ಆ್ಯಪ್ನಗರ

ವೈಜ್ಞಾನಿಕ ಸಾಧನೆಗೆ ಅನ್ವೇಷಣಾ ಗುರಿ ಇರಲಿ

ವೈಜ್ಞಾನಿಕ ಆವಿಷ್ಕಾರ ಹೆಚ್ಚಿನ ಮಹತ್ವ ಹೊಂದಿದ್ದು, ಮಕ್ಕಳು ಈ ಕ್ಷೆತ್ರದ್ಲಲಿ ಸಾಧನೆ ಗುರಿ ಹೊಂದಬೇಕು ಎಂದು ಇಸ್ರೋದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯುವವಿಜ್ಞಾನಿಗಳಾದ ಬೀರೂರು ಪಟ್ಟಣದ ಬಿ.ಸಿ ವಿಶ್ವಾಸ್‌ ಮತ್ತು ಕಲ್ಕತ್ತದ ತೇಜಸ್ಮಯ್‌ ಹೇಳಿದರು.

Vijaya Karnataka 18 Aug 2019, 5:00 am
ಬೀರೂರು : ವೈಜ್ಞಾನಿಕ ಆವಿಷ್ಕಾರ ಹೆಚ್ಚಿನ ಮಹತ್ವ ಹೊಂದಿದ್ದು, ಮಕ್ಕಳು ಈ ಕ್ಷೆತ್ರದ್ಲಲಿ ಸಾಧನೆ ಗುರಿ ಹೊಂದಬೇಕು ಎಂದು ಇಸ್ರೋದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯುವವಿಜ್ಞಾನಿಗಳಾದ ಬೀರೂರು ಪಟ್ಟಣದ ಬಿ.ಸಿ ವಿಶ್ವಾಸ್‌ ಮತ್ತು ಕಲ್ಕತ್ತದ ತೇಜಸ್ಮಯ್‌ ಹೇಳಿದರು.
Vijaya Karnataka Web CKM-17BRR4


ಪಟ್ಟಣದ ಕೆಎಲ್‌ಕೆ ಸರಕಾರಿ ಪ್ರೌಢಶಾಲೆಯ ಮಕ್ಕಳಿಗೆ ಇನ್ನರ್‌ವ್ಹೀಲ್‌ ಕ್ಲಬ್‌ ವತಿಯಿಂದ ಶನಿವಾರ ಆಯೋಜಿಸಿದ್ದ ಯುವವಿಜ್ಞಾನಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಚಂದ್ರಯಾನ2 ಹಾಗೂ ಉಪಗ್ರಹ ಉಡಾವಣೆ ನಿಯಮಗಳು ಮತ್ತು ಶೈಕ್ಷ ಣಿಕ ಬದುಕಿನ ಉಪಯುಕ್ತತೆ ಕುರಿತಂತೆ ಮಾಹಿತಿ ನೀಡಿದರು.ಪ್ರಯೋಗಶೀಲತೆ ಹಲವು ಆವಿಷ್ಕಾರಕ್ಕೆ ನಾಂದಿಯಾಗಬಲ್ಲದು, ಹಲವು ಸಾಮಾನ್ಯ ಹಾಗೂ ವೈಜ್ಞಾನಿಕ ಘಟನೆಗಳು ನಮ್ಮ ಮುಂದಿದೆ.ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿಯಾಗದಿದ್ದರೂ ವೈಜ್ಞಾನಿಕ ಸಾಧನೆ ಮೂಲಕ ವಿಶ್ವದಾದ್ಯಂತ ಹೆಸರುಗಳಿಸಿದ ವೈಜ್ಞಾನಿಕ ಅನ್ವೇಷಣಾ ಮನಸ್ಸಿನ ಸಾಧಕರ ದೊಡ್ಡ ಪಟ್ಟಿ ನಮ್ಮ ಮುಂದಿದೆ. ಭಾರತ ವಿಶ್ವದಲ್ಲಿ ತನ್ನ ಕ್ರಾಂತಿಕಾರಕ ಬಾಹ್ಯಾಕಾಶ ಸಾಧನೆ ಮೂಲಕ ಇಂದು ಮುಂಚೂಣಿ ಸಾಧಕ ರಾಷ್ಟವಾಗಿ ಹೊರಹೊಮ್ಮಿದೆ. ಇಸ್ರೋ ಸಾಧನೆಗೆ ಯುವ ವಿಜ್ಞಾನಿಗಳ ಕೊಡುಗೆ ಅಪಾರ ಎಂಬುದನ್ನು ನೆನಪಿಸಿದರು.ಇನ್ನರ್‌ವ್ಹೀಲ್‌ ಅಧ್ಯಕ್ಷೆ ಗೌರಿಪ್ರಸನ್ನ, ಕಾರ್ಯದರ್ಶಿ ಉಷಾಸ್ವಾಮಿ,ರೂಪಾರವಿಶಂಕರ್‌,ಕೃಷ್ಣವೇಣಿ ಶ್ರೀನಿವಾಸಮೂರ್ತಿ, ಅನ್ನಪೂರ್ಣ ತ್ಯಾರಪ್ಪ ಶಿಕ್ಷ ಕವೃಂದದವರು ಇದ್ದರು. ಜೋಡಿತಿಮ್ಮಾಪುರ ಹಾಗೂ ಲಲಿತಸುಧಾ ಶಾಲೆಯಲ್ಲಿನ ಮಕ್ಕಳಿಗೆ ಸಹ ಮಾರ್ಗದರ್ಶನ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ