ಆ್ಯಪ್ನಗರ

ಬೀರೂರು ಆಸ್ಪತ್ರೆಯಲ್ಲಿಮೂಲ ಸೌಲಭ್ಯದ ಕೊರತೆ

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ವೈದ್ಯರ ಕೊರತೆಯಿಂದ ಸಮರ್ಪಕ ಆರೋಗ್ಯ ಸೇವೆ ಒದಗಿಸುವಲ್ಲಿವಿಫಲಗೊಂಡಿದ್ದು, ಸಾರ್ವಜನಿಕರು ಔಷಧಿ ಹಾಗೂ ಆರೋಗ್ಯ ಸೇವೆಗೆ ಬೇರೆ ಆಸ್ಪತ್ರೆಗಳನ್ನು ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

Vijaya Karnataka 11 Sep 2019, 5:00 am
ಬೀರೂರು : ಪಟ್ಟಣದ ಸಾರ್ವಜನಿಕ ಆಸ್ಪತ್ರೆ ವೈದ್ಯರ ಕೊರತೆಯಿಂದ ಸಮರ್ಪಕ ಆರೋಗ್ಯ ಸೇವೆ ಒದಗಿಸುವಲ್ಲಿವಿಫಲಗೊಂಡಿದ್ದು, ಸಾರ್ವಜನಿಕರು ಔಷಧಿ ಹಾಗೂ ಆರೋಗ್ಯ ಸೇವೆಗೆ ಬೇರೆ ಆಸ್ಪತ್ರೆಗಳನ್ನು ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
Vijaya Karnataka Web lack of basic facilities at beirut hospita
ಬೀರೂರು ಆಸ್ಪತ್ರೆಯಲ್ಲಿಮೂಲ ಸೌಲಭ್ಯದ ಕೊರತೆ


ಪಟ್ಟಣದ ಜನಸಂಖ್ಯೆ ಹೆಚ್ಚಿದ್ದು ಹಾಗೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವುದರಿಂದ ಅಗತ್ಯ ತುರ್ತು ಚಿಕಿತ್ಸೆ ಸೌಲಭ್ಯಕ್ಕೆ ಸಜ್ಜಾಗಿರಬೇಕಾದ ಈ ಆಸ್ಪತ್ರೆ ಸೌಲಭ್ಯ ಮರೀಚಿಕೆಯಾಗಿ ಪರಿಣಮಿಸಿದೆ. ಹೆಸರಿನ ಸಮುದಾಯ ಆರೋಗ್ಯಕೇಂದ್ರವೇ ಅನಾರೋಗ್ಯ ಪೀಡಿತ ಕೇಂದ್ರವಾಗಿ ಗುರುತಿಸಿಕೊಳ್ಳುತ್ತಿದೆ. ಕಡತಗಳಲ್ಲಿ50 ಹಾಸಿಗೆ ಸೌಲಭ್ಯದ ವರದಿಯಿದ್ದರೂ ಇಲ್ಲಿಕಲ್ಪಿಸಿರುವ ಸೌಲಭ್ಯ ಕನಿಷ್ಟ 30 ಹಾಸಿಗೆಗೆ ಕಡಿಮೆಯಿರುವಂತೆ ಕಂಡ ು ಬಂದಿದೆ.ಕಡೂರಿನಲ್ಲಿ12ವೈದ್ಯರ ಹುದ್ದೆಯಲ್ಲಿ11 ಹುದ್ದೆ ಕರ್ತವ್ಯ ನಿರ್ವಹಿಸುತ್ತಿದ್ದರೆ, ತರೀಕೆರೆಯಲ್ಲಿ10 ವೈದ್ಯರು ಹಾಗೂ ಅಜ್ಜಂಪುರದಲ್ಲಿ6 ವೈದ್ಯರಿದ್ದು ಬೀರೂರಿನಲ್ಲಿಕೇವಲ 3 ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇದೀಗ ಫಿಸಿಷಿಯನ್‌ ವಾಸುದೇವ ಮೂರ್ತಿ ಸಹ ಸ್ವಯಂ ನಿವೃತ್ತಿ ಹೊಂದಿದ್ದು, ಕಳೆದ 2 ತಿಂಗಳಿಂದ ಹೊರರೋಗಿಗಳ ಒತ್ತಡವನ್ನು ಇರುವ ಇಬ್ಬರೇ ವೈದ್ಯರು ಹೊರಬೇಕಿದೆ.ಮಕ್ಕಳ ವೈದ್ಯರು ವರ್ಗಾವಣಿಗೊಂಡು ತೆರಳಿದ್ದಾರೆ. ಆರೋಗ್ಯ ಕೇಂದ್ರ ಇಲ್ಲಿಯವರಗೆ ಪ್ರತಿದಿನ 300ರಿಂದ400 ಹೊರರೋಗಿಗಳಿಗೆ ಚಿಕಿತ್ಸೆ ಸೌಲಭ್ಯ ನೀಡಬೇಕಿದೆ. ಔಷಧಿಗಳ ಕೊರತೆ ಹಾಗೂ ನಿಗದಿತ ಸಮಯಕ್ಕೆ ಔಷದಿಸಿಗದ ಹಿನ್ನೆಲೆಯಲ್ಲಿಇರುವ ಔಷಧಿಯನ್ನೇ ಹಂಚುವ ಇಲಾಖೆಯ ಚೌಕಾಸಿಯಿಂದಾಗಿ ಮಧುಮೇಹ ಹಾಗೂ ರಕ್ತದೊತ್ತಡ ಹಾಗೂ ಇನ್ನಿತರ ಮಾತ್ರೆಗಳು ಸಿಗದೇ ರೋಗಿಗಳು ಪರದಾಡುವಂತಾಗಿದೆ.

ಅರವಳಿಕೆ ತಜ್ಞರು ಇಲ್ಲದೆ ಶಸ್ತ್ರಚಿಕಿತ್ಸೆ ಸೌಲಭ್ಯಕ್ಕೆ ಬೇರೆ ಕಡೆಯ ತಜ್ಞರನ್ನು ಅವಲಂಬಿಸಿದ ಪರಿಣಾಮ ನಿಗದಿತ ವೇಳೆಗೆ ಸೌಲಭ್ಯ ದೊರಕದಾಗಿದೆ. ಒಬ್ಬರು ವೈದ್ಯರು ಆಡಳಿತ ವೈದ್ಯಾಧಿಕಾರಿಯ ಸೇವೆ ಒತ್ತಡ ಸಹ ನೋಡಿಕೊಂಡು ಸೇವೆ ನೀಡಬೇಕಿದ್ದರೆ ಇನ್ನೊಬ್ಬರಿಗೆ ಆರೋಗ್ಯಕ್ಯಾಂಪ್‌ ಹಾಗೂ ಸಭೆಗಳ ಒತ್ತಡದಲ್ಲಿಚಿಕಿತ್ಸೆ ಹೊರೆ ಹೊರಬೇಕಿದೆ. ಸಮರ್ಪಕ ಆರೋಗ್ಯ ಸೇವೆಗೆ ಇಲಾಖೆ ಸರಕಾರ ಹಾಗೂ ಜನಪ್ರತಿನಿಧಿಗಳು ಕಾಳಜಿವಹಿಸಲಿ ಎಂಬುದು ನಾಗರಿಕರ ಆಗ್ರಹವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ