ಆ್ಯಪ್ನಗರ

ಸಾಧನೆಗೆ ಮಹಿಳಾ ಶಕ್ತಿ ಸಮರ್ಪಕ ಬಳಕೆ ಆಗಲಿ

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬಂತೆ ಮಹಿಳೆ ತನ್ನ ಶಕ್ತಿ ಸಾಮಥ್ಯವನ್ನು ಸಮರ್ಥವಾಗಿ ಬಳಸಿಕೊಂಡು ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಬೇಕೆಂದು ಪುರಸಭಾಧÜ್ಯಕ್ಷೆ ಸವಿತಾರಮೇಶ್‌ ಹೇಳಿದರು.

Vijaya Karnataka 24 Nov 2018, 9:42 pm
ಬೀರೂರು : ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬಂತೆ ಮಹಿಳೆ ತನ್ನ ಶಕ್ತಿ ಸಾಮಥ್ಯವನ್ನು ಸಮರ್ಥವಾಗಿ ಬಳಸಿಕೊಂಡು ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಬೇಕೆಂದು ಪುರಸಭಾಧÜ್ಯಕ್ಷೆ ಸವಿತಾರಮೇಶ್‌ ಹೇಳಿದರು.
Vijaya Karnataka Web let proper use of female power for achievement
ಸಾಧನೆಗೆ ಮಹಿಳಾ ಶಕ್ತಿ ಸಮರ್ಪಕ ಬಳಕೆ ಆಗಲಿ


ಪಟ್ಟಣದ ಡಿ.ವಿ.ಹಾಲಪ್ಪ ರಸ್ತೆಯ ಅಕ್ಕಮಹಾದೇವಿ ಮಹಿಳಾ ಸಮಾಜದಲ್ಲಿ ಸೋಮವಾರ ನಡೆದ 63ನೇ ರಾಜ್ಯೋತ್ಸವ ಹಾಗೂ ನೂತನವಾಗಿ ನಿರ್ಮಿಸಿದ ಸಭಾಂಗಣದ ಉದ್ಘಾಟನೆಯನ್ನು ಶುಕ್ರವಾರ ನೆರವೇರಿಸಿ ಮಾತನಾಡಿ, ಮಹಿಳೆಯರು ಸನಾತನ ಸಂಸ್ಕೃತಿಯ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಮೂಲಕ ಗೃಹಿಣೆಯಾಗಿ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ನಾರಿಯರಿಗೆ ಇರುವ ಗೌರವಸ್ಥಾನದ ಮೌಲ್ಯವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ತಿಳಿಸಿದರು.

ಅಕ್ಕಮಹಾದೇವಿ ಮಹಿಳಾ ಸಮಾಜ ಪಟ್ಟಣದಲ್ಲಿ ಮಹಿಳಾ ಸಬಲೀಕರಣದ ಎಲ್ಲಾ ಆಶಯಗಳಿಗೆ ಪೂರಕವಾಗಿ ಕೆಲಸನಿರ್ವಹಿಸುವ ಮೂಲಕ ಇನ್ನಿತರ ಮಹಿಳಾ ಸಮಾಜಗಳಿಗೆ ಮಾದರಿಯಾಗಿ ಕೆಲಸನಿರ್ವಹಿಸುತ್ತಿರುವುದು ಪಟ್ಟಣದ ಹಿರಿಮೆಯನ್ನು ಹೆಚ್ಚಿಸಿದೆ ಎಂದರು.

ಪ್ರಾಸ್ತಾವಿಕವಾಗಿ ಮಹಿಳಾ ಸಮಾಜ ಸಾಧನೆ ಮಾಹಿತಿ ನೀಡಿದ ಕಾರ್ಯದರ್ಶಿ ಸ್ವರ್ಣಗುರುನಾಥ್‌, ಅಕ್ಕನಬಳಗ ಇಂದು ಅಕ್ಕಮಹಾದೇವಿ ಮಹಿಳಾ ಸಮಾಜವಾಗಿ ಶಿಕ್ಷ ಣ,ಸಾಂಸ್ಕೃತಿಕ,ಸಾಹಿತ್ಯಿಕ,ಕಲೆ,ಸಾಮಾಜಿಕ,ಆಧ್ಯಾತ್ಮಿಕವಾಗಿ ಸಮಾಜ ಆಶಯಗಳಿಗೆ ಪೂರಕರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು. ಅಧ್ಯಕ್ಷ ತೆ ವಹಿಸಿ ಮಾತನಾಡಿದ ಅಕ್ಕಮಹಾದೇವಿ ಮಹಿಳಾ ಸಮಾಜದ ಅಧ್ಯಕ್ಷೆ ಪತ್ರೆ ಶೈಲಜಾ ಸದಾಶಿವನ್‌, ಸಮಾನ ಮನಸ್ಕ ಚಿಂತನೆಯ ಮಹಿಳೆಯರ ಕ್ರಿಯಾಶೀಲತೆ ಹಾಗೂ ಉದಾರಮನಸ್ಸಿನ ದಾನಿಗಳ ನೆರವಿನಿಂದ ಸಮಾಜ ಪ್ರಗತಿಯತ್ತ ಸಾಗಿದೆ.ಮುಂದಿನ ದಿನಗಳಲ್ಲಿ ಮಹಿಳಾ ಜಾಗೃತಿ ಹಾಗೂ ಶೈಕ್ಷ ಣೆಕವಾಗಿ ಇನ್ನು ಉತ್ತಮ ಸಾಧನೆ ಮಾಡುವ ಹಂಬಲವಿದೆ ಎಂದರು.

ವಕೀಲ, ನೋಟರಿ ಎಂ.ಎಚ್‌.ನಿರ್ಮಲಾ ಮಾತನಾಡಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ದಾವಣಗೆರೆಯ ರಾಜೇಶ್ವರಿ ಮಾತನಾಡಿದರು. ಹಿರಿಯರಾದ ಲೀಲಾ ಸೋಮಶೇಖರ್‌,ಲಲಿತಮ್ಮ ಡಿ.ಸಿ. ಶ್ರೀಕಂಠಪ್ಪ, ಸಮಾಜದ ಉಪಾಧ್ಯಕ್ಷೆ ಪತ್ರೆ.ಆರ್‌.ಇಂದುಮತಿ, ಶಾರದಾ ಆರಾಧ್ಯ, ಸುಧಾ ಸೋಮಶೇಖರ್‌, ಪುಷ್ಪಮಲ್ಲಿಕಾರ್ಜುನ್‌, ಆಡಳಿತಾಧಿಕಾರಿ ದಯಾನಂದ್‌, ಸದಸ್ಯೆಯರು ಇದ್ದರು.ಇದೇ ಸಂದರ್ಭ ಸಭಾಂಗಣ ನಿರ್ಮಾಣಕ್ಕೆ ಸಹಕರಿಸಿದ ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಪತ್ರೆ.ಎಸ್‌.ರಾಜಶೇಖರ್‌ ಸೇವೆಯನ್ನು ಸ್ಮರಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ