ಚಾರ್ಮಾಡಿ ಘಾಟ್‌ಗೆ ಲಗ್ಗೆ ಇಟ್ಟ ಪ್ರವಾಸಿಗರು: ವಾಹನ ಸವಾರರೊಂದಿಗೆ ಪ್ರವಾಸಿಗರ 'ಬೀದಿ ಜಗಳ'!

Vijaya Karnataka Web 11 Jul 2021, 3:54 pm
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಜಲಪಾತ ವೀಕ್ಷಣೆಗೆ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ.ಲಾಕ್‌ಡೌನ್ ನಿಯಮ ತೆರವುಗೊಳ್ಳುತ್ತಿದ್ದಂತೇ, ಚಾರ್ಮಾಡಿ ಘಾಟ್ ಜಲಪಾತಗಳಲ್ಲಿ ಪ್ರವಾಸಿಗರು ವೀಕೆಂಡ್ ಮಸ್ತಿ ಮಾಡಲು ಆರಂಭಿಸಿದ್ದಾರೆ.

ಚಾರ್ಮಾಡಿ ಜಲಪಾತಗಳ ಬಳಿ ಜನ ಹಾಗೂ ವಾಹನ ದಟ್ಟಣೆ ಹೆಚ್ಚಾಗಿ, ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಇದೇ ಸಂದರ್ಭದಲ್ಲಿ ಕೆಲ ಪ್ರವಾಸಿಗರು ವಾಹನ ಸವಾರರಿಗೆ ದಾರಿ ಬಿಡದ ಕಾರಣಕ್ಕೆ ಮಾತಿನ ಚಕಮಕಿ ನಡೆದಿರುವ ಘಟನೆಯೂ ನಡೆದಿದೆ.
ಚಿಕ್ಕಮಗಳೂರಿಗೆ ಪ್ರವಾಸಿಗರ ದಾಂಗುಡಿ: ಕಳಸ, ಶೃಂಗೇರಿಯಲ್ಲೂ ಜನವೋ ಜನ..!

ಕೊರೊನಾಗೆ ಪ್ರವಾಸಿಗರು ಡೋಂಟ್ ಕೇರ್ ಎನ್ನುತ್ತಿದ್ದು,ಸೆಲ್ಫಿಗಾಗಿ ರಸ್ತೆ ಮಧ್ಯೆಯೇ ಗುಂಪುಗೂಡಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ.
Loading ...