ಆ್ಯಪ್ನಗರ

ಶಿಕ್ಷ ಕರ ಬಗ್ಗೆ ಸರಕಾರ ಮೃದು ಧೋರಣೆ ತಾಳಲಿ

ಶಿಕ್ಷ ಕರ ಬಗ್ಗೆ ಸರಕಾರಗಳು ಮೃದು ಧೋರಣೆಯನ್ನು ಹೊಂದಬೇಕಾಗಿದೆ ಎಂದು ವಿಧಾನಪರಿಷತ್‌ ಸದಸ್ಯೆ ತೇಜಸ್ವಿನಿಗೌಡ ಹೇಳಿದರು.

Vijaya Karnataka 11 Feb 2019, 5:00 am
ಕಡೂರು :
Vijaya Karnataka Web CKM-10KDR2

(ಪದ್ಮಭೂಷಣ ಡಾ. ವೆಂಕಟಲಕ್ಷ ್ಮಮ್ಮ ವೇದಿಕೆ) :
ಶಿಕ್ಷ ಕರ ಬಗ್ಗೆ ಸರಕಾರಗಳು ಮೃದು ಧೋರಣೆಯನ್ನು ಹೊಂದಬೇಕಾಗಿದೆ ಎಂದು ವಿಧಾನಪರಿಷತ್‌ ಸದಸ್ಯೆ ತೇಜಸ್ವಿನಿಗೌಡ ಹೇಳಿದರು.

ಮತಿಘಟ್ಟ ಗ್ರಾಮದಲ್ಲಿ ಭಾನುವಾರ ನಡೆಯುತ್ತಿರುವ 5ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಶಾಲೆಗಳ ಅಳಿವು-ಉಳಿವು-ಅವಲೋಕನ-ಸಂವಾದ ಹಾಗೂ ಸಮಾಜ-ಮಹಿಳೆ-ಜಾಗೃತಿ ಎಂಬ ಜಂಟಿಗೋಷ್ಟಿಯಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಕನ್ನಡ ಶಾಲೆಗಳನ್ನು ಉಳಿಸಬೇಕಾದರೆ ಮೊದಲು ಶಿಕ್ಷ ಕರನ್ನು ಉಳಿಸಬೇಕು. ಶಿಕ್ಷ ಕರ ಸಮಸ್ಯೆ ನೂರಾರಿದೆ. ಖಾಸಗಿ ಶಾಲೆಗಳ ಪ್ರಭಾವದಿಂದಾಗಿ ಸರಕಾರಿ ಶಾಲೆಗಳಿಗೆ ಮಕ್ಕಳ ಕೊರತೆಯಾಗಿದೆ. ಈ ಕೊರತೆಯಿಂದ ಮತ್ತು ತಮ್ಮದಲ್ಲದ ತಪ್ಪಿನಿಂದ ಶಿಕ್ಷ ಕರಿಗೆ ವರ್ಗಾವಣೆಯ ಭೂತ ಕಾಡುತ್ತಿದೆ ಎಂದರು.

ಇಂಗ್ಲೀಷ್‌ ಒಂದು ಭಾಷೆಯಾಗಿ ಅಭ್ಯಾಸ ಮಾಡಬೇಕೆ ಹೊರತು ಅದನ್ನು ಬಳಕೆಯ ಅಥವಾ ವ್ಯವಹಾರದ ಭಾಷೆಯನ್ನಾಗಿ ಬಳಸಬಾರದು ಎಂದ ಅವರು ಕನ್ನಡ ಶಾಲೆಗಳ ಅಭಿವೃದ್ದಿಗೆ ಪೂರಕವಾದ ಮತ್ತು ಪ್ರೋತ್ಸಾಹದಾಯಕವಾದ ವಾತಾವರಣ ನಿರ್ಮಿಸುವುದು ಎಲ್ಲರ ಜವಾಬ್ದಾರಿ ಎಂದರು.

ಮಂಗಳಮುಖಿ ಎ. ಚಾಂದನಿ ಅವರು ನನ್ನ ಕಥೆ-ನಿಮ್ಮ ಜೊತೆ ಎಂಬ ವಿಷಯವಾಗಿ ಮಾತನಾಡಿ,ತಾವು ಬದುಕಿನಲ್ಲಿ ಅನುಭವಿಸಿದ ಕಷ್ಟ ಕಾರ್ಪಣ್ಯಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರಲ್ಲದೆ ಮಂಗಳಮುಖಿಯರಿಗೆ ಸರಕಾರದಿಂದ ಸ್ವಾವಲಂಬಿ ಬದುಕು ಕಟ್ಟಿಕೊಡುವ ಹಾಗೂ ಅವರನ್ನು ಗೌರವದಿಂದ ಕಾಣುವ ವಾತಾವರಣ ನಿರ್ಮಾಣವಾಗಬೇಕೆಂದು ಆಶಿಸಿದರು.

ಅಧ್ಯಕ್ಷ ತೆ ವಹಿಸಿದ್ದ ಖ್ಯಾತ ಬಂಡಾಯ ಸಾಹಿತಿ ಬಿ.ಟಿ. ಲಲಿತಾನಾಯಕ್‌ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನಗಳು ಗ್ರಾಮೀಣ ಭಾಗದಲ್ಲಿ ನಡೆಯುವುದಕ್ಕೆ ಹೆಚ್ಚಿನ ಒತ್ತು ನೀಡಬೇಕು. ಜತೆಗೆ ಇಂತಹ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳನ್ನು ಜಾರಿ ಮಾಡುವಲ್ಲಿ ಸರಕಾರವು ಮನಸ್ಸು ಮಾಡಬೇಕು. ಸಮ್ಮೇಳನಗಳು ಕೇವಲ ಸಮಸ್ಯೆಗಳನ್ನು ಬಿಂಬಿಸುವ ವೇದಿಕೆಯಾಗಬಾರದು ಎಂದರು. ಜಿ.ಪಂ ಸದಸ್ಯ ಮಹೇಶ್‌ಒಡೆಯರ್‌ ಮಾತನಾಡಿದರು. ಗಿರಿಯಾಪುರದ ಸಿದ್ದಪ್ಪ, ಜಿ.ಪಂ ಸದಸ್ಯೆ ಲಕ್ಕಮ್ಮಸಿದ್ದಪ್ಪ, ಬೀರೂರು ಪುರಸಭಾ ಅಧ್ಯಕ್ಷೆ ಸವಿತಾರಮೇಶ್‌, ಸಾಹಿತಿ ಚಟ್ನಳ್ಳಿ ಮಹೇಶ್‌, ಸೂರಿ ಸ್ರೀನಿವಾಸ್‌, ಕೆ.ಎಂ. ಪುಟ್ಟಪ್ಪ, ಆನಂದಮೂರ್ತಿ, ಜಗದೀಶ್‌, ರತ್ನಮ್ಮ, ಗೀತಾ, ದೇವನೂರು ಅಚ್ಚುತರಾವ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ