ಆ್ಯಪ್ನಗರ

ಪರಿಸರ ಆಧಾರಿತ ಶಿಕ್ಷಣಕ್ಕೆ ಆದ್ಯತೆ ಇರಲಿ

ಪರಿಸರದೊಂದಿಗಿನ ಹೊರಾಂಗಣ ಚಟುವಟಿಕೆ ಆಧಾರಿತ ಶಿಕ್ಷಣಕ್ಕೆ ಹೆಚ್ಚುಆದ್ಯತೆ ನೀಡಬೇಕು ಎಂದು ಜಿಲ್ಲಾಸ್ಕೌಟ್‌ ಆಯುಕ್ತ ಎ.ಎನ್‌.ಮಹೇಶ್‌ ಹೇಳಿದರು.

Vijaya Karnataka 26 Oct 2019, 5:00 am
ಚಿಕ್ಕಮಗಳೂರು: ಪರಿಸರದೊಂದಿಗಿನ ಹೊರಾಂಗಣ ಚಟುವಟಿಕೆ ಆಧಾರಿತ ಶಿಕ್ಷಣಕ್ಕೆ ಹೆಚ್ಚುಆದ್ಯತೆ ನೀಡಬೇಕು ಎಂದು ಜಿಲ್ಲಾಸ್ಕೌಟ್‌ ಆಯುಕ್ತ ಎ.ಎನ್‌.ಮಹೇಶ್‌ ಹೇಳಿದರು.
Vijaya Karnataka Web let environment based education be a priority
ಪರಿಸರ ಆಧಾರಿತ ಶಿಕ್ಷಣಕ್ಕೆ ಆದ್ಯತೆ ಇರಲಿ


ಜಿಲ್ಲಾಸ್ಕೌಟ್ಸ್‌ ಮತ್ತು ಗೈಡ್ಸ್‌ ಭವನದಲ್ಲಿಕಬ್ಸ್‌ ಮತ್ತು ಬುಲ್‌ಬುಲ್‌ ಮಕ್ಕಳಿಗೆ ಏರ್ಪಡಿಸಿದ್ದ 3 ದಿನದ ಪ್ರಾವಿಣ್ಯತಾ ಪದಕ ತರಬೇತಿ ಶಿಬಿರದಲ್ಲಿಭಾಗವಹಿಸಿ ಅವರು ಮಾತನಾಡಿದರು.

ಸ್ಕೌಟ್ಸ್‌ ಮತ್ತು ಗೈಡ್ಸ್‌ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ.ನೈತಿಕ ಮೌಲ್ಯ ಹಾಗೂ ಪರಿಸರದೊಂದಿಗಿನ ಮಕ್ಕಳ ಒಡನಾಟ ಕಲ್ಪಿಸುವುದರೊಂದಿಗೆ ಹೊರಾಂಗಣ ಶಿಕ್ಷಣಕ್ಕೆ ಆದ್ಯತೆ ನೀಡುವುದು ಪ್ರಮುಖ ಗುರಿಯಾಗಿದೆ ಎಂದರು.

ಕಬ್ಸ್‌ ಮತ್ತು ಬುಲ್‌ಬುಲ್‌ ಮಕ್ಕಳಿಗೆ ಒಟ್ಟು 22 ಪದಕಗಳಿದ್ದು ಕನಿಷ್ಠ 6ಪದಕಗಳಲ್ಲಿತೇರ್ಗಡೆಯಾಗಬೇಕು.ಪ್ರಥಮ ಚರಣ್‌, ದ್ವಿತೀಯ ಚರಣ್‌, ತೃತೀಯ ಚರಣ್‌ ಉತ್ತೀರ್ಣರಾದ ನಂತರ ರಾಜ್ಯ ಪಾಲರ ಪುರಸ್ಕಾರಕ್ಕೆ ಅರ್ಹತೆ ಹೊಂದಲಿದ್ದಾರೆ. ಈ ನಿಟ್ಟಿನಲ್ಲಿಮಕ್ಕಳು ಶ್ರಮವಹಿಸಬೇಕು ಎಂದು ಹೇಳಿದರು.

ತರಬೇತಿ ಆಯುಕ್ತೆ ಸಂಧ್ಯಾರಾಣಿ, ಜಿಲ್ಲಾಸಂಘಟಕ ಕಿರಣ್‌ಕುಮಾರ್‌, ನವೀನ್‌ಕುಮಾರ್‌, ಗೀತಾ, ಪ್ರಸನ್ನ, ಅನುಷ್ಕಾ ಹಾಜರಿದ್ದರು. ಸಂಧ್ಯಾರಾಣಿ ಸ್ವಾಗತಿಸಿ, ನವೀನ್‌ ಕುಮಾರ್‌ ವಂದಿಸಿದರು. ಶಾಂತಿ, ನಿಶಾಂತ್‌ ಬೇಗಂ, ಜಯಲಕ್ಷ್ಮಿ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಿದ್ದರು. ವಿವಿಧ ಶಾಲೆಗಳ 200 ವಿದ್ಯಾರ್ಥಿಗಳು ಭಾಗವಹಿಸಿದ್ದರು.

--------------

ಮಕ್ಕಳು ಉತ್ತಮ ಗುರಿ ಹೊಂದಲು ಕನಸು ಕಾಣಬೇಕು.ನಂತರ ಅದನ್ನು ಸಾಕರಗೊಳಿಸಲು ಸರ್ವ ಪ್ರಯತ್ನ ಮಾಡಬೇಕು.

-ಡಿ.ಎಸ್‌.ಮಮತಾ
,ಜಿಲ್ಲಾ ಗೈಡ್ಸ್‌ ಆಯುಕ್ತೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ