ಆ್ಯಪ್ನಗರ

ಮಲೆಮನೆಗೆ ಸೀಮಿತ ಸಿಎಂ ಭೇಟಿ

ಮೇಘಸ್ಫೋಟಕ್ಕೆ ತುತ್ತಾಗಿ ಸಂಪೂರ್ಣ ಕೊಚ್ಚಿಹೋದ ಮೂಡಿಗೆರೆ ತಾಲೂಕಿನ ಮಲೆಮನೆ, ಮಧುಗುಂಡಿ, ಆಲೇಕಾನ್‌ ಹೊರಟ್ಟಿ, ದುರ್ಗದಹಳ್ಳಿ, ಚನ್ನಡ್ಲುಗ್ರಾಮಗಳ ಸಂತ್ರಸ್ತರು ಮುಖ್ಯಮಂತ್ರಿ ಆಗಮನಕ್ಕೆ ಚಾತಕ ಪಕ್ಷಿಯಂತೆ ಕಾದಿದ್ದರು. ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಮಂಗಳವಾರ ಮಲೆಮನೆಗೆ ಬರುತ್ತಿದಂತೆ ನೂರಾರು ಸಂತ್ರಸ್ತರು ಕೈಮುಗಿದು ಗೋಳುತೋಡಿಕೊಂಡು ಬೇಡುತ್ತಿದ್ದ ದೃಶ್ಯ ಕಂಡುಬಂತು.

Vijaya Karnataka 28 Aug 2019, 5:00 am
ಕೊಟ್ಟಿಗೆಹಾರ (ಚಿಕ್ಕಮಗಳೂರು): ಮೇಘಸ್ಫೋಟಕ್ಕೆ ತುತ್ತಾಗಿ ಸಂಪೂರ್ಣ ಕೊಚ್ಚಿಹೋದ ಮೂಡಿಗೆರೆ ತಾಲೂಕಿನ ಮಲೆಮನೆ, ಮಧುಗುಂಡಿ, ಆಲೇಕಾನ್‌ ಹೊರಟ್ಟಿ, ದುರ್ಗದಹಳ್ಳಿ, ಚನ್ನಡ್ಲುಗ್ರಾಮಗಳ ಸಂತ್ರಸ್ತರು ಮುಖ್ಯಮಂತ್ರಿ ಆಗಮನಕ್ಕೆ ಚಾತಕ ಪಕ್ಷಿಯಂತೆ ಕಾದಿದ್ದರು. ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಮಂಗಳವಾರ ಮಲೆಮನೆಗೆ ಬರುತ್ತಿದಂತೆ ನೂರಾರು ಸಂತ್ರಸ್ತರು ಕೈಮುಗಿದು ಗೋಳುತೋಡಿಕೊಂಡು ಬೇಡುತ್ತಿದ್ದ ದೃಶ್ಯ ಕಂಡುಬಂತು.
Vijaya Karnataka Web BNG-CKM-27KTG1


ಪ್ರವಾಹದಿಂದ ಮನೆಗಳು ಕೊಚ್ಚಿ ಹೋಗಿದ್ದು ಗುಡ್ಡಗಳು ಬಾಯ್ತೆರೆದು ನಿಂತಿವೆ. ಈ ಗ್ರಾಮದಲ್ಲಿವಾಸಿಸಲು ಸಾಧ್ಯವಾಗುವಂತಿಲ್ಲಎಂದು ಗ್ರಾಮಸ್ಥರು ನೋವು ತೋಡಿಕೊಂಡರು. ಗ್ರಾಮಸ್ಥ ರಾಜುಗೌಡ ಮಾತನಾಡಿ, ಮಲೆಮನೆ ಊರಿಗೆ ಆಣಿಗುಡ್ಡ ರಕ್ಷಾಕವಚದಂತಿತ್ತು. ಇಂದು ಆ ಗುಡ್ಡವೆ ಒಡೆದು ಮನೆ, ತೋಟ ದೇವಸ್ಥಾನ ಎಲ್ಲವೂ ನೆಲಸಮವಾಗಿವೆ. ಈ ಜಾಗದಲ್ಲಿವಾಸಿಸಲು ಯೋಗ್ಯವಾಗಿಲ್ಲ. ಮೂಲಸೌಕರ್ಯವಿರುವ ಪರ್ಯಾಯ ಜಾಗವನ್ನು ಕೊಟ್ಟರೆ ಅಲ್ಲಿಬದುಕು ಕಟ್ಟಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಎದುರು ಅಳಲು ತೋಡಿಕೊಂಡರು.

ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಮೂಡಿಗೆರೆ ತಾಲೂಕಿನಲ್ಲಿಆಗಿರುವ ಅನಾಹುತ ಬೇರೆಲ್ಲೂಆಗಿಲ್ಲ. ಸಂತ್ರಸ್ತರಿಗೆ ಸೂರು ಕಲ್ಪಿಸುವುದು ನಮ್ಮ ಮೊದಲ ಆದ್ಯತೆ ಆಗಲಿದೆ. ಕೇಂದ್ರದ ನೆರವಿನೊಂದಿಗೆ ಅಭಿವೃದ್ಧಿಗೆ ಎಷ್ಟು ಹಣ ಬೇಕಾದ್ರೂ ಕೊಡಲು ಸಿದ್ಧನಿದ್ದೇನೆ ಎಂದರು.

ಈ ಗ್ರಾಮಗಳಲ್ಲಿಮನೆ ಕಳೆದುಕೊಂಡವರಿಗೆ ಸೂಕ್ತ ಜಾಗ ಒದಗಿಸಿಕೊಡುವಂತೆ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಬಗಾದಿ ಗೌತಮ್‌, ಮೂರ್ನಾಲ್ಕು ಕಡೆಗಳಲ್ಲಿಮೂಲಸೌಲಭ್ಯಗಳಿರುವ ಜಾಗ ಗುರುತಿಸಲಾಗಿದೆ. ಗ್ರಾಮಸ್ಥರಿಗೆ ಯಾವುದು ಸೂಕ್ತವೆನಿಸುತ್ತದೋ ಆ ಜಾಗಕ್ಕೆ ಸ್ಥಳಾಂತರಿಸಲಾಗುವುದು ಎಂದರು.
---------
ಸಿಎಂ ಮುಂದೆ ಸಂತ್ರಸ್ತನ ರೋದನ

ಮಲೆಮನೆ ಸಮೀಪದ ಮೇಗೂರಿನ ಜಯಂತ್‌ ಅವರು, ಸಿಎಂ ಎದುರು ಅಳಲು ತೋಡಿಕೊಂಡದ್ದು, ಸ್ಥಳದಲ್ಲಿದ್ದ ಎಲ್ಲರ ಮನಕರಗುವಂತಿತ್ತು. ನಮ್ಮ ಊರಿಗೆ ಇಲ್ಲಿವರೆಗೆ ಯಾವ ಅಧಿಕಾರಿಗಳೂ ಬಂದಿಲ್ಲ. ನಮ್ಮ ಗ್ರಾಮದಲ್ಲಿಹತ್ತಕ್ಕೂ ಹೆಚ್ಚು ಮನೆಗಳು ಹಾನಿಯಾಗಿವೆ. ಗ್ರಾಮ ಸಂಪರ್ಕ ರಸ್ತೆಯೆ ಕೊಚ್ಚಿ ಹೋಗಿದೆ. ಗ್ರಾಮಕ್ಕೆ ಕಿಂಚಿತ್ತೂ ಪರಿಹಾರ ಸಾಮಾಗ್ರಿ ಬಂದಿಲ್ಲ. ಬಂದವರೆಲ್ಲಾಮಲೆಮನೆಗೆ ಮಾತ್ರ ಭೇಟಿ ನೀಡಿ ಹಿಂದಿರುಗುತ್ತಿದ್ದಾರೆ ಎಂದು ರೋದಿಸಿದರು. ಆ ಕ್ಷಣಕ್ಕೆ ಏನೂ ತೋಚದಂತಾದ ಸಿಎಂ ಯಡಿಯೂರಪ್ಪ ಮೌನಕ್ಕೆ ಶರಣಾದರು. '' ಇದೇ ಥರ ಬೇರೆ ಕಡೆಯೂ ಆಗಿದೆ ಬಿಡಪ್ಪ,'' ಎಂದು ಸಂಸದೆ ಶೋಭಾ ಕರಂದ್ಲಾಜೆ ಹಾರಿಕೆ ಉತ್ತರ ನೀಡಿದರು.
----------

ಹತ್ತೆ ನಿಮಿಷದಲ್ಲಿಮುಗಿದ ಪ್ರವಾಸ

ಸಿಎಂ ಯಡಿಯೂರಪ್ಪ ಮತ್ತು ತಂಡದವರು ಮಲೆಮನೆಗೆ ಭೇಟಿ ನೀಡಿದ್ದರಾದರೂ ಕೇವಲ ಹತ್ತೇ ನಿಮಿಷದಲ್ಲಿನೆರೆ ಪ್ರವಾಸ ಮುಗಿಸಿ ಹಿಂದಿರುಗಿದರು. ನೆರೆಯಿಂದ ಗುಡ್ಡ ಕುಸಿದು ಮನೆ ನೆಲಸಮವಾದ ಸ್ಥಳಕ್ಕೂ ಹೋಗದೇ ದೂರದಲ್ಲೆನಿಂತು ವೀಕ್ಷಣೆ ಮಾಡಿ ಬೆಂಗಳೂರಿನತ್ತ ಹಿಂದಿರುಗಿದರು. ತೀವ್ರ ಹಾನಿಗೊಂಡ ಮಧುಗುಂಡಿ, ದುರ್ಗದಹಳ್ಳಿ ಮತ್ತಿತರ ಗ್ರಾಮಕ್ಕೆ ಸಿಎಂ ಬರುತ್ತಾರೆಂದು ನಿರಾಶ್ರಿತರು ಕಾದು ಕುಳಿತಿದ್ದರು. ತುರ್ತು ಕೆಲಸದ ನೆಪವೊಡ್ಡಿ ಸಿಎಂ ಒಂದೇ ಗ್ರಾಮದಲ್ಲಿವೀಕ್ಷಣೆ ಮಾಡಿ ಹಿಂತಿರುಗಿದ್ದಕ್ಕೆ ಗ್ರಾಮಸ್ಥರು ಸಿಎಂ ವಿರುದ್ಧ ಅಸಮಾಧಾನಗೊಂಡದ್ದು ಕಂಡುಬಂತು. ಮುಖ್ಯಮಂತ್ರಿಯವರು ಮಧುಗುಂಡಿ ಗ್ರಾಮಕ್ಕೆ ಬರುತ್ತಾರೆಂದು ಪೊಲೀಸ್‌ ಇಲಾಖೆ ಆ ಗ್ರಾಮದಲ್ಲಿಬಂದೋಬಸ್‌್ತ ವ್ಯವಸ್ಥೆ ಮಾಡಿತ್ತು. ಇದನ್ನು ನಂಬಿದ ಗ್ರಾಮಸ್ಥರು ಎಲ್ಲಕೆಲಸ ಬದಿಗೊತ್ತಿ ಸಿಎಂ ಭೇಟಿಗೆ ಕಾದುಕುಳಿತಿದ್ದರು. ಆದರೆ, ಬಳಿಕ ಸಿಎಂ ಬರದಿರುವುದು ಖಾತ್ರಿಯಾಗುತ್ತಿದ್ದಂತೇ ಗೊಣಗುತ್ತಾ ತಮ್ಮ ಕೆಲಸಗಳಿಗೆ ತೆರಳಿದರು.

--------

ಸಂಸದರಿಗೆ ಮಾತ್ರ ಚಾರ್ಮಾಡಿ ಪಯಣ

ಮುಖ್ಯಮಂತ್ರಿ ಯಡಿಯೂರಪ್ಪ ಮಲೆಮನೆ ಗ್ರಾಮಕ್ಕೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿಅಲ್ಲಿಗೆ ಬಂದಿದ್ದ ಸಂಸದೆ ಶೋಭಾ ಕರಂದ್ಲಾಜೆ ಅವರು ಹಿಂದಿರುಗುವ ವೇಳೆ ಚಾರ್ಮಾಡಿ ಘಾಟ್‌ ಮೂಲಕ ಪ್ರಯಾಣಿಸಿರುವುದು ಸಾರ್ವಜನಿಕ ವಲಯದಲ್ಲಿತೀವ್ರ ಚರ್ಚೆಗೆ ಕಾರಣವಾಗಿದೆ. ಇತ್ತೀಚಿನ ಬಾರಿ ಮಳೆಗೆ ಚಾರ್ಮಾಡಿ ಘಾಟ್‌ನ ಹೆದ್ದಾರಿಯಲ್ಲಿಅಲ್ಲಲ್ಲಿಗುಡ್ಡ ಕುಸಿದಿದ್ದು, ವಾಹನ ಸಂಚಾರ ಸಂಪೂರ್ಣ ನಿಷೇಧಿಸಿ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ. ಇದರ ನಡುವೆಯೂ ಕೂಡ ಸಂಸದೆ ಶೋಭಾ ಕರಂದ್ಲಾಜೆ ಮಾತ್ರ ಘಾಟ್‌ನಲ್ಲಿಪ್ರಯಾಣಿಸಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದುದು ಕಂಡುಬಂತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ