ಆ್ಯಪ್ನಗರ

ಪಾಠದ ಜತೆಗೆ ಆಟ,ಓಟವೂ ಇರಲಿ

ಮಕ್ಕಳು ತಮ್ಮ ಭವಿಷ್ಯದ ಬದುಕನ್ನು ಉತ್ತಮಪಡಿಸಿಕೊಳ್ಳುವ ನಿಟ್ಟಿನಲ್ಲಿ ಪಠ್ಯದ ಜತೆಗೆ ಆಡುವುದು, ಓಡುವುದು, ಹಾಡುವುದು ಮತ್ತು ಮಾತನಾಡುವುದನ್ನೂ ಕಲಿಯಬೇಕು ಎಂದು ಕನ್ನಡ ಸಾಹಿತ್ಯ ಪರಿಷತಿನ ಜಿಲ್ಲಾಧ್ಯಕ್ಷ ಕುಂದೂರು ಆಶೋಕ್‌ ತಿಳಿಹೇಳಿದರು.

Vijaya Karnataka 9 May 2019, 5:00 am
ಚಿಕ್ಕಮಗಳೂರು: ಮಕ್ಕಳು ತಮ್ಮ ಭವಿಷ್ಯದ ಬದುಕನ್ನು ಉತ್ತಮಪಡಿಸಿಕೊಳ್ಳುವ ನಿಟ್ಟಿನಲ್ಲಿ ಪಠ್ಯದ ಜತೆಗೆ ಆಡುವುದು, ಓಡುವುದು, ಹಾಡುವುದು ಮತ್ತು ಮಾತನಾಡುವುದನ್ನೂ ಕಲಿಯಬೇಕು ಎಂದು ಕನ್ನಡ ಸಾಹಿತ್ಯ ಪರಿಷತಿನ ಜಿಲ್ಲಾಧ್ಯಕ್ಷ ಕುಂದೂರು ಆಶೋಕ್‌ ತಿಳಿಹೇಳಿದರು.
Vijaya Karnataka Web CKM-8rudrap5


ಭಾರತ ಸೇವಾದಳದ ಜ್ಞಾನ ಜ್ಯೋತಿ ಘಟಕದಿಂದ ನಗರದ ಆಜಾದ್‌ ಪಾರ್ಕ್‌ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಶಾಲೆಗಳು ಇತ್ತೀಚೆಗೆ ಮಕ್ಕಳನ್ನು ಕೇವಲ ಓದುವ ಮತ್ತು ಅಂಕಗಳಿಸುವ ಯಂತ್ರಗಳನ್ನಾಗಿ ಮಾತ್ರ ರೂಪಿಸುತ್ತಿವೆ. ಪಠ್ಯವನ್ನು ಓದುವುದರಿಂದ ಅಂಕಗಳಿಸಿ ಉದ್ಯೋಗವನ್ನು ಮಾತ್ರ ಗಿಟ್ಟಿಸಿಕೊಳ್ಳಬಹುದು. ಅದರೆ, ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಬದುಕನ್ನು ರೂಪಿಸಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.

ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಮತ್ತು ಮಾತನಾಡುವ ಕಲೆ ಇವುಗಳು ನಮ್ಮ ಬದುಕನ್ನು ರೂಪಿಸುತ್ತವೆ. ಸತ್ಪ್ರಜೆಯನ್ನಾಗಿ ಮಾಡುತ್ತವೆ. ಪರಿಶ್ರಮ ಇಲ್ಲದೆ ಯಾವುದು ದೊರೆಯುವುದಿಲ್ಲ. ಹಾಗಾಗಿ ಮಕ್ಕಳು ಸಾಧನೆಯ ಮೂಲಕ ಉತ್ತುಂಗಕ್ಕೇರಬೇಕು ಎಂದು ಹೇಳಿದರು. ಶಿಬಿರದ ರೂವಾರಿ ಎಸ್‌.ಈ ಲೋಕೇಶ್ವರಾಚಾರ್‌ ಅಧ್ಯಕ್ಷ ತೆ ವಹಿಸಿ ಮಾತನಾಡಿ, 20 ದಿನದ ಅವಧಿಯಲ್ಲಿ ಯೋಗ, ಪ್ರಾಣಾಯಮ, ಕ್ರೀಡೆ, ಆರೋಗ್ಯ, ನೈತಿಕ ಶಿಕ್ಷ ಣ, ಭಾವೈಕ್ಯತೆ, ದೇಶ ಭಕ್ತಿಗೀತೆ, ರಾಷ್ಟ್ರ ಗೀತೆ, ಜಾನಪದ ಗೀತೆ, ಸೇವೆ ಸೇರಿದಂತೆ ಅನೇಕ ತರಬೇತಿಗಳನ್ನು ನೀಡಲಾಗಿದೆ. ಮಕ್ಕಳು ಅವುಗಳನ್ನು ಇಲ್ಲಿಗೆ ಸೀಮಿತಗೊಳಿಸದೆ ಪ್ರತಿನಿತ್ಯ ಅಭ್ಯಾಸ ಮಾಡಬೇಕು ಎಂದು ಹೇಳಿದರು. ಶಿಬಿರಾರ್ಥಿಗಳಾದ ಸಿ.ಎಸ್‌.ಯಶಸ್ವಿನಿ, ಸಾನ್ವಿ, ತೇಜಸ್ವಿನಿ, ಲೋಹಿತ್‌, ಮಹಮ್ಮದ್‌ ಝೈನ್‌ ಶಿಬಿರದಲ್ಲಿ ತಮಗಾದ ಅನುಭವ ಹಂಚಿಕೊಂಡರು. ವಿವಿಧ ಸ್ಪರ್ಧಾ ವಿಜೇತ ಮಕ್ಕಳು ಮತ್ತು ಶಿಬಿರಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ