ಆ್ಯಪ್ನಗರ

ರಾಷ್ಟ್ರೀಯ ವಿಪತ್ತಾಗಿ ಘೋಷಿಸಲಿ

ನೆರೆಪ್ರವಾಹದಿಂದ ರಾಜ್ಯದಲ್ಲಿಅಪಾರ ಪ್ರಮಾಣದ ನಷ್ಟ ಸಂಭವಿಸಿದ್ದು ಕೇಂದ್ರ ಸರಕಾರ ರಾಷ್ಟ್ರೀಯ ವಿಪತ್ತು ಎಂದು ತಕ್ಷಣವೇ ಘೋಷಿಸಲಿ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾದ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದರು.

Vijaya Karnataka 19 Sep 2019, 5:00 am
Vijaya Karnataka Web lets declare it a national disaster
ರಾಷ್ಟ್ರೀಯ ವಿಪತ್ತಾಗಿ ಘೋಷಿಸಲಿ
ಕೊಟ್ಟಿಗೆಹಾರ : ನೆರೆಪ್ರವಾಹದಿಂದ ರಾಜ್ಯದಲ್ಲಿಅಪಾರ ಪ್ರಮಾಣದ ನಷ್ಟ ಸಂಭವಿಸಿದ್ದು ಕೇಂದ್ರ ಸರಕಾರ ರಾಷ್ಟ್ರೀಯ ವಿಪತ್ತು ಎಂದು ತಕ್ಷಣವೇ ಘೋಷಿಸಲಿ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾದ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದರು.

ಬುಧವಾರ ಮೂಡಿಗೆರೆ ತಾಲೂಕಿನ ನೆರೆಪೀಡಿತ ಪ್ರದೇಶಗಳಾದ ಚನ್ನಡ್ಲು, ಬಾಳೂರು, ಮಧುಗುಂಡಿ, ಮಲೆಮನೆ ಮುಂತಾದ ಗ್ರಾಮಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು.

ದೇಶದ ಪ್ರಧಾನಿ, ಬೆಂಗಳೂರಿಗೆ ಬಂದ ಸಂದರ್ಭ ರಾಜ್ಯದ ಜನತೆ ನೆರೆಯ ಪ್ರವಾಹದಿಂದ ನಲುಗಿರುವ ಬಗ್ಗೆ ಕನಿಷ್ಟ ಸೌಲಭ್ಯದ ಮಾತನಾಡದಿರುವುದು ದುಃಖದ ಸಂಗತಿ. ಜತೆಗೆ ರಾಜ್ಯ ಸರಕಾರ ಯುದ್ಧೋಪಾದಿಯಲ್ಲಿಕಾರ್ಯಪ್ರವೃತರಾಗಿಲ್ಲ. ವಿಪತ್ತಿನಿಂದ ಜನರನ್ನು ಪಾರು ಮಾಡುವಂತ ಕಾರ್ಯಕ್ಕೆ ಆದ್ಯತೆ ನೀಡಬೇಕಿದೆ ಎಂದರು.

ರಾಜ್ಯ ರೈತ ಸಂಘದ ಜಿಲ್ಲಾದ್ಯಕ್ಷ ದುಗ್ಗಪ್ಪಗೌಡ ಮಾತನಾಡಿ, ನೆರೆಪ್ರವಾಹದಿಂದಾಗಿ ಮಲೆನಾಡು ಭಾಗದಲ್ಲಿಹಲವು ಮನೆಗಳು ನೆಲಸಮವಾಗಿದ್ದು ಕೃಷಿಭೂಮಿಗಳು ಕೊಚ್ಚಿ ಹೋಗಿವೆ. ನೆರೆ ಸಂತ್ರಸ್ತರಿಗೆ ಸರಕಾರ ಪುನರ್ವಸತಿ ಕಲ್ಪಿಸುವ ಅಗತ್ಯವಿದೆ ಎಂದರು. ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬೈರೆಗೌಡ, ರೈತಮುಖಂಡರಾದ ಹ್ಯಾರಗುಡ್ಡೆ ಸುರೇಂದ್ರ, ದಯಾಕರ, ಪೂರ್ಣೇಶ್‌, ಮಹೇಶ್‌, ನೆರೆ ಸಂತ್ರಸ್ತರಾದ ಮಲೆಮನೆಯ ಅಶ್ವತ್‌, ರಾಜು, ವಿಂದ್ಯಾರಾಜು, ಸತೀಶ್‌, ರಾಜೇಶ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ