ಆ್ಯಪ್ನಗರ

ಕಾರ್ಮಿಕರು ಸಂಘಟಿತರಾಗಲಿ

ಅಸಂಘಟಿತ ಕಾರ್ಮಿಕರನ್ನು ಸಂಘಟಿಸಿ ಅವರಿಗೆ ಸರಕಾರದಿಂದ ದೊರೆಯುವ ಸೌಲಭ್ಯ ಪಡೆಯುವ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ,ಕಾಂಗ್ರೆಸ್‌ ಮುಖಂಡ ಎ.ಎನ್‌.ಮಹೇಶ್‌ ಹೇಳಿದರು.

Vijaya Karnataka 13 Jul 2019, 5:00 am
ಚಿಕ್ಕಮಗಳೂರು : ಅಸಂಘಟಿತ ಕಾರ್ಮಿಕರನ್ನು ಸಂಘಟಿಸಿ ಅವರಿಗೆ ಸರಕಾರದಿಂದ ದೊರೆಯುವ ಸೌಲಭ್ಯ ಪಡೆಯುವ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ,ಕಾಂಗ್ರೆಸ್‌ ಮುಖಂಡ ಎ.ಎನ್‌.ಮಹೇಶ್‌ ಹೇಳಿದರು.
Vijaya Karnataka Web let workers be organized mahesh
ಕಾರ್ಮಿಕರು ಸಂಘಟಿತರಾಗಲಿ


ನಗರದ ಕಾಂಗ್ರೆಸ್‌ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪಕ್ಷದ ಅಸಂಘಟಿತ ವಿಭಾಗದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಬಡಗಿ, ಕಮ್ಮಾರ, ಕುಂಬಾರ, ದೋಬಿ, ಕ್ಷೌರಿಕ, ಚಮ್ಮಾರ, ಮೀನುಗಾರ, ಹಮಾಲಿಯಿಂದ ಹಿಡಿದು ಹೋಟೆಲ್‌ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರನ್ನು ಸಂಘಟಿಸಿ, ಅವರಿಗೆ ಸರಕಾರಗಳಿಂದ ಸಿಗುವ ಸೌಲಭ್ಯ ಕೊಡಿಸಿ, ರಾಜಕೀಯ ಪ್ರಜ್ಞೆ ಬೆಳೆಸಬೇಕು ಎಂದು ಹೇಳಿದರು.

ಕಾರ್ಮಿಕ ಮುಖಂಡ, ಜಿಲ್ಲಾ ಕಾಂಗ್ರೆಸ್‌ ವಕ್ತಾರ ಎಂ.ಸಿ ಶಿವಾನಂದಸ್ವಾಮಿ ಮಾತನಾಡಿ, ಕಾಂಗ್ರೆಸ್‌ ಪಕ್ಷ 130 ವರ್ಷದ ಹಳೆಯ ಮನೆ. ಯಾವುದಕ್ಕೆ ಹುಟ್ಟು ಇದೆಯೋ ಅದಕ್ಕೆ ಅಂತ್ಯವೂ ಇದೆ. ಆದರೆ ,ಅಂತ್ಯವನ್ನು ಕಾಣದೆ ಮುಂದುವರಿಸಲು ನಾವು ನೀವೆಲ್ಲಾ ಕಂಬಗಳಾಗಬೇಕು. ಅಧಿಕಾರದಿಂದ ದೂರ ಉಳಿದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಅವರು ಇಲ್ಲವೆಂದು ಪರಿಗಣಿಸುತ್ತಾರೆ. ಹಾಗಾಗದಿರಲು ನಾವು ಸಕ್ರೀಯವಾಗಿರಬೇಕು. ನಾವು ನೀವೆಲ್ಲಾ ದೃಢವಾದ ತೀರ್ಮಾನ ಮಾಡಿ ಕಾಂಗ್ರೆಸ್‌ ಕಟ್ಟಾಳುಗಳಾಗಬೇಕು ಎಂದು ಹೇಳಿದರು. ಅಸಂಘಟಿತ ಕಾರ್ಮಿಕರ ವಿಭಾಗದ ಜಿಲ್ಲಾ ಅಧ್ಯಕ್ಷ ರಸೂಲ್ಲಾ ಖಾನ್‌ಪ್ರಾಸ್ತಾವಿಸಿದರು.ತಾಲೂಕು ಅಧ್ಯಕ್ಷ ನಟ್ಟೇಕೆರೆನಹಳ್ಳಿ ಮೂರ್ತಿ ಸ್ವಾಗತಿಸಿ, ಚಿಕ್ಕಮಗಳೂರು ಬ್ಲಾಕ್‌ ಅಧ್ಯಕ್ಷ ಶೃದೀಪ್‌ ವಂದಿಸಿದರು. ಕಡೂರಿನ ರೇವಣ್ಣ, ತರೀಕೆರೆ ಮಲ್ಲಿಕಾರ್ಜುನ್‌, ಸಖರಾಯಪಟ್ಟಣ ಚೇತನ್‌, ಶೃಂಗೇರಿ ಶಂಕರಾಚಾರ್ಯ, ಚಿಕ್ಕಮಗಳೂರಿನ ಜೋಸೆಫ್‌, ರಿಜ್ವಾನ್‌, ಮೊಹನ್‌ ಕೋಟೆ, ಸೋಮಶೇಖರ್‌, ನವೀದ್‌ ಮತ್ತಿತರರು ಹಾಜರಿದ್ದರು.

----------
ಬಹಳಷ್ಟು ಉದ್ಯೋಗಗಳು ಇಂದು ಕಣ್ಮರೆಯಾಗುತ್ತಿವೆ. ಅಂತಹ ಉದ್ಯೋಗ ವಂಚಿತರನ್ನು ಗುರುತಿಸಿ ಮತ್ತೆ ಆ ಉದ್ಯೋಗ ಮಾಡುವಂತೆ ಸಹಕರಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಕ್ಷೌರಿಕರಿಲ್ಲದೆ ಎಲ್ಲರೂ ಕೂದಲು ಬಿಟ್ಟುಕೊಂಡು ಕರಡಿಗಳಂತೆ ಓಡಾಡಬೇಕಾಗಬಹುದು. ಯಾವುದೇ ಉದ್ಯೋಗಗಳು ಕೀಳಲ್ಲ. ಅವರವರ ಉದ್ಯೋಗ ಅವರವರಿಗೆ ಹೆಚ್ಚುಗಾರಿಕೆ ಆಗಿರಬೇಕು. ಈ ಈ ನಿಟ್ಟಿನಲ್ಲಿ ನಮ್ಮ ಪದಾಧಿಕಾರಿಗಳು ಯೋಚಿಸಿ ಕೆಲಸ ಮಾಡಬೇಕು.

-ಎ.ಎನ್‌.ಮಹೇಶ್‌,
ಕಾಂಗ್ರೆಸ್‌ ಮುಖಂಡ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ