ಆ್ಯಪ್ನಗರ

ಹಕ್ಕುಗಳ ರಕ್ಷಣೆಗಿದೆ ಲಾ

ಜಾತಿ, ಮತ, ಧರ್ಮಗಳ ಭೇದವಿಲ್ಲದೆ ದೇಶದ ಪ್ರತಿಯೊಬ್ಬ ನಾಗರಿಕರೂ ರಾಷ್ಟ್ರಧ್ವಜವನ್ನು ಗೌರವಿಸಬೇಕು ಎಂದು ಹಿರಿಯ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್‌ ಚೇಂಗಟಿ ಸಲಹೆ ಮಾಡಿದರು.

Vijaya Karnataka 23 Jul 2019, 5:00 am
ಚಿಕ್ಕಮಗಳೂರು : ಜಾತಿ, ಮತ, ಧರ್ಮಗಳ ಭೇದವಿಲ್ಲದೆ ದೇಶದ ಪ್ರತಿಯೊಬ್ಬ ನಾಗರಿಕರೂ ರಾಷ್ಟ್ರಧ್ವಜವನ್ನು ಗೌರವಿಸಬೇಕು ಎಂದು ಹಿರಿಯ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್‌ ಚೇಂಗಟಿ ಸಲಹೆ ಮಾಡಿದರು.
Vijaya Karnataka Web CKM-22SHIVU-P5


ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಇಸ್ಲಾಮಿಯ ಬೈತುಲ್‌ ಮಾಲ್‌ ಸಂಸ್ಥೆ ನಗರದ ಐ.ಜಿ. ರಸ್ತೆಯ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರಧ್ವಜ ರಾಷ್ಟ್ರೀಯತೆಯ ಸಂಕೇತ, ಅದನ್ನು ಗೌರವಿಸದಿದ್ದರೆ ಅಥವಾ ಅದಕ್ಕೆ ಅಪಮಾನ ಮಾಡಿದರೆ ಕನಿಷ್ಠ ಮೂರು ವರ್ಷ ಕಾರಾಗೃಹ ವಾಸ ಮತ್ತು ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಸ್ರುಲ್ಲಾ ಷರೀಫ್‌ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.

ನ್ಯಾಯವಾದಿ ಕೆ.ಎನ್‌.ಚಂದ್ರಶೇಖರ್‌ ಬಾಲ್ಯ ವಿವಾಹ ಕಾಯಿದೆ ಹಾಗೂ ಬಿ.ಎನ್‌.ಅಶ್ವಿನಿ ಮಕ್ಕಳ ಸಹಾಯ ವಾಣಿ ಬಗ್ಗೆ ಉಪನ್ಯಾಸ ನೀಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್‌.ಎಸ್‌.ವೆಂಕಟೇಶ್‌, ಇಸ್ಲಾಮಿಯ ಬೈತುಲ್‌ ಮಾಲ್‌ ಸಂಸ್ಥೆ ಅಧ್ಯಕ್ಷ ನಜೀರ್‌ ಅಹಮದ್‌, ಮುಖ್ಯ ಶಿಕ್ಷ ಕಿ ಬಿ.ಶಹಾದಿ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಬಿ.ಅಮ್ಜದ್‌, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಜಗದೀಶಾಚಾರ್‌ ಹಾಜರಿದ್ದರು. ಶಿಕ್ಷ ಕರಾದ ಎಸ್‌.ಎಂ.ಮಹೇಶಪ್ಪ ನಿರೂಪಿಸಿದರು. ತಂಜೀಮ್‌ ಸ್ವಾಗತಿಸಿ, ಕಾವ್ಯ ವಂದಿಸಿದರು.

==============================
ಮಕ್ಕಳ ಹಕ್ಕುಗಳ ರಕ್ಷ ಣೆಗಾಗಿ ಸಂವಿಧಾನ ಅನೇಕ ಕಾನೂನುಗಳನ್ನು ರಚಿಸಿದೆ. ಅವುಗಳನ್ನು ಮಕ್ಕಳು ಅರಿಯಬೇಕು. ಹಾಗಾದಾಗ ಮಾತ್ರ ಅವರು ಸುರಕ್ಷಿತವಾಗಿರಲು ಸಾಧ್ಯ. ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾದಲ್ಲಿ ತಕ್ಷ ಣ 1098 ಸಹಾಯ ವಾಣಿಗೆ ಕರೆ ಮಾಡಬೇಕು. ಶಾಲೆಯಲ್ಲಿ ಸಹಾಯ ವಾಣಿಯ ನಾಮಫಲಕ ಅಳವಡಿಸಬೇಕು.
-ಬಸವರಾಜ್‌ ಚೇಂಗಟಿ, ಹಿರಿಯ ನ್ಯಾಯಾಧೀಶ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ