ಆ್ಯಪ್ನಗರ

ಮುತಾಲಿಕ್‌ ಪ್ರಶ್ನೆಗೆ ಸಿ.ಟಿ.ರವಿ ಉತ್ತರಿಸಲಿ

ಕಳೆದ 14 ವರ್ಷದಿಂದ ಕ್ಷೇತ್ರದ ಶಾಸಕನಾಗಿ, ಮಂತ್ರಿಯೂ ಆಗಿ ರಾಜ್ಯ ರಾಜಕಾರಣದಲ್ಲಿ ಹೆಸರು ಮಾಡಲು ಹೊರಟಿರುವ ಸಿ.ಟಿ ರವಿ ಅವರು ಅವರ ಪೂರ್ವಾಶ್ರಮದ ಮಿತ್ರ ಪ್ರಮೋದ್‌ ಮುತಾಲಿಕ್‌ ಅವರ ಪ್ರಶ್ನೆಗೆ ಉತ್ತರಿಸಲಿ ಎಂದು ಎಐಸಿಸಿ ಸದಸ್ಯ ಬಿ.ಎಂ ಸಂದೀಪ್‌ ಹೇಳಿದ್ದಾರೆ.

Vijaya Karnataka 7 Apr 2018, 5:00 am
ಚಿಕ್ಕಮಗಳೂರು : ಕಳೆದ 14 ವರ್ಷದಿಂದ ಕ್ಷೇತ್ರದ ಶಾಸಕನಾಗಿ, ಮಂತ್ರಿಯೂ ಆಗಿ ರಾಜ್ಯ ರಾಜಕಾರಣದಲ್ಲಿ ಹೆಸರು ಮಾಡಲು ಹೊರಟಿರುವ ಸಿ.ಟಿ ರವಿ ಅವರು ಅವರ ಪೂರ್ವಾಶ್ರಮದ ಮಿತ್ರ ಪ್ರಮೋದ್‌ ಮುತಾಲಿಕ್‌ ಅವರ ಪ್ರಶ್ನೆಗೆ ಉತ್ತರಿಸಲಿ ಎಂದು ಎಐಸಿಸಿ ಸದಸ್ಯ ಬಿ.ಎಂ ಸಂದೀಪ್‌ ಹೇಳಿದ್ದಾರೆ.
Vijaya Karnataka Web let ct ravi answer muthalik question
ಮುತಾಲಿಕ್‌ ಪ್ರಶ್ನೆಗೆ ಸಿ.ಟಿ.ರವಿ ಉತ್ತರಿಸಲಿ


ನಗರದ ಶಂಕರಪುರ ಬಡಾವಣೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ವಾರ್ಡ್‌ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಸಿ.ಟಿ.ರವಿ ಅವರ ದಿಢೀರ್‌ ಅಭಿವೃದ್ಧಿಯ ಬಗ್ಗೆ ಮುತಾಲಿಕ್‌ ಅವರು ಮಾಧ್ಯಮಗಳಲ್ಲಿ ಪ್ರಶ್ನಿಸಿದ್ದಾರೆ. ಸಾಮಾನ್ಯ ಕುಟುಂಬದ ಸಿ.ಟಿ. ರವಿ ಅವರಿಗೆ ಇಂದು ಹಲವು ಕೋಟಿಗಳ ಮನೆ, ಕೋಟ್ಯಂತರ ರೂಪಾಯಿ ಕಾರು, ಆಸ್ತಿ ಪಾಸ್ತಿ ಎಲ್ಲ ಎಲ್ಲಿಂದ ಬಂತು ಎಂಬುದು ಮುತಾಲಿಕ್‌ ಅವರ ಪ್ರಶ್ನೆ. ಇಂತಹ ಪ್ರಶ್ನೆ ಮುತಾಲಿಕ್‌ ಅವರದ್ದು ಮಾತ್ರ ಅಲ್ಲ, ಬಹುತೇಕರ ಮುಂದೆ ಇದೆ. ಆದರೆ, ರವಿ ಮಾತ್ರ ಇದ್ಯಾವುದನ್ನೂ ಕೇಳಿಸಿಕೊಳ್ಳದಂತೆ ರಾಜಕಾರಣ ಮಾಡುತ್ತಿದ್ದಾರೆ. ಅವರು ಉತ್ತರಿಸದಿದ್ದರೂ ಪರವಾಗಿಲ್ಲ. ಈ ಕ್ಷೇತ್ರದ ಜನ ಈ ಬಾರಿ ಮತಗಳ ಮೂಲಕ ಅವರನ್ನು ಸೋಲಿಸಿ ಕಾಂಗ್ರೆಸ್‌ ಪಕ್ಷ ವನ್ನು ಗೆಲ್ಲಿಸಲಿದ್ದಾರೆ. ಉಳಿದಿರುವ ಕೆಲವೇ ದಿನಗಳಲ್ಲಿ ಕಾರ್ಯಕರ್ತರು ಉತ್ತಮ ಕೆಲಸ ಮಾಡಬೇಕು ಎಂದು ಹೇಳಿದರು.

ರಾಜ್ಯದ ಬಹುತೇಕ ನಗರಸಭೆ, ಪುರಸಭೆಗಳ ಕಾರ್ಮಿಕರು ರಾಜ್ಯ ಸರಕಾರದ ಅವಕಾಶದಡಿ ವಿದೇಶಗಳಿಗೆ ಹೋಗಿ ಆ ದೇಶದ ಸ್ವಚ್ಛತೆ ಬಗ್ಗೆ ಅಧ್ಯಯನ ನಡೆಸಿ ಬಂದರು. ಆದರೆ, ಚಿಕ್ಕಮಗಳೂರು ನಗರಸಭೆಯ ಕಾರ್ಮಿಕರಿಗೆ ಈ ಭಾಗ್ಯಸಿಗಲಿಲ್ಲ. ಇದಕ್ಕೆ ಶಾಸಕರು ಉತ್ತರಿಸಬೇಕು. ಜಿಲ್ಲೆಯ ಕಡೂರು, ತರೀಕೆರೆ ಮತ್ತಿತರೆ ಸ್ಥಳೀಯ ಸಂಸ್ಥೆಗಳಲ್ಲಿ ರಾಜ್ಯ ಸರಕಾರ ನಿಗದಿಗೊಳಿಸಿರುವ ವೇತನವನ್ನು ಕಾರ್ಮಿಕರಿಗೆ ನೀಡುತ್ತಿದ್ದರೆ ಚಿಕ್ಕಮಗಳೂರು ನಗರಸಭೆಯಲ್ಲಿ ನೀಡದಿರುವುದಕ್ಕೆ ಕಾರಣಗಳೇನು? ಇಂತಹ ಹತ್ತು, ಹಲವು ಪ್ರಶ್ನೆಗಳಿಗೆ ಸಿ.ಟಿ.ರವಿ ಉತ್ತರಿಸದೆ ದತ್ತಪೀಠ ಹೆಸರಿನಲ್ಲಿ ಭಾವನಾತ್ಮಕ ವಿಷಯಗಳನ್ನು ಹರಿಬಿಟ್ಟು ಚುನಾವಣೆ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ