ಆ್ಯಪ್ನಗರ

ವಿಶ್ವಕರ್ಮ ಸಮುದಾಯಕ್ಕೆ ಸವಲತ್ತು ಕೊರತೆ

ವಿಶ್ವಕರ್ಮ ಎಂದರೆ ಸ್ವರ್ಗದ ಶಿಲ್ಪಿ,ಸಮುದ್ರ ಮಂಥನದ ವೇಳೆ ಹುಟ್ಟಿದ ಅಮೂಲ್ಯ ರತ್ನದಲ್ಲಿವಿಶ್ವಕರ್ಮರು ಎಂದು ನಿವೃತ್ತ ಶಿಕ್ಷಕ ಭಾಸ್ಕರಚಾರ್ಯ ಹೇಳಿದರು.

Vijaya Karnataka 19 Sep 2019, 7:03 pm
ಶೃಂಗೇರಿ: ವಿಶ್ವಕರ್ಮ ಎಂದರೆ ಸ್ವರ್ಗದ ಶಿಲ್ಪಿ,ಸಮುದ್ರ ಮಂಥನದ ವೇಳೆ ಹುಟ್ಟಿದ ಅಮೂಲ್ಯ ರತ್ನದಲ್ಲಿವಿಶ್ವಕರ್ಮರು ಎಂದು ನಿವೃತ್ತ ಶಿಕ್ಷಕ ಭಾಸ್ಕರಚಾರ್ಯ ಹೇಳಿದರು.
Vijaya Karnataka Web lack of privilege for the vishwakarma community
ವಿಶ್ವಕರ್ಮ ಸಮುದಾಯಕ್ಕೆ ಸವಲತ್ತು ಕೊರತೆ


ಉಳವಳ್ಳಿಯ ವಿಶ್ವಕರ್ಮ ಸಮುದಾಯಭವನದಲ್ಲಿಮಂಗಳವಾರ ರಾಷ್ಟ್ರೀಯ ಹಬ್ಬಗಳ ಸಮಿತಿ ಮತ್ತು ವಿಶ್ವಕರ್ಮ ಸಮಾಜ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿಮಾತನಾಡಿದರು.ಋುಗ್ವೇದದ ಪ್ರಕಾರ ವಿಶ್ವಕರ್ಮ ಇಡಿ ಜಗತ್ತಿಗೆ ವಾಸ್ತುಶಿಲ್ಪಿ ಹಾಗೂ ಶಿಲ್ಪ ಶಾಸ್ತ್ರದ ವಿಜ್ಞಾನಿಯಾಗಿದ್ದಾರೆ.ವಿಶ್ವಕರ್ಮ ಜಯಂತಿಯನ್ನು ರಾಷ್ಟ್ರೀಯ ಹಬ್ಬಗಳ ಸಮಿತಿಯಿಂದ ಆಚರಿಸುತ್ತಿದ್ದರೂ,ಸಮುದಾಯಕ್ಕೆ ಸರಕಾರದ ಸವಲತ್ತುಗಳು ಸಮರ್ಪಕವಾಗಿ ದೊರಕುತ್ತಿಲ್ಲಎಂದರು.

ಉಪ ತಹಸೀಲ್ದಾರ್‌ ಶಿವರಾಂ ಮಾತನಾಡಿ, ವಿಶ್ವಕರ್ಮ ಜನಾಂಗದವರು ಎಲ್ಲಕ್ಷೇತ್ರದಲ್ಲಿದ್ದಾರೆ. ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ.ಭಗವಾನ್‌ ವಿಶ್ವಕರ್ಮರು ಭೂಲೋಕದ ಜನರ ಕಲ್ಯಾಣಕ್ಕಾಗಿ ದುಡಿದವರಾಗಿದ್ದಾರೆ.ಸಮಾಜವು ಶೈಕ್ಷಣಿಕವಾಗಿ,ಆರ್ಥಿಕವಾಗಿ,ಸಾಮಾಜಿಕವಾಗಿ ಪ್ರಗತಿ ಸಾಧಿಸಬೇಕು ಎಂದರು. ವಿಶ್ವಕರ್ಮ ಸಮಾಜದ ಅಧ್ಯಕ್ಷ ಕೆ.ಎಸ್‌.ವೆಂಕಪ್ಪ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯ ಕೆ.ಎಸ್‌.ರಮೇಶ್‌,ಬಿಇಒ ದಯಾವತಿ ಮತ್ತಿತರರು ಇದ್ದರು.ಇದಕ್ಕೂ ಮೊದಲು ಬೆಳಗ್ಗೆ ವಿಶ್ವಕರ್ಮ ಜಯಂತಿ ಅಂಗವಾಗಿ ವಿಶ್ವಕರ್ಮ ಪೂಜಾ ಹೋಮ,ದಂಪತಿ ಸಂಕಲ್ಪ ಸಮೇತ ಪೂಜಾ ಕಾರ್ಯ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ