ಆ್ಯಪ್ನಗರ

ಎಲ್ಲರಿಗೂ ಬದುಕಿನ ಜ್ಞಾನೋದಯ ಆಗಲಿ

ಎಲ್ಲರಿಗೂ ಬದುಕಿನಲ್ಲಿ ಜ್ಞಾನೋದಯವಾಗಬೇಕು ಎಂದು ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Vijaya Karnataka 11 May 2019, 5:00 am
ನರಸಿಂಹರಾಜಪುರ : ಎಲ್ಲರಿಗೂ ಬದುಕಿನಲ್ಲಿ ಜ್ಞಾನೋದಯವಾಗಬೇಕು ಎಂದು ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.
Vijaya Karnataka Web CKM-10NRP1


ಮೆಣಸೂರು ಬಸವ ಕೇಂದ್ರದಲ್ಲಿ ಬಸವ ಜಯಂತಿ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಹಾಗೂ ಶರಣ ಸಂಸ್ಕೃತಿ, ಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಶುಕ್ರವಾರ ಆಶೀರ್ವಚನ ನೀಡಿದರು. ಜ್ಞಾನದ ಸಂಪತ್ತೇ ನಿಜವಾದ ಸಂಪತ್ತೆಂದು ಶವಶರಣರು, ಶಿವಯೋಗಿಗಳು ಭಾವಿಸಿದ್ದರು. ಜ್ಞಾನದ ಸಂಪತ್ತನ್ನು ಹುಡುಕುತ್ತಿದ್ದ ಶಿವಶರಣರಿಗೆ, ಶಿವಯೋಗಿಗಳಿಗೆ ಸುಜ್ಞಾನದ ಸಂಪತ್ತು ಒಲಿಯಿತು. ಎಲ್ಲರಿಗೂ ಬದುಕಿನಲ್ಲಿ ಜ್ಞಾನೋದಯವಾಗಬೇಕು. ಜ್ಞಾನ ಯೋಗದಿಂದ ಶರಣರು, ಶಿವಯೋಗಿಗಳೂ ಆಗುತ್ತಾರೆ. ಪ್ರತಿಯೊಬ್ಬರೂ ಕೂಡ ಕಾಯಕವನ್ನು ಮಾಡುತ್ತಾ ಸುಜ್ಞಾನವನ್ನು ಪಡೆಯಬೇಕು. ಬಸವಣ್ಣ, ಅಕ್ಕಮಹಾದೇವಿ, ಹೇಮರೆಡ್ಡಿ ಮಲ್ಲಮ್ಮ ಜ್ಞಾನಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದರು. ಆದರೆ ಯಾವುದೇ ಸಂಪತ್ತಿಗೆ ಆದ್ಯತೆ ನೀಡಲಿಲ್ಲ. ಜ್ಞಾನದ ಮೂಲಕ ಒಳಗಿನ ನೋಟವನ್ನು ಕಂಡರು. ಹಾಗೆಯೇ ನೀವೂ ಕೂಡ ಇಷ್ಟಲಿಂಗವನ್ನು ನೋಡುತ್ತಾ ನಿಮ್ಮೊಳಗಿನ ನೋಟವನ್ನು ಕಾಣಬೇಕು ಎಂದರು.

ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ಇಡ.ರಾಜೇಗೌಡ ಮಾತನಾಡಿ, ಉತ್ತಮ ಧರ್ಮದ ಸಂದೇಶವನ್ನು ಜಗತ್ತಿಗೇ ಸಾರುವ ಕೆಲಸವನ್ನು ಡಾ.ಶಿವಮೂರ್ತಿ ಮುರುಗಾ ಶರಣರು ಮಾಡುತ್ತಿದ್ದಾರೆ. ನಾವೆಲ್ಲರೂ ಒಂದೇ ಎಂಭ ಬಾವನೆ ಬಂದಾಗ ಮಾತ್ರ ಆರೋಗ್ಯಕರವಾದ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಈ ಸಮುದಾಯದ ಅಭಿವೃದ್ಧಿಗೆ ಬೇಕಾದ ಎಲ್ಲಾ ರೀತಿಯ ಸಹಕಾರಗಳನ್ನು ನೀಡುವುದಾಗಿ ಭರವಸೆ ನೀಡಿದರು.

ಮೆಣಸೂರು ಬಸವ ಕೇಂದ್ರದ ಶ್ರೀ ಬಸವ ಯೋಗಿ ಪ್ರಭು ಸ್ವಾಮೀಜಿ ಮಾತನಾಡಿ, ಅಡ್ಡ ಪಲ್ಲಕ್ಕಿ, ಉದ್ದ ಪಲ್ಲಕ್ಕಿ ಉತ್ಸವ ಆಚರಿಸಿಕೊಳ್ಳುವಂತಹ ಗುರುಗಳ ಹಿಂದೆ ನಾವು ಹೋಗಬಾರದು. ಶೋಷಿತ ವರ್ಗದ ಆಶಾಕಿರಣವಾಗಿರುವ ಬಸವಣ್ಣನವರ ತತ್ವಗಳನ್ನು ಪಾಲಿಸಿ, ಜೀವನವನ್ನು ಮೌಢ್ಯ, ಕಂದಾಚಾರಗಳಿಂದ ವಿಮುಕ್ತಿಗೊಳಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಶಿವಶರಣರ ಪದ್ಧತಿಯಂತೆ ಎನ್‌.ಆರ್‌.ಪುರ ಪಟ್ಟಣದ ಮುಂಡೊಳ್ಳಿ ಜನತಾ ಕಾಲೋನಿಯ ಶ್ವೇತಾ, ತರೀಕೆರೆ ತಾಲೂಕು ಕಾಟಿಗನೆರೆ ನವೀನ್‌ಕುಮಾರ್‌ ಸರಳ ವಿವಾಹವಾಗಿ ಡಾ.ಶಿವಮೂರ್ತಿ ಮುರುಘಾ ಶರಣರ ಆಶೀರ್ವಾದ ಪಡೆದರು. ಸಂತೆಕಡೂರಿನ ಪ್ರಭುದೇವ ಜ್ಞಾನ ಮಂಟಪದ ಶ್ರೀ ನವಲಿಂಗ ಶರಣರು ಹಾಗೂ ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿದರು.ಅಥಣಿಯ ಬೆಕ್ಕಿನಮಠದ ಬಸವ ಸ್ವಾಮೀಜಿ, ಶಿವಮೊಗ್ಗದ ಬಸವ ಕೇಂದ್ರದ ಬಸವ ಮರುಳುಸಿದ್ದ ಸ್ವಾಮೀಜಿ, ಶಿಕಾರಿಪುರ ವಿರಕ್ತ ಮಠದ ಶ್ರೀ ಚೆನ್ನಬಸವ ಸ್ವಾಮೀಜಿ, ಬಸವ ಕೇಂದ್ರದ ಅಧ್ಯಕ್ಷ ಶಾಂತರಾಜ್‌, ಯುವ ಲಿಂಗಾಯತ ಮಹಾಸಭಾ ಅಧ್ಯಕ್ಷ ಯು.ಮೋಹನ್‌, ಚಿತ್ರದುರ್ಗಾ ಮಠದ ಸಂಚಾಲಕ ಪುಟ್ಟಸ್ವಾಮಿ, ನ್ಯಾಮತಿಯ ಶಿವಯೋಗಿ, ಸೋಮೇಶ್‌ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ