ಚಿಕ್ಕಮಗಳೂರು :ಮನಸ್ಸಿನ ಒತ್ತಡ ನಿವಾರಣೆಗೆ ಸಾಹಿತ್ಯ ಮತ್ತು ಸಂಗೀತ ಸಹಕಾರಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕುಂದೂರು ಅಶೋಕ್ ಹೇಳಿದರು.
ಸ್ವರ ಮಾಧುರ್ಯ ಸುಗಮ ಸಂಗೀತ ಸಂಘ ನಗರದ ಶಂಕರಮಠದ ಪ್ರವಚನ ಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಸುಗಮ ಸಂಗೀತ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಸಂಗೀತ ಮನಸ್ಸಿನ ರೆಕ್ಕೆ, ವಿಶ್ವದ ಆತ್ಮ, ಸಾಹಿತ್ಯ ಮನುಷ್ಯನಿಗೆ ಜ್ಞಾನವನ್ನು ನೀಡಿದರೆ,ಸಂಗೀತ ಅವನ ಮನಸ್ಸನ್ನು ಉಲ್ಲಸಿತಗೊಳಿಸಿ ಆನಂದ ನೀಡುತ್ತದೆ. ಸಂಗೀತಕ್ಕೆ ಮನಸ್ಸನ್ನು ತಟ್ಟುವ ಶಕ್ತಿ ಇದೆ. ಅದನ್ನು ಹಾಡುವುದರಿಂದ ಅಥವಾ ಕೇಳುವುದರಿಂದ ಮಾನಸಿಕ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷ ಎಸ್.ಎಸ್.ವೆಂಕಟೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸುಗಮ ಸಂಗೀತಕ್ಕೆ ಇಂದು ಹೆಚ್ಚಿನ ಪ್ರಾಮುಖ್ಯತೆ ಇದೆ. ಆ ಕ್ಷೇತ್ರದಲ್ಲೂ ಬೆಳೆಯಲು ವಿಪುಲ ಅವಕಾಶಗಳಿವೆ. ಶಿಬಿರದಲ್ಲಿ ಪಾಲ್ಗೊಂಡಿರುವ ಮಕ್ಕಳು ಶ್ರದ್ಧೆಯಿಂದ ಸುಗಮ ಸಂಗೀತ ಕಲಿಯುವ ಮೂಲಕ ಉತ್ತಮ ಗಾಯಕರಾಗಿ ಹೊರಹೊಮ್ಮಬೇಕು ಎಂದು ಹೇಳಿದರು.
ಸಂಘದ ಅಧ್ಯಕ್ಷ ಜಿ.ಬಿ.ಸುರೇಶ್ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸುಗಮ ಸಂಗೀತ ಕಲಿಸುವುದರ ಜತೆಗೆ ಅವರ ಗಾಯನಕ್ಕೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಮೂರು ದಿನ ಭಾವಗೀತೆ, ಭಕ್ತಿಗೀತೆ ಮತ್ತು ದೇಶಭಕ್ತಿ ಗೀತೆಗಳನ್ನು ಕಲಿಸಲಾಗುವುದು ಎಂದರು. ಇದೇ ವೇಳೆ ಬಿಳಗಳಿ ನಾಗರಾಜ್ ಅವರಿಂದ ಕೊಳಲು ವಾದನ ನಡೆಯಿತು. ಸಂಗೀತ ಶಿಕ್ಷ ಕ ಜಯಣ್ಣ, ಜ್ಞಾನಮೂರ್ತಿ ಹಾಜರಿದ್ದರು. ಸುಕನ್ಯ ನಿರೂಪಿಸಿದರು. ಸುಜಾತ ಸ್ವಾಗತಿಸಿ, ಸಂಗೀತ ವಂದಿಸಿದರು.
ಸ್ವರ ಮಾಧುರ್ಯ ಸುಗಮ ಸಂಗೀತ ಸಂಘ ನಗರದ ಶಂಕರಮಠದ ಪ್ರವಚನ ಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಸುಗಮ ಸಂಗೀತ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಸಂಗೀತ ಮನಸ್ಸಿನ ರೆಕ್ಕೆ, ವಿಶ್ವದ ಆತ್ಮ, ಸಾಹಿತ್ಯ ಮನುಷ್ಯನಿಗೆ ಜ್ಞಾನವನ್ನು ನೀಡಿದರೆ,ಸಂಗೀತ ಅವನ ಮನಸ್ಸನ್ನು ಉಲ್ಲಸಿತಗೊಳಿಸಿ ಆನಂದ ನೀಡುತ್ತದೆ. ಸಂಗೀತಕ್ಕೆ ಮನಸ್ಸನ್ನು ತಟ್ಟುವ ಶಕ್ತಿ ಇದೆ. ಅದನ್ನು ಹಾಡುವುದರಿಂದ ಅಥವಾ ಕೇಳುವುದರಿಂದ ಮಾನಸಿಕ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷ ಎಸ್.ಎಸ್.ವೆಂಕಟೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸುಗಮ ಸಂಗೀತಕ್ಕೆ ಇಂದು ಹೆಚ್ಚಿನ ಪ್ರಾಮುಖ್ಯತೆ ಇದೆ. ಆ ಕ್ಷೇತ್ರದಲ್ಲೂ ಬೆಳೆಯಲು ವಿಪುಲ ಅವಕಾಶಗಳಿವೆ. ಶಿಬಿರದಲ್ಲಿ ಪಾಲ್ಗೊಂಡಿರುವ ಮಕ್ಕಳು ಶ್ರದ್ಧೆಯಿಂದ ಸುಗಮ ಸಂಗೀತ ಕಲಿಯುವ ಮೂಲಕ ಉತ್ತಮ ಗಾಯಕರಾಗಿ ಹೊರಹೊಮ್ಮಬೇಕು ಎಂದು ಹೇಳಿದರು.
ಸಂಘದ ಅಧ್ಯಕ್ಷ ಜಿ.ಬಿ.ಸುರೇಶ್ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸುಗಮ ಸಂಗೀತ ಕಲಿಸುವುದರ ಜತೆಗೆ ಅವರ ಗಾಯನಕ್ಕೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಮೂರು ದಿನ ಭಾವಗೀತೆ, ಭಕ್ತಿಗೀತೆ ಮತ್ತು ದೇಶಭಕ್ತಿ ಗೀತೆಗಳನ್ನು ಕಲಿಸಲಾಗುವುದು ಎಂದರು. ಇದೇ ವೇಳೆ ಬಿಳಗಳಿ ನಾಗರಾಜ್ ಅವರಿಂದ ಕೊಳಲು ವಾದನ ನಡೆಯಿತು. ಸಂಗೀತ ಶಿಕ್ಷ ಕ ಜಯಣ್ಣ, ಜ್ಞಾನಮೂರ್ತಿ ಹಾಜರಿದ್ದರು. ಸುಕನ್ಯ ನಿರೂಪಿಸಿದರು. ಸುಜಾತ ಸ್ವಾಗತಿಸಿ, ಸಂಗೀತ ವಂದಿಸಿದರು.