ಆ್ಯಪ್ನಗರ

ಮುಂದುವರಿದ ಸಾರಿಗೆ ನೌಕರರ ಮುಷ್ಕರ, ಚಿಕ್ಕಮಗಳೂರಿನಲ್ಲಿ 22 ನೌಕರರ ವರ್ಗಾವಣೆ!

ಸಾರಿಗೆ ನೌಕರರು ಭಾನುವಾರವೂ ತಮ್ಮ ಹೋರಾಟ ಮುಂದುವರಿಸಿ ಬೇಡಿಕೆ ಈಡೇರಿಸದ ವಿನಾ ಮುಷ್ಕರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಈ ಮಧ್ಯೆ ಚಿಕ್ಕಮಗಳೂರು ವಿಭಾಗದಿಂದ 22 ಮಂದಿ ನೌಕರರನ್ನು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.

Vijaya Karnataka Web 11 Apr 2021, 8:05 pm
ಚಿಕ್ಕಮಗಳೂರು: ನಮ್ಮನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿ ಕೆಎಸ್ ಆರ್ ಟಿಸಿ ನೌಕರರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ ಭಾನುವಾರವೂ ಮುಂದುವರೆದಿದ್ದು, ಸಾರ್ವನಿಕರು ಖಾಸಗಿ ವಾಹನಗಳನ್ನೆ ಅವಲಂಭಿಸಬೇಕಾಗಿದೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಕುಟುಂಬ ಪರಿವಾರದೊಂದಿಗೆ ನಗರದ ಗಾಂಧಿ ಪಾರ್ಕಿನಲ್ಲಿ ಶನಿವಾರ ಮುಷ್ಕರ ನಡೆಸಿದ್ದ ಸಾರಿಗೆ ನೌಕರರು ಭಾನುವಾರವೂ ತಮ್ಮ ಹೋರಾಟ ಮುಂದುವರಿಸಿ ಬೇಡಿಕೆ ಈಡೇರಿಸದ ವಿನಾ ಮುಷ್ಕರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.

ಈ ಮಧ್ಯೆ ಚಿಕ್ಕಮಗಳೂರು ವಿಭಾಗದಿಂದ 22 ಮಂದಿ ನೌಕರರನ್ನು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.

ಚಿಕ್ಕಮಗಳೂರಿನಿಂದ ವಿವಿಧ ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗಗಳಿಗೆ ಬಸ್‌ ಸಂಚಾರ ಸೇವೆ ಆರಂಭಿಸಿರುವುದಾಗಿ ನಿಗಮ ಹೇಳಿದ್ದರೂ ಬೆರಳೆಣಿಕೆ ಸಂಖ್ಯೆಯ ಬಸ್‌ಗಳು ಸಂಚರಿಸುತ್ತಿವೆ. ಈ ಮಧ್ಯೆ ಖಾಸಗಿ ಬಸ್‌ಗಳು, ಟಿಟಿ, ಮಿನಿ ಬಸ್‌, ಕಾರು, ಜೀಪುಗಳು ಬಸ್‌ ನಿಲ್ದಾಣದಲ್ಲಿ ಸರದಿ ಸಾಲಿನಲ್ಲಿ ನಿಂತಿವೆ. ಆದರೆ, ಪ್ರಯಾಣಿಕರೇ ನಗರದ ಕಡೆ ಮುಖ ಮಾಡದಿರುವ ಹಿನ್ನೆಲೆಯಲ್ಲಿ ನಿಲ್ದಾಣ ಬಿಕೋ ಎನ್ನುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ