ಆ್ಯಪ್ನಗರ

ದಿಕ್ಕುತಪ್ಪಿರುವ ಸಮಾಜಕ್ಕೆ ಸಾಹಿತ್ಯ ದಿಕ್ಸೂಚಿಯಾಗಲಿ : ನಳಿನಾ

ಸೌಹಾರ್ದತೆ ಮತ್ತು ಸಾಮರಸ್ಯತೆ ಕಳೆದುಕೊಂಡು ದಿಕ್ಕು ತಪ್ಪುತ್ತಿರುವ ಇಂದಿನ ಸಮಾಜಕ್ಕೆ ಸಾಹಿತ್ಯ ಮತ್ತು ಕಾವ್ಯ ದಿಕ್ಸೂಚಿಯಾಗಬೇಕು ಎಂದು ಲೇಖಕಿ ಡಿ.ನಳಿನಾ ಸಲಹೆ ಮಾಡಿದರು.

Vijaya Karnataka 6 Apr 2019, 5:00 am
ಚಿಕ್ಕಮಗಳೂರು : ಸೌಹಾರ್ದತೆ ಮತ್ತು ಸಾಮರಸ್ಯತೆ ಕಳೆದುಕೊಂಡು ದಿಕ್ಕು ತಪ್ಪುತ್ತಿರುವ ಇಂದಿನ ಸಮಾಜಕ್ಕೆ ಸಾಹಿತ್ಯ ಮತ್ತು ಕಾವ್ಯ ದಿಕ್ಸೂಚಿಯಾಗಬೇಕು ಎಂದು ಲೇಖಕಿ ಡಿ.ನಳಿನಾ ಸಲಹೆ ಮಾಡಿದರು.
Vijaya Karnataka Web CKM-5RUDRAP4


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನಗರದ ಕಲಾ ಸೇವಾ ಸಂಘದ ಅಧ್ಯಕ್ಷ ಕೆ.ಮೋಹನ್‌ ಅವರ ಮನೆಯಂಗಳದಲ್ಲಿ ಶುಕ್ರವಾರ ಆಯೋಜಿಸಿದ್ದ ಯುಗಾದಿ ಬಹುಭಾಷಾ ಸಮನ್ವಯ ಕವಿಗೋಷ್ಠಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಎಲ್ಲ ಭಾಷೆ ಮತ್ತು ಮನಸ್ಸುಗಳ ತುಡಿತ ಮತ್ತು ಮಿಡಿತ ಸಹಬಾಳ್ವೆ. ಇರುವ ಅಲ್ಪ ಅವಧಿಯಲ್ಲಿ ಸೌಹಾರ್ದತೆಯಿಂದ ನಗುನಗುತ್ತಾ ಬಾಳುವುದು ಎಲ್ಲರ ಆಶಯ. ಆದರೆ, ಚುನಾವಣೆ ಸೇರಿದಂತೆ ವಿವಿಧ ಸನ್ನಿವೇಶಗಳಿಂದಾಗಿ ಸಮಾಜ ಇಂದು ಅಶಾಂತಿಯ ಬೀಡಾಗಿದೆ ಎಂದು ವಿಷಾದಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್‌ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ತಾಲ್ಲೂಕು ಕಸಾಪ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ, ಕಲಾ ಸೇವಾ ಸಂಘದ ಅಧ್ಯಕ್ಷ ಕೆ.ಮೋಹನ್‌, ಗೀತಾ ಮೋಹನ್‌, ಡಾ.ಸಿ.ಕೆ.ಸುಬ್ರಾಯ ಹಾಜರಿದ್ದರು. ಹತ್ತು ವಿವಿಧ ಭಾಷೆಗಳಲ್ಲಿ ನಡೆದ ಕವನ ವಾಚನ ಸಾರ್ವಜನಿಕರ ಗಮನ ಸೆಳೆಯಿತು. ಸಾಹಿತಿಗಳಾದ ಕ್ಯಾತನಬೀಡು ರವೀಶ್‌ ಬಸಪ್ಪ, ರಮೇಶ್‌ ಬೊಂಗಾಳೆ, ಕೆ.ಮಹಮದ್‌ ಜಾಫರ್‌, ನಂದೀಶ್‌ ಬಂಕೇನಹಳ್ಳಿ, ಬಿ.ಲಕ್ಷ್ಮೀನಾರಾಯಣ, ಸುಂದರ ಬಂಗೇರ, ಬಿ.ತಿಪ್ಪೇರುದ್ರಪ್ಪ, ಲಕ್ಷ್ಮೀ ಶ್ಯಾಮರಾವ್‌, ಪಿ.ಸಾಯಿ ಅಲೇಕ್ಯ, ಕೆ.ರಾಮನಾಯಕ್‌ ಕವಿಗ್ಠೋಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಪ್ರೊ.ಕೆ.ಎನ್‌.ಲಕ್ಷ್ಮೀಕಾಂತ್‌ ಸ್ವಾಗತಿಸಿ,ತಾಲೂಕು ಕಸಾಪ ಕಾರ್ಯದರ್ಶಿ ಸುರೇಶ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ