ಆ್ಯಪ್ನಗರ

ಇಂದಿನಿಂದ ಹೊನಲುಬೆಳಕಿನ ಕಬಡ್ಡಿ ಪಂದ್ಯಾವಳಿ

ಜಿಲ್ಲಾ ಅಮೆಚೂರ್‌ ಕಬಡ್ಡಿ ಸಂಸ್ಥೆಯಿಂದ ಫೆ.3ರಿಂದ 5ರವರೆಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು, ಸಾರ್ವಜನಿಕರು ಕಬಡ್ಡಿ ಪಟುಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಸಂಸ್ಥೆ ಅಧ್ಯಕ್ಷ ರಂಜನ್‌ ಅಜಿತ್‌ಕುಮಾರ್‌ ಮನವಿ ಮಾಡಿದರು.

Vijaya Karnataka 3 Feb 2019, 5:00 am
ಚಿಕ್ಕಮಗಳೂರು : ಜಿಲ್ಲಾ ಅಮೆಚೂರ್‌ ಕಬಡ್ಡಿ ಸಂಸ್ಥೆಯಿಂದ ಫೆ.3ರಿಂದ 5ರವರೆಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು, ಸಾರ್ವಜನಿಕರು ಕಬಡ್ಡಿ ಪಟುಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಸಂಸ್ಥೆ ಅಧ್ಯಕ್ಷ ರಂಜನ್‌ ಅಜಿತ್‌ಕುಮಾರ್‌ ಮನವಿ ಮಾಡಿದರು.
Vijaya Karnataka Web kabaddi tournament from today
ಇಂದಿನಿಂದ ಹೊನಲುಬೆಳಕಿನ ಕಬಡ್ಡಿ ಪಂದ್ಯಾವಳಿ


ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆ.3ರಂದು ರಾತ್ರಿ 7ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ ಸಮಾರಂಭ ಉದ್ಘಾಟಿಸಲಿದ್ದು, ಪಂದ್ಯಾವಳಿಯನ್ನು ಕ್ರೀಡಾ ಸಚಿವ ರಹೀಂಖಾನ್‌ ಉದ್ಘಾಟಿಸುವರು ಎಂದು ಹೇಳಿದರು.

ರಾಜ್ಯ ಅಮೆಚೂರ್‌ ಕಬಡ್ಡಿ ಅಸೋಸಿಯೇಷನ್‌ ಅಧ್ಯಕ್ಷ ಹನುಮಂತೇಗೌಡ, ಪ್ರಧಾನ ಕಾರ‍್ಯದರ್ಶಿ ಎ.ಮುನಿರಾಜು, ಅರ್ಜುನ ಪ್ರಶಸ್ತಿ ಪುರಸ್ಕೃತ ಬಿ.ಸಿ.ರಮೇಶ್‌, ರಾಜ್ಯ ತೀರ್ಪುಗಾರರ ಮಂಡಳಿ ಅಧ್ಯಕ್ಷ ಎಂ.ಷಣ್ಮುಗಂ ಪಾಲ್ಗೊಳ್ಳುವರು. ಕರ್ನಾಟಕ ಪ್ರೊ ಕಬಡ್ಡಿ ಆಟಗಾರ ಪ್ರಶಾಂತ್‌ಕುಮಾರ್‌ ರೈ, ತಮಿಳು ತಲೈವದ ಸುಖೇಶ್‌ ಹೆಗ್ಡೆ, ದರ್ಶನ್‌, ಗುಜರಾತ್‌ ಫಾರ್ಚೂನ್‌ ಜೈನ್ಸ್‌ನ ಸಚಿನ್‌ ವಿಠಲ್‌, ಬೆಂಗಾಲ್‌ ವಾರಿಯರ್ರ್ಸ್‌ನ ಮಿಥುನ್‌ಗೌಡ, ತೆಲುಗು ಟೈಟಾನ್ಸ್‌ನ ರಕ್ಷಿತ್‌ ಪೂಜಾರಿ ಆಗಮಿಸುವರು ಎಂದು ಮಾಹಿತಿ ನೀಡಿದರು.

ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ 50 ಸಾವಿರ, 30 ಸಾವಿರ ಹಾಗೂ ತೃತೀಯ, ಚತುರ್ಥ ಬಹುಮಾನವಾಗಿ ತಲಾ 10ಸಾವಿರ ನಗದು, ಪಾರಿತೋಷಕ, ಜಿಲ್ಲಾ ಮಟ್ಟದಲ್ಲಿ 10 ಸಾವಿರ ನಗದು, ಪಾರಿತೋಷಕ ನೀಡಲಾಗುವುದು. ಒಟ್ಟು 18 ತಂಡಗಳು ಭಾಗವಹಿಸಲಿವೆ ಎಂದರು.

ತರಬೇತುದಾರ ರಾಮಲಿಂಗಾಚಾರ್‌, ತಾಲೂಕು ಅಮೆಚೂರ್‌ ಕಬಡ್ಡಿ ಅಸೋಸಿಯೇಷನ್‌ ಅಧ್ಯಕ್ಷ ಮಂಜುನಾಥ ಅರಸ್‌, ಗೌರವಾಧ್ಯಕ್ಷ ಬಿ.ಕುಮಾರೇಗೌಡ, ಜಿಲ್ಲಾ ಕಾರ‍್ಯದರ್ಶಿ ಶ್ರೀನಿವಾಸ್‌, ಎಂ.ಡಿ.ಕುಮಾರ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ