ಆ್ಯಪ್ನಗರ

ಕನಕ ಜಯಂತಿ ಅರ್ಥಪೂರ್ಣ ಜಯಂತಿ

ಪಟ್ಟಣದಲ್ಲಿನ.15ರಂದು ನಡೆಯುವ 532ನೇ ಕನಕ ಜಯಂತಿ ಆಚರಣೆಯನ್ನು ತಾಲೂಕು ಕುರುಬರ ಸಂಘದ ವತಿಯಿಂದ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆ.ಎಚ್‌.ಎ. ಪ್ರಸನ್ನ ಹೇಳಿದರು.

Vijaya Karnataka 11 Nov 2019, 5:00 am
ಕಡೂರು : ಪಟ್ಟಣದಲ್ಲಿನ.15ರಂದು ನಡೆಯುವ 532ನೇ ಕನಕ ಜಯಂತಿ ಆಚರಣೆಯನ್ನು ತಾಲೂಕು ಕುರುಬರ ಸಂಘದ ವತಿಯಿಂದ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆ.ಎಚ್‌.ಎ. ಪ್ರಸನ್ನ ಹೇಳಿದರು.
Vijaya Karnataka Web kanaka jayanti is a meaningful jayanti
ಕನಕ ಜಯಂತಿ ಅರ್ಥಪೂರ್ಣ ಜಯಂತಿ


ಅವರು ಶನಿವಾರ ಪಟ್ಟಣದ ಕನ್ನಡಭವನದಲ್ಲಿಸಮಾಜದ ಮುಖಂಡರೊಂದಿಗೆ 532ನೇ ಜಯಂತ್ಯೋತ್ಸವ ಆಚರಣೆಯ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ನ.15ರಂದು ಬೆಳಗ್ಗೆ 9 ಗಂಟೆಗೆ ಜಿ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜ್‌ ಧ್ವಜಾರೋಹಣ ನೆರವೇರಿಸಲಿದ್ದಾರೆ. ನಂತರ ಕನಕವೃತ್ತದಿಂದ ದಾಸ ಶ್ರೇಷ್ಟ ಕನಕದಾಸರ ಭಾವಚಿತ್ರದೊಂದಿಗೆ ವಿವಿಧ ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿಮೆರವಣಿಗೆ ನಡೆಸಲಾಗುವುದು. ನಂತರ ಕೆ.ಎಂ.ಕೆ. ವೃತ್ತದ ಬಳಿಯ ಸಂಗೊಳ್ಳಿರಾಯಣ್ಣ ವೇದಿಕೆಯಲ್ಲಿಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಸಮಾರಂಭವನ್ನು ಕ್ಷೇತ್ರದ ಶಾಸಕ ಬೆಳ್ಳಿಪ್ರಕಾಶ್‌ ಉದ್ಘಾಟಿಸಲಿದ್ದು, ಮಾಜಿ ಶಾಸಕ ವೈ.ಎಸ್‌.ವಿ. ದತ್ತ ಭಾವಚಿತ್ರ ಅನಾವರಣಗೊಳಿಸಲಿದ್ದು, ಕಾರ್ಯಕ್ರಮದಲ್ಲಿವಿಧಾನಪರಿಷತ್‌ ಉಪಸಭಾಪತಿ ಎಸ್‌.ಎಲ್‌. ಧರ್ಮೆಗೌಡ, ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ, ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್‌ ಪಾಲ್ಗೊಳ್ಳಲಿದ್ದಾರೆ. ಮುಖ್ಯ ಶಿಕ್ಷಕ ಎಂ.ಕೆ. ವಿಜಯ್‌ಕುಮಾರ್‌ ಪ್ರಧಾನ ಉಪನ್ಯಾಸ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.ಮಾಜಿ ಅಧ್ಯಕ್ಷ ಕೆ.ಎಸ್‌. ರಮೇಶ್‌, ಸಮಾಜದ ಮುಖಂಡರಾದ ಸಾವಿತ್ರಿಗಂಗಣ್ಣ, ಕೆ.ಎಚ್‌. ಶಂಕರ್‌, ಕೆ.ಎಚ್‌. ಲಕ್ಕಣ್ಣ, ಕೆ.ಎಂ. ಪುಟ್ಟಪ್ಪ, ಎಸ್‌.ಟಿ. ಚಂದ್ರಪ್ಪ, ತೋಟದಮನೆ ಮೋಹನ್‌, ಭಂಡಾರಿ ರವಿ, ರೇವಣ್ಣ, ಮರುಗುದ್ದಿಮನು, ರಾಜುಕರಿಬಡ್ಡೆ, ಕುರುಬರ ನೌಕರರ ಸಂಘದ ಅಧ್ಯಕ್ಷ ಚಂದ್ರಪ್ಪ, ಪರಮೇಶ್‌, ರಂಗಪ್ಪ, ತಿಮ್ಮಯ್ಯ, ಎಚ್‌.ಆರ್‌. ದೇವರಾಜ್‌, ಡಿಶ್‌ಮಂಜುನಾಥ್‌, ಪಂಗ್ಲಿಮಂಜು, ಜಿಮ್‌ರಾಜು ಮತ್ತಿತರಿದ್ದರು.
--------------
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿಅತಿ ಹೆಚ್ಚು ಅಂಕಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಈ ಬಾರಿ ಡಾಕ್ಟರೇಟ್‌ ಪಡೆದ ಸಮಾಜದ ಯುವಕ ಡಾ. ಎನ್‌. ಸುನೀಲ್‌ ಕುಮಾರ್‌ ಅವರಿಗೆ ಗೌರವಿಸಲಾಗುವುದು.
-ಎನ್‌.ಎಚ್‌. ನಂಜುಂಡಸ್ವಾಮಿ ,ಕನಕ ಜಯಂತ್ಯೋತ್ಸವದ ಅಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ