ಆ್ಯಪ್ನಗರ

ಸಾಹಿತ್ಯ ಹಾಡಾದಾಗ ಚೈತನ್ಯ ಸ್ವರೂಪಿ

ಅಧುನಿಕ ಬದುಕಿನ ಶ್ಯೆಲಿಯಲ್ಲಿ ಜಾನಪದ, ಸುಗಮ ಸಂಗೀತ ಕ್ಷೇತ್ರವು ತನ್ನದೇ ಆದ ಅಸ್ತಿತ್ವವನ್ನು ಉಳಿಸಿಕೊಂಡು ಬೆಳವಣಿಗೆ ಸಾಧಿಸುತ್ತಿದೆ ಎಂದು ಎಂದು ವೃತ್ತ ನಿರೀಕ್ಷ ಕ ಪ್ರಮೋದ್‌ ಕುಮಾರ್‌ ಹೇಳಿದರು.

Vijaya Karnataka 30 Nov 2018, 5:00 am
ಶೃಂಗೇರಿ: ಅಧುನಿಕ ಬದುಕಿನ ಶ್ಯೆಲಿಯಲ್ಲಿ ಜಾನಪದ, ಸುಗಮ ಸಂಗೀತ ಕ್ಷೇತ್ರವು ತನ್ನದೇ ಆದ ಅಸ್ತಿತ್ವವನ್ನು ಉಳಿಸಿಕೊಂಡು ಬೆಳವಣಿಗೆ ಸಾಧಿಸುತ್ತಿದೆ ಎಂದು ಎಂದು ವೃತ್ತ ನಿರೀಕ್ಷ ಕ ಪ್ರಮೋದ್‌ ಕುಮಾರ್‌ ಹೇಳಿದರು.
Vijaya Karnataka Web literature is a self respecting song
ಸಾಹಿತ್ಯ ಹಾಡಾದಾಗ ಚೈತನ್ಯ ಸ್ವರೂಪಿ


ಜೇಸಿ ಶಾಲೆಯಲ್ಲಿ ಬುಧವಾರ ಗಾನಸಿರಿ ಮ್ಯುಸಿಕಲ್ಸ್‌ ಅಯೋಜಿಸಿದ್ದ ತಾಲೂಕು ಮಟ್ಟದ ಭಾವಗೀತೆ ಸ್ಪಧæರ್‍ಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಕವಿಯ ಅಂತರಾಳದ ಮೂಲಕ ಹೊರಹೊಮ್ಮುವ ಸಾಹಿತ್ಯ ಸುಮಧುರ ಕೊರಳಿನ ಮೂಲಕ ಹಾಡಿದಾಗ ಮನಸ್ಸಿಗೆ ಚೈತನ್ಯ ಉಂಟಾಗುತ್ತದೆ. ಮಾನಸಿಕ ಆರೋಗ್ಯಕ್ಕೆ ಸಂಗೀತ ದಿವ್ಯ ಜೌಷಧ. ಮನಸ್ಸನ್ನು ಮುದಗೊಳಿಸುವ ಸಂಗೀತ, ಸಾಂಸ್ಕೃತಿಕ ಮೌಲ್ಯಗಳ ಬೆಳವಣಿಗೆಗೆ ಪೂರಕವಾಗಿದೆ. ಶಾಸ್ತ್ರೀಯ ಸಂಗೀತ, ಜನಪದ ಗೀತೆÜ, ಭಾವಗೀತೆ ಮೊದಲಾದ ಗೀತೆಯಲ್ಲಿ ಪರಿಮೂಡಿಬರುವ ನಾದ, ಲಯ, ಮನಸ್ಸು ಮತ್ತು ಹೃದಯವನ್ನು ಮುಟ್ಟುವಲ್ಲಿ ಯಶಸ್ಸು ಗಳಿಸುತ್ತದೆ. ಭಾವಗೀತೆಯ ಸಂಗೀತ ಮನಸ್ಸನ್ನು ಮುಟ್ಟಬೇಕು. ಅದರ ಸಾಹಿತ್ಯ ನಮ್ಮೊಳಗಿನ ನೋವಿಗೆ ಧ್ವನಿಯಾಗಬೇಕು ಎಂದರು.

ಗಾನಸಿರಿ ಮ್ಯುಸಿಕಲ್ಸ್‌ನ ಅಧ್ಯಕ್ಷ ಹೆಗ್ಗದ್ದೆ ಶಿವಾನಂದ ರಾವ್‌ ಮಾತನಾಡಿ, ನಾವು ಮಾಡಿದ ಕಾರ್ಯದ ಕುರಿತು ಆತ್ಮಾವಲೋಕನ ಮಾಡಬೇಕು. ಸಮಾಜಕ್ಕೆ ಒಳಿತನ್ನು ನೀಡುವ ಕಾರ್ಯ ನಾವು ನಿರಂತರವಾಗಿ ಮಾಡಬೇಕು ಎಂದರು.

ಡಾ.ಲಕ್ಷ್ಮೀನಾರಯಣ್‌ ಅಧ್ಯಕ್ಷ ತೆ ವಹಿಸಿ ಮಾತನಾಡಿ, ವೇದಗಳ ಕಾಲದಿಂದಲೂ ಸಂಗೀತ ಅತ್ಯಂತ ಪ್ರಾಧಾನ್ಯ ಪಡೆದಿದೆ. ವೇದಗಳಲ್ಲಿ ಸಾಮವೇದ ಸಂಗೀತ ಪ್ರಧಾನವಾದದ್ದು. ಒಬ್ಬ ಕಲಾವಿದ ಚಿತ್ರ ಬಿಡಿಸುವಾಗ, ಮತ್ತೊಬ್ಬ ಸುಮಧುರ ಕಂಠದಿಂದ ಹಾಡುವಾಗ ಅಂತರಂಗಕ್ಕೆ ಸಿಗುವ ತೃಪ್ತಿ ಆಗಾಧವಾದುದು ಎಂದರು.

ಜ್ಞಾನ ಭಾರತೀ ವಿದ್ಯಾ ಕೇಂದ್ರದ ಶರಧಿ ಪ್ರಥಮ ಬಹುಮಾನ ಪಡೆದರು. ಮುಖ್ಯ ಶಿಕ್ಷ ಕ ಶಿವಕುಮಾರ್‌, ಜಾನಪದ ಸಾಹಿತ್ಯ ಪರಿಷತ್‌ ಕಾರ್ಯದರ್ಶಿ ಮೋಹನ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ