ಆ್ಯಪ್ನಗರ

ದಾಂಧಲೆ ಪ್ರಿಯ ಯುವಕರಿಗೆ ಲಾಠಿ ರುಚಿ!

ಸಾರ್ವಜನಿಕ ಸ್ಥಳದಲ್ಲಿ ಬರ್ತ್‌ ಡೇ ಆಚರಿಸುವ ನೆಪದಲ್ಲಿ ಜನರ ನೆಮ್ಮದಿಗೆ ಭಂಗ ತಂದ ಹಲವರಿಗೆ ಪೊಲೀಸರು ಮಂಗಳವಾರ ರಾತ್ರಿ ಲಾಠಿ ರುಚಿ ತೋರಿಸಿದರು.

Vijaya Karnataka 16 May 2019, 5:00 am
ಅಜ್ಜಂಪುರ : ಸಾರ್ವಜನಿಕ ಸ್ಥಳದಲ್ಲಿ ಬರ್ತ್‌ ಡೇ ಆಚರಿಸುವ ನೆಪದಲ್ಲಿ ಜನರ ನೆಮ್ಮದಿಗೆ ಭಂಗ ತಂದ ಹಲವರಿಗೆ ಪೊಲೀಸರು ಮಂಗಳವಾರ ರಾತ್ರಿ ಲಾಠಿ ರುಚಿ ತೋರಿಸಿದರು.
Vijaya Karnataka Web CKM-15AJP01


ರಾತ್ರಿ ಸುಮಾರು ಹತ್ತೂವರೆ ವೇಳೆಗೆ ಗ್ರಾಮ ಪಂಚಾಯಿತಿ ಮಳಿಗೆಯ ಮೇಲ್ಭಾಗದ ಹಿಂಬದಿಯ ಕತ್ತಲಿನ ಸ್ಥಳಕ್ಕೆ ಆಗಮಿಸಿದ್ದ ಹತ್ತು ಹುಡುಗರು ಮೊಬೈಲ್‌ ಬೆಳಕಲ್ಲಿ ಹಲವು ಹಾಡುಗಳನ್ನು ಜೋರಾಗಿ ಹಾಕಿಕೊಂಡು ಕುಣಿದು ಕುಪ್ಪಳಿಸಿದರು. ಮದ್ಯದ ಅಮಲಿನಲ್ಲಿದ್ದ ಇವರಿಗೆ ತಾವು ಏನು ಮಾಡುತ್ತಿದ್ದೇವೆಂಬ ಅರಿವು ಇರಲಿಲ್ಲ. ಅಮಲಿನಲ್ಲಿದ್ದ ಇವರೆಲ್ಲರೂ ಅಶ್ಲೀಲವಾಗಿ ಮಾತನಾಡುತ್ತಾ ಕೂಗುತ್ತಾ ಸಂಭ್ರಮದಲ್ಲಿದ್ದರು. ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇವರು ಇರಲಿಲ್ಲ. ತಂದಿದ್ದ ಕೇಕನ್ನು ಕಟ್‌ ಮಾಡಿ ಅವರಿವರಿಗೆ ತಿನ್ನಿಸಿ, ದೀಪ ಹಚ್ಚಿ ಕೂಗಾಡತೊಡಗಿದರು.

ಈ ಪ್ರದೇಶದಲ್ಲಿ ವಾಸಿಸುವವರಿಗೆ ಈ ಯುವಕರ ವರ್ತನೆ ಅಸಹ್ಯ ತರಿಸಿತು. ಉಪಟಳ ತಾಳಲಾರದೆ ಜನರು ಪೊಲೀಸರಿಗೆ ಮಾಹಿತಿ ತಲುಪಿಸಿದರು.

ಪೊಲೀಸ್‌ ರಂಗೇಗೌಡ ಮತ್ತು ತಂಡದರರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಹಲವರು ಕಟ್ಟಡದಿಂದ ಕೆಳಗೆ ಧುಮುಕಿ ಪರಾರಿಯಾದರೆ ಇನ್ನೂ ಹಲವರು ಪೊಲೀಸರ ಲಾಠಿ ರುಚಿ ಅನುಭವಿಸಿದರು.

ಅನೈತಿಕ ಚಟುವಟಿಕೆ ಸ್ಥಳ:

ಬಸ್‌ ನಿಲ್ದಾಣದಲ್ಲಿರುವ ಗ್ರಾಮ ಪಂಚಾಯಿತಿಗೆ ಸೇರಿದ ಮಳಿಗೆಯ ಹಿಂಭಾಗ ಬೆಳಗಿನಿಂದ ಮಧ್ಯರಾತ್ರಿವರೆಗೂ ಅನೈತಿಕ ಚಟುವಟಿಕೆಯ ತಾಣವಾಗಿದೆ. ಸ್ಥಳೀಯ ಮತ್ತು ಸುತ್ತ ಮುತ್ತಲ ಗ್ರಾಮಗಳಿಂದ ವಿದ್ಯಾಭ್ಯಾಸಕ್ಕೆ ಬರುವ ಹಲವು ಹುಡುಗರು ಈ ಸ್ಥಳವನ್ನು ಆಯ್ಕೆ ಮಾಡಿಕೊಂಡು ಬೀಡಿ, ಸಿಗರೇಟ್‌ ಸೇದುವುದಲ್ಲದೆ ಗುಟ್ಕಾ ಹಾಕಿಕೊಂಡೇ ಶಾಲೆ, ಕಾಲೇಜಿಗೆ ತೆರಳುತ್ತಾರೆ.

ಹಲವು ಪ್ರೇಮಿಗಳಿಗೂ ಈ ಸ್ಥಳ ಪ್ರಶಸ್ತವಾಗಿದ್ದು, ಗಂಟೆಗಟ್ಟಲೇ ಕೂತು ಹರಟೆ ಹೊಡೆಯುತ್ತಾರೆ.

ಗುಟ್ಕಾ ಪ್ರಿಯರ, ಪ್ರೇಮಿಗಳ ತಾಣವಾಗಿರುವ, ಬೀಡಿ ಸಿಗರೇಟ್‌ ಸೇದುವ, ಎಗ್ಗಿಲ್ಲದೆ ಮದ್ಯ ಸೇವಿಸುವ ಈ ಸ್ಥಳಕ್ಕೆ ಆಗಾಗ್ಗೆ ಪೊಲೀಸರು ಭೇಟಿ ನೀಡಿ, ನಿಯಮ ಬಾಹಿರ ಚಟುವಟಿಕೆ ನಿಲ್ಲಿಸಬೇಕೆಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ