ಆ್ಯಪ್ನಗರ

ಚಿಕ್ಕಮಗಳೂರು: ಲಾರಿಗೆ ಬಸ್‌ ಡಿಕ್ಕಿಯಾಗಿ ಇಬ್ಬರ ಸಾವು

ಚಿಕ್ಕಮಗಳೂರು ಸಮೀಪದ ಸಖರಾಯಪಟ್ಟಣದಲ್ಲಿ ನಿಂತಿದ್ದ ಲಾರಿಗೆ ಬಸ್‌ ಡಿಕ್ಕಿಯಾಗಿ ಮಹಿಳಾ ಪ್ರಯಾಣಿಕರೊಬ್ಬರು ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಲಾರಿ ಇಂಡಿಕೇಟರ್‌ ಹಾಕಿರಲಿಲ್ಲ. ಹೀಗಾಗಿ ಡಿಕ್ಕಿ ಹೊಡೆಯಿತು.

Vijaya Karnataka Web 23 Sep 2019, 10:21 pm
ಸಖರಾಯಪಟ್ಟಣ (ಚಿಕ್ಕಮಗಳೂರು): ನಿಂತಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದು ಲಾರಿ ಚಾಲಕ, ಬಸ್‌ನ ಮಹಿಳಾ ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ.
Vijaya Karnataka Web ಪೊಲೀಸ್‌
ಪೊಲೀಸ್‌


ಪಟ್ಟಣದ ಕೆ.ಎಂ. ರಸ್ತೆಯ ಪಿಳ್ಳೇನಹಳ್ಳಿ ಕ್ರಾಸ್‌ನಲ್ಲಿಅಪಘಾತ ಉಂಟಾಗಿದೆ. ಮೃತಪಟ್ಟ ಲಾರಿ ಚಾಲಕ ಶರವಣ ಎಂದು ಗುರುತಿಸಲಾಗಿದೆ. ಡೀಸೆಲ್‌ ಖಾಲಿಯಾಗಿದ್ದ ಕಾರಣ ಚಾಲಕ ಲಾರಿಯನ್ನು ಅರ್ಧ ರಸ್ತೆಗೆ ನಿಲ್ಲಿಸಿದ್ದ ಮತ್ತು ನಿಂತಿದ್ದ ಲಾರಿಗೆ ಇಂಡಿಕೇಟರ್‌ ಹಾಕಿರಲಿಲ್ಲ ಎನ್ನಲಾಗಿದೆ.

ಚಿಕ್ಕಮಗಳೂರಿನಿಂದ ಯಲಬುರ್ಗಾ ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಲಾರಿ ಪೂರ್ತಿ ಜಖಂಗೊಂಡಿದೆ. ಬಸ್ಸಿನಲ್ಲಿದ್ದ ಮಹಿಳೆಯೊಬ್ಬರಿಗೆ ತೀವ್ರತರಹದ ಪೆಟ್ಟಾದ ಹಿನ್ನೆಲೆಯಲ್ಲಿಆಂಬ್ಯುಲೆನ್ಸ್‌ನಲ್ಲಿಚಿಕ್ಕಮಗಳೂರು ಆಸ್ಪತ್ರೆಗೆ ತೆರಳುತ್ತಿದ್ದಾಗ ಮಧ್ಯದಲ್ಲಿಅವರು ಮೃತಪಟ್ಟಿದ್ದಾರೆ. ಅವರ ಹೆಸರು, ಊರು ಪತ್ತೆಯಾಗಿಲ್ಲ. ಗಾಯಗೊಂಡ 10 ಜನ ಪ್ರಯಾಣಿಕರನ್ನು ಕಡೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಖರಾಯಪಟ್ಟಣ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ