಕೊಡಬೇಕು.

-ಡಿ.ಸಿ. ಗಿರೀಶ್‌ ,
ಕಲ್ಯಾಣ್‌ಕೂಲ್‌ ಎಸ್ಟೇಟ್‌ ಮಾಲಿಕ ಕಾಫಿ ಬೆಳೆಗಾರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ