ಆ್ಯಪ್ನಗರ

ಜೆಡಿಎಸ್‌ ಗುರಿಯಾಗಿಸಿ ಐಟಿ ದಾಳಿ: ರೇವಣ್ಣ

ಜೆಡಿಎಸ್‌ ಪಕ್ಷ ದ ಆಭ್ಯರ್ಥಿಗಳು, ನಾಯಕರು ಮತ್ತವರ ಸಂಬಂಧಿಕರನ್ನು ಗುರಿಯಾಗಿಟ್ಟುಕೊಂಡು ಐಟಿ ದಾಳಿ ನಡೆದಿದೆ ಎಂದು ಲೋಕೋಪಯೋಗಿ ಸಚಿವ ರಚ್‌.ಡಿ. ರೇವಣ್ಣ ತೀಕ್ಷ ್ಣವಾಗಿ ಪ್ರತಿಕ್ರಿಯೆ ನೀಡಿದರು.

Vijaya Karnataka 30 Mar 2019, 5:00 am
ಕಡೂರು :ಜೆಡಿಎಸ್‌ ಪಕ್ಷ ದ ಆಭ್ಯರ್ಥಿಗಳು, ನಾಯಕರು ಮತ್ತವರ ಸಂಬಂಧಿಕರನ್ನು ಗುರಿಯಾಗಿಟ್ಟುಕೊಂಡು ಐಟಿ ದಾಳಿ ನಡೆದಿದೆ ಎಂದು ಲೋಕೋಪಯೋಗಿ ಸಚಿವ ರಚ್‌.ಡಿ. ರೇವಣ್ಣ ತೀಕ್ಷ ್ಣವಾಗಿ ಪ್ರತಿಕ್ರಿಯೆ ನೀಡಿದರು.
Vijaya Karnataka Web jds targeted it attack revanna
ಜೆಡಿಎಸ್‌ ಗುರಿಯಾಗಿಸಿ ಐಟಿ ದಾಳಿ: ರೇವಣ್ಣ


ಶಿವಮೊಗ್ಗದಿಂದ ಅರಸಿಕೆರೆಗೆ ತೆರಳುವ ಮಾರ್ಗದಲ್ಲಿ ಕಡೂರು ಪಟ್ಟಣದ ಕೆಎಲ್‌ವಿ ವೃತ್ತದಲ್ಲಿರುವ ಮೈತ್ರಿ ಕೂಟದ ಅಭ್ಯರ್ಥಿಯ ಚುನಾವಣಾ ಪ್ರಚಾರ ಕಾರ್ಯಾಲಯದ ಮುಂದೆ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಈ ದಾಳಿಯನ್ನು ಗಂಭೀರವಾಗಿ ಪರಿಗಣಿಸಿದ್ದು ಇದರ ಹಿಂದೆ ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನೇರ ಹಸ್ತಕ್ಷೇಪವಿದೆ. ಇದಕ್ಕೆ ರಾಜಕೀಯವಾಗಿಯೇ ಉತ್ತರ ನೀಡಲಾಗುವುದು ಎಂದರು.

ಐಟಿ ದಾಳಿ ನಡೆಸಲು ಪ್ರೇರಣೆ ನೀಡಿದ ಯಡಿಯೂರಪ್ಪ 24 ಗಂಟೆಯೊಳಗೆ ಕ್ಲೀನ್‌ಚಿಟ್‌ ಸರ್ಟಿಫಿಕೇಟ್‌ ಕೊಡಿಸುತ್ತಾರಾ ಎಂದು ಪ್ರಶ್ನೆ ಮಾಡಿದ ಅವರು, ವಿಶೇಷವಾಗಿ ಹಾಸನ, ಶಿವಮೊಗ್ಗ, ಮಂಡ್ಯ ಅಭ್ಯರ್ಥಿಗಳನ್ನು ಗುರಿಯಾಗಿಟ್ಟುಕೊಂಡು ನಡೆಸಿದ ಈ ದಾಳಿಗೆ ತಾವು ಹೆದರುವುದಿಲ್ಲ. ದೇಶದಲ್ಲಿ ಕೋಮು ಶಕ್ತಿಗಳನ್ನು ಮಣಿಸಿ, ಪ್ರಜಾಶಕ್ತಿಯನ್ನು ತಂದೇ ತರಲಾಗುವುದು. ಮಹಾಘಟಬಂಧನ್‌ ಮೂಲಕವೇ ಮೋದಿಗೆ ತಕ್ಕ ಉತ್ತರ ನೀಡಲಾಗುವುದು ಎಂದು ಪ್ರತಿಕ್ರಿಯಿಸಿದರು.

ಹಾಸನ ಲೋಕಸಭೆ ಕ್ಷೇತ್ರದಲ್ಲಿ ಬಿಎಸ್‌ಪಿ ಆಭ್ಯರ್ಥಿ ಸ್ಪರ್ಧಿಸಿರುವುದರಿಂದ ಮತಗಳು ಹಂಚಿಹೋಗುವ ಅಪಾಯವಿಲ್ಲ. ದೇವೇಗೌಡರಿಗೆ ಎಲ್ಲ ವರ್ಗದ ಜನರ ಬೆಂಬಲವಿದೆ. ದೇವರ ಆಶೀರ್ವಾದವೂ ಇದೆ. ಇದು ಅಭ್ಯರ್ಥಿ ಪ್ರಜ್ವಲ್‌ ಅವರಿಗೂ ಸಲ್ಲುತ್ತದೆ. ಚುನಾವಣೆಯಲ್ಲಿ ಜೆಡಿಎಸ್‌ ಏಳೂ ಸ್ಥಾನಗಳಲ್ಲಿ ಜಯಗಳಿಸಲಿದೆ. ಫಲಿತಾಂಶ ಅಚ್ಚರಿಯಿಂದ ಕೂಡಿರುತ್ತದೆ. ಕಾಯ್ದು ನೋಡಿ ಎಂದು ನಗೆಬೀರಿದರು.

ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಸ್ಥಳೀಯ ಜೆಡಿಎಸ್‌ ಮುಖಂಡರಾದ ಬಿ.ಟಿ.ಗಂಗಾಧರನಾಯ್ಕ, ಯಳಗೊಂಡನಹಳ್ಳಿ ಈಶಣ್ಣ, ಪಿ.ಸಿ.ಗಂಗಾಧರ, ಮಚ್ಚೇರಿ ಮಹೇಶ್‌, ಆಣ್ಣಯ್ಯ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ