ಆ್ಯಪ್ನಗರ

ಸಮ್ಮೇಳನಕ್ಕೆ ಸರ್ವಸಮ್ಮತ ಆಯ್ಕೆ ಆಗಲಿ

ಕನ್ನಡ ಸಾಹಿತ್ಯ ಪರಿಷತ್‌ ಸಮ್ಮೇಳನಾಧ್ಯಕ್ಷರ ವೇದಿಕೆಯನ್ನು ಸುಸಂಸ್ಕೃತರು ಏರಬೇಕಿದ್ದು, ಸಮಾಜ ಬಾಹಿರ ಚಟುವಟಿಕೆಯಲ್ಲಿತೊಡಗಿಸಿಕೊಂಡಿದ್ದ ವ್ಯಕ್ತಿಯನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಿರುವುದು ಸರಿಯಲ್ಲಎಂದು ಸಂಘ ಪರಿವಾರದ ಕುಂದಾಪುರದ ಚೈತ್ರಾ ಹೇಳಿದರು.

Vijaya Karnataka 4 Jan 2020, 5:00 am
ಶೃಂಗೇರಿ (ಚಿಕ್ಕಮಗಳೂರು) : ಕನ್ನಡ ಸಾಹಿತ್ಯ ಪರಿಷತ್‌ ಸಮ್ಮೇಳನಾಧ್ಯಕ್ಷರ ವೇದಿಕೆಯನ್ನು ಸುಸಂಸ್ಕೃತರು ಏರಬೇಕಿದ್ದು, ಸಮಾಜ ಬಾಹಿರ ಚಟುವಟಿಕೆಯಲ್ಲಿತೊಡಗಿಸಿಕೊಂಡಿದ್ದ ವ್ಯಕ್ತಿಯನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಿರುವುದು ಸರಿಯಲ್ಲಎಂದು ಸಂಘ ಪರಿವಾರದ ಕುಂದಾಪುರದ ಚೈತ್ರಾ ಹೇಳಿದರು.
Vijaya Karnataka Web 3SRI2_35


ಪಟ್ಟಣದ ಸಂತೆ ಮಾರುಕಟ್ಟೆ ಬಳಿ ಕಸಾಪ ಉಳಿಸಿ ವೇದಿಕೆ ಶುಕ್ರವಾರ ಆಯೋಜಿಸಿದ್ದ ಕಸಾಪ ಜಿಲ್ಲಾಸಮ್ಮೇಳಾನಾಧ್ಯಕ್ಷರ ಆಯ್ಕೆ ವಿರುದ್ಧ ನಡೆದ ಪ್ರತಿಭಟನಾ ಸಭೆಯಲ್ಲಿಮಾತನಾಡಿದರು.

ಸಾಹಿತ್ಯಾಸಕ್ತರ ಹಾಗೂ ಸರ್ವ ಸಮ್ಮತದ ಆಯ್ಕೆ ಇದಾಗಿರಬೇಕು. ಆದರೆ ಇಲ್ಲಿಕೆಲವೇ ವ್ಯಕ್ತಿಗಳ ಗುಂಪು ತಮಗೆ ಇಷ್ಟ ಬಂದ ರೀತಿಯ ಆಯ್ಕೆ ಮಾಡಿಕೊಂಡು ಎಲ್ಲರನ್ನೂ ಒಪ್ಪಿಕೊಳ್ಳುವಂತೆ ಒತ್ತಡ ತರುತ್ತಿದ್ದಾರೆ. ಬಡವರ ಭೂಮಿಯನ್ನು ಕಬಳಿಸಿರುವ ವ್ಯಕ್ತಿಯನ್ನು ಸ್ಥಳೀಯ ಶಾಸಕರು ಬೆಂಬಲಿಸುವ ಕೆಲಸ ಮಾಡಬಾರದು. ಕಸಾಪದವರಿಗೆ ಹೃದಯ ವೈಶಾಲ್ಯತೆ ಬೇಕಿದೆ. ಅಧ್ಯಕ್ಷರ ಬದಲಾವಣೆ ಮಾಡಿ ಸಮ್ಮೇಳನವನ್ನು ಆಯೋಜಿಸಲಿ ಎಂದು ಆಗ್ರಹಿಸಿದರು.

ಪರಿಸರ ಹೋರಾಟಗಾರ ಗಜೇಂದ್ರ ಗೊರಸುಕೊಡಿಗೆ ಮಾತನಾಡಿ, ಜಿಲ್ಲಾಕಸಾಪ ಅಧ್ಯಕ್ಷ ಕುಂದೂರು ಅಶೋಕ್‌ ಉತ್ತಮ ಸಾಹಿತಿಯಾಗಿದ್ದಾರೆ. ಆದರೆ ಜಿಲ್ಲೆಯಲ್ಲಿಸಾಕಷ್ಟು ಉತ್ತಮ ಸಾಹಿತಿಗಳಿದ್ದರೂ, ವಿವಾದಿತ ವ್ಯಕ್ತಿಯನ್ನು ಆಯ್ಕೆ ಮಾಡಿರುವುದು ಸರಿಯಲ್ಲಎಂದರು.

ರೈತ ಮುಖಂಡ ತನಿಕೋಡು ಮಂಜುನಾಥ ನಾಯ್‌್ಕ ಮಾತನಾಡಿ, ಬಡ ರೈತರಿಗೆ ವಂಚನೆ ಮಾಡಿ ಬಡವರನ್ನು ಜೀತದಾಳರನ್ನಾಗಿ ಮಾಡಿದ ವ್ಯಕ್ತಿಯನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿರುವುದಕ್ಕೆ ವಿರೋಧವಿದೆ ಎಂದರು.

ಬಜರಂಗದಳ ಜಿಲ್ಲಾಉಪಾಧ್ಯಕ್ಷ ಆರ್‌.ಡಿ.ಮಹೇಂದ್ರ, ಜಿ.ಪಂ. ಅಧ್ಯಕ್ಷೆ ಸುಜಾತಕೃಷ್ಣಪ್ಪ, ಶ್ರೀರಾಮಸೇನೆಯ ರಂಜಿತ್‌ ಶೆಟ್ಟಿ, ಜಿಲ್ಲಾಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಎಂ.ಶ್ರೀನಿವಾಸ್‌ ಇದ್ದರು. ಎಬಿವಿಪಿ ಮುಖಂಡ ಸಂತೋಷ್‌ ಮೇಗೂರು ಪ್ರಾಸ್ತಾವಿಕವಾಗಿ ಮಾತನಾಡಿದರು.


ಪ್ರತಿಭಟನಾ ಮೆರವಣಿಗೆ

ಪಟ್ಟಣದ ಬಸ್‌ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡಿದ್ದು, ಸಮ್ಮೇಳನ ಬೇಕು, ಅಧ್ಯಕ್ಷ ಬೇಡ, ಉಳಿಸಿ ಉಳಿಸಿ ಕಸಾಪ ಉಳಿಸಿ ಮುಂತಾದ ಘೋಷಣೆಗಳೊಂದಿಗೆ ಪ್ರತಿಭಟನಾ ವೇದಿಕೆ ಸ್ಥಳಕ್ಕೆ ಬರಲಾಯಿತು. ಸಭೆಯ ನಂತರ ತಾಲೂಕು ಕಚೇರಿಗೆ ತೆರಳಿ ಮನವಿ ಪತ್ರವನ್ನು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಲಾಯಿತು. ಪ್ರತಿಭಟನಾ ಸಭೆಯಲ್ಲಿಮಾಜಿ ಶಾಸಕ ಡಿ.ಎನ್‌.ಜೀವರಾಜ್‌ ಹಾಜರಾಗದೇ ಇರುವುದು ಎದ್ದು ಕಾಣುತ್ತಿತ್ತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ