ಆ್ಯಪ್ನಗರ

ಕನಕದಾಸರು ಸ್ಫೂರ್ತಿ ಸಂಕೇತ

​ಕನಕದಾಸರು ಗೌರವ ಮತ್ತು ಅಭಿಮಾನದ ಸಂಕೇತ. ಅವರ ಕೀರ್ತನೆಗಳು ಸಮಾಜಕ್ಕೆ ಚಿಕಿತ್ಸಕ ಗಳಾಗಿ ಕೆಲಸ ಮಾಡುತ್ತಿವೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಎಚ್‌.ಪಿ.ಮಂಜುಳ ಹೇಳಿದರು.

Vijaya Karnataka 16 Nov 2019, 5:00 am
ಚಿಕ್ಕಮಗಳೂರು
Vijaya Karnataka Web 15SHIVUP8_35

ಕನಕದಾಸರು ಗೌರವ ಮತ್ತು ಅಭಿಮಾನದ ಸಂಕೇತ. ಅವರ ಕೀರ್ತನೆಗಳು ಸಮಾಜಕ್ಕೆ ಚಿಕಿತ್ಸಕ ಗಳಾಗಿ ಕೆಲಸ ಮಾಡುತ್ತಿವೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಎಚ್‌.ಪಿ.ಮಂಜುಳ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಶುಕ್ರ ವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿಆಯೋಜಿಸಿದ್ದ ಭಕ್ತ ಕನಕದಾಸ ಜಯಂತಿಯಲ್ಲಿಉಪನ್ಯಾಸ ನೀಡಿದರು. ಅಪ್ರತಿಮ ಯೋಧನಾಗಿ ದ್ದರೂ ತನ್ನ ಜೀವನಕ್ಕೆ ಹೊಸ ಆಯಾಮ ಕಂಡು ಕೊಂಡರು. ವ್ಯಾಸರಾ ಯರ ಶಿಷ್ಯನಾಗಿ, ಅವರ ವಿಚಾರಧಾರೆಗಳನ್ನು ತಿಳಿದುಕೊಂಡು ಸಾಮಾಜಿಕ ನ್ಯಾಯ, ಜಾತಿ, ವರ್ಗ, ಕುಲದ ಬಗ್ಗೆ ಕಣ್ತೆರೆಸಿ ಜ್ಞಾನದ ಅರಿವು ಬೆಳೆಸಿದರು ಎಂದರು. ಮೋಹನ ತರಂಗಿಣಿ ಕೃತಿಯಲ್ಲಿನಳ- ದಮಯಂತಿ ಯರ ಆದರ್ಶ ಜೀವನದ ಸೊಗಡು, ಸಾಂಸಾರಿಕ ಪ್ರೀತಿಯನ್ನು ವರ್ಣಿ ಸಿದರೆ, ರಾಮಧಾನ್ಯ ಚರಿತ್ರೆ ಯಲ್ಲಿಆಹಾರ ಸಂಸ್ಕೃತಿ ಯನ್ನು ಮೂಲವಾಗಿ ಟ್ಟುಕೊಂಡು ನ್ಯಾಯಕ್ಕಾಗಿ ಹೋರಾ ಡುವ ಪ್ರತಿಯೊ ಬ್ಬರೂ ದನಿ ಎತ್ತಬೇಕು ಎಂಬ ಭಾವವನ್ನು ನೀಡುತ್ತದೆ. ಹರಿಭಕ್ತ ಸಾರ ಕೃತಿ ವ್ಯಕ್ತಿಯಲ್ಲಿಉತ್ತಮ ಜ್ಞಾನ ಭಕ್ತಿಯ ಉಗಮಕ್ಕೆ ಕಾರಣವಾದರೆ, ಆ ಭಕ್ತಿಯು ಮುಕ್ತಿಯ ಮಾರ್ಗ ತೋರುತ್ತದೆ ಎಂಬುದನ್ನು ಸಾರಿದ್ದಾರೆ ಎಂದರು.ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ವಿಧಾನ ಪರಿಷತ್‌ ಮಾಜಿ ಸದಸ್ಯೆ ಗಾಯತ್ರಿಶಾಂತೇ ಗೌಡ, ಅಪರ ಜಿಲ್ಲಾಧಿಕಾರಿ ಡಾ.ಕುಮಾರ್‌, ಜಿ.ಪಂ. ಮುಖ್ಯ ಕಾರ‍್ಯ ನಿರ್ವಹಣಾ ಧಿಕಾರಿ ಎಸ್‌.ಅಶ್ವತಿ, ತಾ.ಪಂ. ಅಧ್ಯಕ್ಷ ಜಯಣ್ಣ, ಎಎಸ್ಪಿ ಶ್ರುತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ