ನರಸಿಂಹರಾಜಪುರ : ಯುವಕರಲ್ಲಿರುವ ಪ್ರತಿಭೆ ಹೊರಹಾಕಲು ಹುಟ್ಟು ಹಾಕಿರುವುದೇ ಜೇಸಿ ಸಂಸ್ಥೆ ಎಂದು ಸಂಸ್ಥೆಯ ಇವಿಪಿ ನವೀನ್ ಲಾಡ್ ಮಿಸ್ಕತ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೇಸಿ ಸಂಸ್ಥೆ ಗುರುವಾರ ಹಮ್ಮಿಕೊಂಡಿದ್ದ ಜೇಸಿ ಸಂಸ್ಥೆಯ ಅರ್ಥವಾರ್ಷಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಭಾರತದ ಮೂಲೆ ಮೂಲೆಯಲ್ಲಿ ಯುವಕರನ್ನು ಸಂಘಟಿಸಿ ವ್ಯಕ್ತಿ ವಿಕಸನ ಮಾಡುತ್ತಿದೆ. ಬೇರೆ ಸಂಸ್ಥೆಗಳು ಒಬ್ಬ ವ್ಯಕ್ತಿಗೆ ಬದುಕಲು ಸಹಾಯಮಾಡಿದರೆ ನಮ್ಮ ಸಂಸ್ಥೆ ಬದುಕು ಕಟ್ಟಿಕೊಳ್ಳಲು ಕಲಿಸುತ್ತದೆ. ಸಮಾಜದಲ್ಲಿ ಆದರ್ಶ ವ್ಯಕ್ತಿಯನ್ನಾಗಿ ಮಾಡುವ ಕೆಲಸ ಸಂಸ್ಥೆಯಿಂದ ನಡೆಯುತ್ತದೆ. ಇದರೊಂದಿಗೆ ಬೇರೆ ಊರಿನ ಸ್ನೇಹಿತರ ಪರಿಚಯವಾಗುತ್ತದೆ. ಬೇರೆ ಬೇರೆ ಕಡೆ ಕಾರ್ಯಕ್ರಮಗಳು ನಡೆಯುವುದರಿಂದ ಕಲೆ, ಸಂಸ್ಕೃತಿ ವಿನಿಮಯವಾಗುತ್ತದೆ. ಇದರ ಜತೆ ನಮ್ಮ ವೃತಿ ಅಭಿವೃದ್ಧಿಗೂ ಸಹಕಾರಿಯಾಗಿದೆ ಎಂದರು.
ಜೇಸಿ ಸಂಸ್ಥೆ ಅಧ್ಯಕ್ಷ ನಾಗೇಶ್ರೆಡ್ಡಿ, ಜೇಸಿ ಸಂಸ್ಥೆ ವಲಯಾಧಿಕಾರಿ ಪೂರ್ಣೇಶ್ ಮಾತನಾಡಿದರು.
ಇದೇ ಸಂದರ್ಭ ನಮ್ಮ ಸಂಸ್ಥೆಯ ನಿಕಟಪೂರ್ವ ಕಾರ್ಯದರ್ಶಿ ಎನ್.ಎ.ಶೇಖಬ್ಬರ ಮಗಳು ದ್ವೀತಿಯ ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ್ದನ್ನು ವಲಯ ಮಂಡಳಿ ಗುರುತಿಸಿ ನೆನಪಿನ ಕಾಣಿಕೆ ನೀಡಲಾಯಿತು.
ಪೂವಾಧ್ಯಕ್ಷ ದಕ್ಷಿಣಮೂರ್ತಿ, ಎಸ್.ಎಸ್.ಜಗದೀಶ್, ಎನ್.ಎಂ.ಕಾಂತರಾಜ್, ಪಿ.ಅರ್.ಸುಕುಮಾರ, ಎಸ್.ಎಸ್.ಶೇಷಗಿರಿ, ಕೃಷ್ಣಮೂರ್ತಿ, ಅಭಿನವಗಿರಿರಾಜ್. ಕಾರ್ಯದರ್ಶಿ ಸಮೀರ್ ಅನಿಸಿಕೆಗಳನ್ನು ಹಂಚಿಕೊಂಡರು.
ಸಭಾ ಕಾರ್ಯಕ್ರಮದ ನಂತರ 8ಜನ ಜೇಸಿ ಸದಸ್ಯರ ಹುಟ್ಟುಹಬ್ಬ ಆಚರಿಸಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೇಸಿ ಸಂಸ್ಥೆ ಗುರುವಾರ ಹಮ್ಮಿಕೊಂಡಿದ್ದ ಜೇಸಿ ಸಂಸ್ಥೆಯ ಅರ್ಥವಾರ್ಷಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಭಾರತದ ಮೂಲೆ ಮೂಲೆಯಲ್ಲಿ ಯುವಕರನ್ನು ಸಂಘಟಿಸಿ ವ್ಯಕ್ತಿ ವಿಕಸನ ಮಾಡುತ್ತಿದೆ. ಬೇರೆ ಸಂಸ್ಥೆಗಳು ಒಬ್ಬ ವ್ಯಕ್ತಿಗೆ ಬದುಕಲು ಸಹಾಯಮಾಡಿದರೆ ನಮ್ಮ ಸಂಸ್ಥೆ ಬದುಕು ಕಟ್ಟಿಕೊಳ್ಳಲು ಕಲಿಸುತ್ತದೆ. ಸಮಾಜದಲ್ಲಿ ಆದರ್ಶ ವ್ಯಕ್ತಿಯನ್ನಾಗಿ ಮಾಡುವ ಕೆಲಸ ಸಂಸ್ಥೆಯಿಂದ ನಡೆಯುತ್ತದೆ. ಇದರೊಂದಿಗೆ ಬೇರೆ ಊರಿನ ಸ್ನೇಹಿತರ ಪರಿಚಯವಾಗುತ್ತದೆ. ಬೇರೆ ಬೇರೆ ಕಡೆ ಕಾರ್ಯಕ್ರಮಗಳು ನಡೆಯುವುದರಿಂದ ಕಲೆ, ಸಂಸ್ಕೃತಿ ವಿನಿಮಯವಾಗುತ್ತದೆ. ಇದರ ಜತೆ ನಮ್ಮ ವೃತಿ ಅಭಿವೃದ್ಧಿಗೂ ಸಹಕಾರಿಯಾಗಿದೆ ಎಂದರು.
ಜೇಸಿ ಸಂಸ್ಥೆ ಅಧ್ಯಕ್ಷ ನಾಗೇಶ್ರೆಡ್ಡಿ, ಜೇಸಿ ಸಂಸ್ಥೆ ವಲಯಾಧಿಕಾರಿ ಪೂರ್ಣೇಶ್ ಮಾತನಾಡಿದರು.
ಇದೇ ಸಂದರ್ಭ ನಮ್ಮ ಸಂಸ್ಥೆಯ ನಿಕಟಪೂರ್ವ ಕಾರ್ಯದರ್ಶಿ ಎನ್.ಎ.ಶೇಖಬ್ಬರ ಮಗಳು ದ್ವೀತಿಯ ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ್ದನ್ನು ವಲಯ ಮಂಡಳಿ ಗುರುತಿಸಿ ನೆನಪಿನ ಕಾಣಿಕೆ ನೀಡಲಾಯಿತು.
ಪೂವಾಧ್ಯಕ್ಷ ದಕ್ಷಿಣಮೂರ್ತಿ, ಎಸ್.ಎಸ್.ಜಗದೀಶ್, ಎನ್.ಎಂ.ಕಾಂತರಾಜ್, ಪಿ.ಅರ್.ಸುಕುಮಾರ, ಎಸ್.ಎಸ್.ಶೇಷಗಿರಿ, ಕೃಷ್ಣಮೂರ್ತಿ, ಅಭಿನವಗಿರಿರಾಜ್. ಕಾರ್ಯದರ್ಶಿ ಸಮೀರ್ ಅನಿಸಿಕೆಗಳನ್ನು ಹಂಚಿಕೊಂಡರು.
ಸಭಾ ಕಾರ್ಯಕ್ರಮದ ನಂತರ 8ಜನ ಜೇಸಿ ಸದಸ್ಯರ ಹುಟ್ಟುಹಬ್ಬ ಆಚರಿಸಲಾಯಿತು.