ಆ್ಯಪ್ನಗರ

ಅಪರಾಧ ಪತ್ತೆ ಹಚ್ಚುತ್ತಿದ್ದ ಪೊಲೀಸ್‌ ನಾಯಿ ಡೈಸಿ ಇನ್ನಿಲ್ಲ

ಚಿಕ್ಕಮಗಳೂರು ಪೊಲೀಸ್‌ ಇಲಾಖೆಯ ಡೈಸಿ ಇನ್ನು ನೆನಪು ಮಾತ್ರ

Vijaya Karnataka Web 14 Nov 2018, 1:02 pm
ಬೆಂಗಳೂರು: ಅಪರಾಧಗಳನ್ನು ಪತ್ತೆ ಹಚ್ಚುವ, ಅಪರಾಧಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ಡೈಸಿ ಎಂಬ ಪೊಲೀಸ್‌ ನಾಯಿ ಮೃತಪಟ್ಟಿದೆ.
Vijaya Karnataka Web ಡೈಸಿ
ಡೈಸಿ


ಏಳು ವರ್ಷಗಳ ಕಾಲ ಚಿಕ್ಕಮಗಳೂರು ಜಿಲ್ಲಾ ಮೀಸಲು ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಡೈಸಿ ಎಲ್ಲರ ಪ್ರೀತಿಗೂ ಪಾತ್ರವಾಗಿತ್ತು.

ಇದುವರೆಗೂ 105 ಅಪರಾಧ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸಿದ್ದ ಡೈಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿಯೂ ನೆರವಾಗಿತ್ತು.

ಡೈಸಿಯ ನೆರವಿನಿಂದ 8 ಕೊಲೆ, 15 ಮನೆ ದರೋಡೆ ಹಾಗೂ 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿತ್ತು.

ಡಾಬರ್‌ ಮನ್‌ ತಳಿಯ ಡೈಸಿ ಮೃತಪಟ್ಟಿರುವ ವಿಷಯದ ಕುರಿತು ಮಾತನಾಡಿದ ಚಿಕ್ಕಮಗಳೂರು ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ಪಾಂಡೆ, ಡೈಸಿ ನಮ್ಮ ಇಲಾಖೆಯ ಅತ್ಯಂತ ದೊಡ್ಡ ಶಕ್ತಿಯಾಗಿತ್ತು. ಆದರೆ ಕೆಲವು ದಿನಗಳಿಂದ ಕ್ಯಾನ್ಸರ್‌ ಕಾಣಿಸಿಕೊಂಡಿತ್ತು. ಶಸ್ತ್ರ ಚಿಕಿತ್ಸೆ ನಡೆಸಿದರೂ ಫಲಕಾರಿಯಾಗಲಿಲ್ಲ ಎಂದರು.

ಕೇವಲ 20 ದಿನಗಳಾಗಿದ್ದಾಗ ಪೊಲೀಸ್‌ ಇಲಾಖೆಗೆ ಬಂದ ಡೈಸಿ ಇಲ್ಲಿಯೇ ತರಬೇತಿ ಪಡೆದಿತ್ತು. ಡೈಸಿಯ ಲಾಲನೆ-ಪಾಲನೆ ಮಾಡಿದ್ದ ಪೇದೆಗಳಾದ ಶಿವಕುಮಾರ್‌, ಕುಮಾರ್‌ ದುಃಖತಪ್ತರಾಗಿದ್ದಾರೆ.

ಡೈಸಿ ತಮ್ಮ ಕುಟುಂಬದ ಭಾಗವಾಗಿತ್ತು ನಿಜಕ್ಕೂ ಇದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಪೊಲೀಸ್‌ ಇಲಾಖೆ ವತಿಯಿಂದ ಡೈಸಿ ಅಂತ್ಯಕ್ರಿಯೆಯನ್ನು ನಡೆಸಲಾಯಿತು. ಸಕಲ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ